BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್
  • ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ
  • ೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ
  • ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ
  • ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ
  • ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ
  • ೨೦೨೭ಕ್ಕೆ ಎತ್ತಿನಹೊಳೆ ಕಾಮಗಾರಿ ಪೂರ್ಣ: ಪರಂ
  • ಐದು ಜನರ ಮೇಲೆ ಚಿರತೆ ದಾಳಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಡಿ.6 : ದುರಾಡಳಿತದ ವಿರುದ್ಧ ಬೃಹತ್ ಐಕ್ಯತಾ ಸಮಾವೇಶ
ಇತರೆ ಸುದ್ಧಿಗಳು

ಡಿ.6 : ದುರಾಡಳಿತದ ವಿರುದ್ಧ ಬೃಹತ್ ಐಕ್ಯತಾ ಸಮಾವೇಶ

By News Desk BenkiyabaleUpdated:December 01, 2022 4:23 pm

ತುಮಕೂರು


ಬಾಬಾ ಸಾಹೇಭ್ ಡಾ.ಬಿ.ಆರ್.ಅಂಬೇಡ್ಕರ್‍ರವರ 66ನೇ ಪರಿನಿಬ್ಬಾಣದ ದಿನದ ಅಂಗವಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಆಶಯಗಳನ್ನು ನಾಶಮಾಡುತ್ತಿರುವ ಆರ್‍ಎಸ್‍ಎಸ್-ಬಿಜೆಪಿ ದುರಾಡಳಿತದ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕøತಿಕ ಪ್ರತಿರೋಧ ವ್ಯಕ್ತಪಡಿಸಲು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಡಿಸೆಂಬರ್6ರಂದುಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಿರಿಯ ಮುಖಂಡರು ಹಾಗೂ ಚಿಂತಕ ಕೆ.ದೊರೈರಾಜ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಈ ಸಂದರ್ಭದಲ್ಲಿ, ದೇಶ ಎಲ್ಲಾ ರಂಗಗಳಲ್ಲೂ ಅಧಃಪತನದತ್ತ ಸಾಗುತ್ತಿರುವುದನ್ನು ನಾವೆಲ್ಲಾ ಗಮನಿಸುತ್ತಿದ್ದೇವೆ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ. ನಿರುದ್ಯೋಗ ಯುವಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ನ್ಯಾಯ ಕೇಳುವವರು ದೇಶ ದ್ರೋಹಿಗಳಾಗುತ್ತಿದ್ದಾರೆ. ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಸಮ ಸಮಾಜದ ಕನಸು ಬಿತ್ತಿದ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ, ಕೋಮು ವಿಷದ ಗೋಡ್ಸೆ, ಸಾವರ್ಕಗಳು ಮುನ್ನೆಲೆಗೆ ಬರುತ್ತಿದ್ದಾರೆ. ಇಡೀ ದೇಶ ಕೋಮು ನಂಜಿನ ಮಾಯಾಜಾಲದೊಳಗೆ ಸಿಲುಕಿ ಮತಿ ಭ್ರಮಣೆಗೊಳಗಾದಂತೆ ವರ್ತಿಸುತ್ತಿವೆ ಎಂದು ಹೇಳಿದರು.
ಬಿಜೆಪಿ ಸರ್ಕಾರವೇ ನೇರವಾಗಿ ಸರ್ಕಾರಿ ಮತ್ತು ಸಹಕಾರಿ ಕ್ಷೇತ್ರದ ಉದ್ದಿಮೆಗಳನ್ನು, ಹಾಗೂ ಸಾರ್ವಜನಿಕ ಆಸ್ತಿಗಳನ್ನೆಲ್ಲ ಕಾಪೆರ್Çರೇಟ್ ಕಂಪನಿಗಳಿಗೆ ಒಪ್ಪಿಸುತ್ತಾ ಮೀಸಲಾತಿಯ ಅಸ್ತಿತ್ವವನ್ನೇ ನಾಶಗೊಳಿಸಿ ಇನ್ನೊಂದೆಡೆ ಮೀಸಲಾತಿ ಹೆಚ್ಚಳದ ನಾಟಕವನ್ನೂ ಆಡಿ ಜನರನ್ನು ಮರಳು ಮಾಡುತ್ತಿದೆ. ಶಿಕ್ಷಣ ಹಾಗೂ ಆರೋಗ್ಯದಂತಹ ಸಾರ್ವಜನಿಕ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡಲಾಗಿದೆ. ಈಗ ಈ ದುಷ್ಟ ಸಂಘ ಪರಿವಾರ ಮತ್ತು ಕ್ರೂರ ಕಾಪೆರ್Çರೇಟ್ ಪರಿವಾರ ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ತನ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನೆಲ್ಲ ಕೈ ಬಿಡುತ್ತಿವೆ. ದಲಿತ ಮಕ್ಕಳಿಗೆ ನೀಡುತ್ತಿದ್ದ ಸ್ಕಾಲರ್‍ಶಿಪ್ ಹಣವನ್ನೂ ನಿಲ್ಲಿಸಲಾಗಿದೆ. ಶಾಲಾ ಪಠ್ಯಗಳನ್ನು ತಿದ್ದುವ ಮೂಲಕ ಮುಗ್ಧ ಮಕ್ಕಳ ಮನಸ್ಸಿಗೆ ಬಾಲ್ಯದಲ್ಲೇ ಕೋಮು ವಿಷವನ್ನು ತುಂಬಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸಾಧಿಸುತ್ತಿದೆ. ಜನರನ್ನು ಜಾಗೃತಗೊಳಿಸಿ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಜನಪರ ಚಳುವಳಿಗಳು ದುರ್ಬಲಗೊಂಡಂತೆ ಕಾಣಿಸುತ್ತಿದೆ. ಇದರ ಪರಿಣಾಮವಾಗಿ ಇಲ್ಲಿನ ದುಡಿಯುವ ಜನಸಮುದಾಯಗಳಾದ ದಲಿತ, ರೈತ, ಕಾರ್ಮಿಕ, ಮಹಿಳಾ ಹಾಗೂ
ಆದಿವಾಸಿ-ಬುಡಕಟ್ಟು ಜನ ಸಮುದಾಯಗಳು ಹಸಿವು, ಅಸ್ಪಶ್ಯತೆ, ಅನಕ್ಷರತೆ, ಕೊಲೆ ಸುಲಿಗೆ, ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಸಾವು ನೋವುಗಳಿಂದ ನರಳುವಂತಾಗಿದೆ ಎಂದು ತಿಳಿಸಿದರು.
ಅವೈಜ್ಞಾನಿಕವಾದ ನೋಟು ಅಮಾನ್ವಿಕರಣದಿಂದ ದೇಶದ ಅರ್ಥ ವ್ಯವಸ್ಥೆಯೇ ಕುಸಿದು ಬಿದ್ದಿದ್ದು ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ನಿರುದ್ಯೋಗ, ಬಡತನ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರ ಏರುಗತಿಯಲ್ಲಿ ಸಾಗಿ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಜಿಎಸ್ಟಿಯಂತಹ ಜನ ವಿರೋಧಿ ತೆರಿಗೆ ನೀತಿಯನ್ನು ಜಾರಿಗೆ ತಂದು ಕೂಲಿಕಾರರು, ಬಡವರು ಭಿಕ್ಷುಕರನ್ನೂ ಸುಲಿಯಲಾಗುತ್ತಿದೆ. ದಲಿತರು, ದುರ್ಬಲರು, ರೈತರು, ಕುಶಲಕರ್ಮಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನೂ ನಿಲ್ಲಿಸಿ ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾದ ಕಾಪೆರ್Çರೇಟ್ ಕುಳಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ದಲಿತ ದಮನಿತ ತಳ ಸಮುದಾಯಗಳ ಶೈಕ್ಷಣಿಕ ಅವಕಾಶಗಳನ್ನೂ ಕಸಿದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಯಲ್ಲಿ ದಲಿತ ಹಿರಿಯ ಮುಖಂಡ ಕುಂದೂರು ತಿಮ್ಮಯ್ಯ, ಬೆಲ್ಲದಮಡು ಕೃಷ್ಣಪ್ಪ, ಡಾ||ಮುರಳೀಧರ್, ಶಿವಶಂಕರ್ ಕುಣಿಗಲ್, ಚೇಳೂರು ವೆಂಕಟೇಶ್, ಗಂಗಮ್ಮ ಕೆಂಪಯ್ಯ, ಭರತ್‍ಕುಮಾರ್, ನರಸಿಂಯ್ಯ, ಕೊಟ್ಟಶಂಕರ್ ಮುಂತಾದವರಿದ್ದರು.

(Visited 1 times, 1 visits today)
tumkur
Previous Articleಸಂವಹನವೆ ಭಾಷೆಯ ಮೂಲ ಉದ್ದೇಶ:ತಮಿಳ್ ಸೆಲ್ವಿ
Next Article ಪಂಚಯೋಜನೆಗಳೊಂದಿಗೆ ಪಂಚರತ್ನ ಯಾತ್ರೆ
News Desk Benkiyabale

Related Posts

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm ಇತರೆ ಸುದ್ಧಿಗಳು

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm ಇತರೆ ಸುದ್ಧಿಗಳು

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm
ಇತರೆ ಸುದ್ಧಿಗಳು

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm
ಇತರೆ ಸುದ್ಧಿಗಳು

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm
ಇತರೆ ಸುದ್ಧಿಗಳು

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ

August 01, 2025 1:33 pm
ತುಮಕೂರು

ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ

July 31, 2025 2:59 pm

ಹದಿಹರೆಯದ ವಯಸ್ಸಿನಲ್ಲಿ ತುಂಬಾ ಎಚ್ಚರಿಕೆ ಇರಲಿ

July 31, 2025 2:57 pm
Our Youtube Channel
Our Picks

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

August 01, 2025 1:37 pm

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ

August 01, 2025 1:33 pm

ಮಕ್ಕಳಲ್ಲಿ ದಂತಗಳ ಸಂರಕ್ಷಣೆ ಬಗ್ಗೆ ಜಾಗೃತಿ ಅತ್ಯಗತ್ಯ

July 31, 2025 2:00 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಮತ್ತೊಮ್ಮೆ ಸಿಎಂ ಪಟ್ಟಣಕ್ಕೆ: ಶಾಸಕ ಎಚ್.ವಿ. ವೆಂಕಟೇಶ್

By News Desk BenkiyabaleAugust 01, 2025 1:37 pm

ಪಾವಗಡ: ಚುನಾವಣಾ ಸಮಯದಲ್ಲಿ ಭರವಸೇ ನೀಡಿದ್ದು ಅದರಂತೆ ಪಾವಗಡ ಪಟ್ಟಣವನ್ನು ೨೦ ಕೋಟಿ ವೆಚ್ಚದಲ್ಲಿ ೨೩ ವಾರ್ಡ ಗಳ ಮೂಲ…

ನಗರಾಭಿವೃದ್ಧಿಗೆ ಸ್ಲಂ ನಲ್ಲಿರುವ ಬಡವರ ಕೊಡುಗೆ ಅಪಾರ: ಶಾಸಕ ಜ್ಯೋತಿ ಗಣೇಶ್ ಹೇಳಿಕೆ

August 01, 2025 1:36 pm

೫ ಜನರಿಗೆ ದಾಳಿ ನೆಡೆಸಿದ್ದ ಚಿರತೆ ಬುಧವಾರ ರಾತ್ರಿ ಸೆರೆ

August 01, 2025 1:35 pm

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಎಸ್‌ಪಿ

August 01, 2025 1:33 pm
News by Date
August 2025
M T W T F S S
 123
45678910
11121314151617
18192021222324
25262728293031
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.