BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ
  • ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ
  • ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ
  • ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ
  • ಡಿ.೧೩: ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡದ ಉದ್ಘಾಟನೆ
  • ಪತ್ರಿಕಾ ವೃತ್ತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಗೌರವ ನೀಡುತ್ತದೆ: ಶಾಸಕ
  • ೩೨೫ ಬಾಲ ಗರ್ಭಿಣಿ ಪ್ರಕರಣ ನ್ಯಾಯಾಲಯ ಹಂತದಲ್ಲಿ ದಾಖಲು
  • ಜನ ಕೊಟ್ಟ ಅಧಿಕಾರ ಶಾಶ್ವತವಲ್ಲ ನಾವು ಮಾಡಿದ ಕೆಲಸಗಳು ಶಾಶ್ವತ: ಶಾಸಕ ಸಿ. ಬಿ. ಸುರೇಶ್ ಬಾಬು ಹೇಳಿಕೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜ.10 : ಮಾಡು, ಇಲ್ಲವೆ ಮಡಿ ಹೋರಾಟ : ಇಮ್ಮಡಿ ಸಿದ್ದರಾಮೇಶ್ವರಮಹಾಸ್ವಾಮೀಜಿ ಕರೆ
ಇತರೆ ಸುದ್ಧಿಗಳು

ಜ.10 : ಮಾಡು, ಇಲ್ಲವೆ ಮಡಿ ಹೋರಾಟ : ಇಮ್ಮಡಿ ಸಿದ್ದರಾಮೇಶ್ವರಮಹಾಸ್ವಾಮೀಜಿ ಕರೆ

By News Desk BenkiyabaleUpdated:December 26, 2022 4:50 pm

ತುಮಕೂರು


ಪರಿಶಿಷ್ಟ ಜಾತಿಯ ಶೇ 99 ಜಾತಿಗಳಿಗೆ ಮರಣ ಶಾಸನವಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಯಥಾವತ್ತು ಜಾರಿಗೆ ವಿರೋಧಿಸಿ ಮಾಡು,ಇಲ್ಲವೆ ಮಡಿ ಹೋರಾಟವನ್ನು ಮೀಸಲಾತಿ ಸಂರಕ್ಷಣಾ ವೇದಿಕೆ ವತಿಯಿಂದ 2023 ರ ಜನವರಿ 10 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ಬು ಹಮ್ಮಿಕೊಂಡಿದ್ದು, ಮೀಸಲಾತಿ ಪಡೆಯುತ್ತಿರುವ ಎಲ್ಲಾ ಜಾತಿಗಳ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರಮಹಾಸ್ವಾಮೀಜಿ ಕರೆ ನೀಡಿದ್ದಾರೆ
ನಗರದ ಭೋವಿ ಹಾಸ್ಟಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಕೊರಮ, ಕೊರಚ, ಲಂಬಾಣಿ,ಬೋವಿ ಸಮುದಾಯಗಳಿಗೆ ಶಾಪಗ್ರಸ್ತವಾಗಿರುವ ಸಂವಿಧಾನ ಬಾಹಿರ ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು,ಹಾಗೆಯೇ ವರದಿಯನ್ನು ಬಹಿರಂಗ ಚರ್ಚೆಗೆ ತಂದು ಅದರ ಸಾಧಕ, ಭಾದಕಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸರಕಾರದ ಅಂಕಿ ಅಂಶಗಳೇ ನೀಡಿರುವಂತೆ ಕಳೆದ 73 ವರ್ಷಗಳ ಮೀಸಲಾತಿಯಿಂದ ಪರಿಶಿಷ್ಟ ಜಾತಿಗಳು ಶೇ11ರಷ್ಟು ಬೆಳವಣಿಗೆ ಹೊಂದಬೇಕಿತ್ತು.ಆದರೆ ಅಭಿವೃದ್ದಿಯಾಗಿರುವುದು ಕೇವಲ ಶೇ03ರಷ್ಟು ಮಾತ್ರ. ಪರಿಸ್ಥಿತಿ ಹೀಗಿರುವಾಗ ಇನ್ನೂ ಮೀಸಲಾತಿಯಿಂದಲೇ ಹೊರಗಿಟ್ಟರೆ ನಮ್ಮ ಪಾಡು ಏನಾಗಬಹುದು ಎಂಬುದನ್ನು ನಾವೆಲ್ಲರೂ ಅಲೋಚಿಸಬೇಕಿದೆ.ಸದರಿ ವರದಿಯ ಬಗ್ಗೆ ಪರ-ವಿರೋಧಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ ತರಾತುರಿಯಲ್ಲಿ ಜಾರಿಗೊಳಿಸುವ ಹುನ್ನಾರ ನಡೆದಿದೆ.ಹಾಗಾಗಿ ಜನವರಿ 10 ರಂದು ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಿ,ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಿದೆ ಎಂದು ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ತಿಳಿಸಿದರು.
ಮೀಸಲಾತಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಾಕಳಿ ರವಿ ಮಾತನಾಡಿ,ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿರುವ ಲೋಪದೋಷಗಳ ಕುರಿತಂತೆ ನಮ್ಮ ಸಮುದಾಯದ ಸ್ವಾಮಿಜೀಗಳು,ಹಲವಾರು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ,ಅದನ್ನು ಮೀರಿ ವರದಿಯನ್ನು ಜಾರಿಗೆ ಮುಂದಾಗಿರುವುದು ಖಂಡನೀಯ.ಇದನ್ನು ವಿರೋಧಿಸಿ ಜನವರಿ 10 ರಂದು ಬೆಂಗಳೂರಿ ನಲ್ಲಿ ಕೈಗೊಂಡಿರುವ ಸಮಾವೇಶದ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ,ಜನರಲ್ಲಿ ಜಾಗೃತಿ ಮೂಡಿಸಿ,ಹೆಚ್ಚಿನ ಸಂಖ್ಯೆಯನ್ನು ಸೇರಿಸಿ, ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿದೆ. ತಾವೆಲ್ಲರೂ ಸ್ವಯಂ ಪ್ರೇರಿತರಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮೀಸಲಾತಿ ಸಂರಕ್ಷಣಾ ಸಮಿತಿಯ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ,1921ರಲ್ಲಿ ನಡೆದ ಮಿಲ್ಲರ್ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಹೊಲೆಯ, ಮಾದಿಗ,ಕೊರಮ, ಕೊರಚ, ಲಂಬಾಣಿ, ಬೋವಿ ಜಾತಿಗಳು ದಮನಿತ ಜಾತಿಗಳಾಗಿವೆ.ಅಲ್ಲದೆ ಸಂವಿಧಾನದಲ್ಲಿ ಎಲ್ಲಿಯೂ ಒಳಮೀಸಲಾತಿಗೆ ಅವಕಾಶ ಇಲ್ಲ ಎಂಬುದನ್ನು ಕೋಟಿ ಚನ್ನಯ್ಯ ವಿರುದ್ದ ಆಂಧ್ರಪ್ರದೇಶ ಕೇಸ್‍ನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವೇ ತಿಳಿಸಿದೆ. ಹಾಗಿದ್ದೂ ಕೇಂದ್ರದಲ್ಲಿ ಸಮಾಜಿಕ ನ್ಯಾಯ ಸಬಲೀಕರಣ ಮಂತ್ರಿಯಾಗಿರುವ ಎ.ನಾರಾಯಣಸ್ವಾಮಿ,ದೋಷಪೂರಿತ, ರಾಜಕೀಯ ಹಸ್ತಕ್ಷೇಪಕ್ಕೆ ಒಳಗಾಗಿರುವ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲೇಬೇಕು ಎಂಬ ಹುನ್ನಾರ ನಡೆಸುತ್ತಿವೆ.ಅಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೊ,ಲಂ.ಬೋ ಜಾತಿಗಳನ್ನು ಹೊರಗಿಡುವ ಷಡ್ಯಂತ್ರವನ್ನು ರೂಪಿಸಿದ್ದು, ಇದರ ವಿರುದ್ದ ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡುವ ಮೂಲಕ ನಮಗೆ ದಕ್ಕಿರುವ ಸಂವಿಧಾನ ಬದ್ದ ಹಕ್ಕನ್ನು ರಕ್ಷಿಸಿಕೊಳ್ಳೋಣ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಮುಖಂಡರಾದ ಊರುಕೆರೆ ಉಮೇಶ್,ಬಿಜೆಪಿ ಮುಖಂಡ ಓಂಕಾರ್,ಜಿಲ್ಲಾ ಬಂಜಾರ ಸಂಘದ ಕಾರ್ಯಾಧ್ಯಕ್ಷ ಜಯರಾಮ್,ಮುಖಂಡ ತಿಪ್ಪೇಶ್ ಆರ್.ನಾಯಕ್,ಶ್ರೀಧರ್,ಶ್ರೀನಿವಾಸಮೂರ್ತಿ,ಕುಮಾರ ನಾಯ್ಕ್, ಪಾಲಿಕೆಯ ಕೌನ್ಸಿಲರ್ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಯಶಸ್ವಿಯಾದ ಮಾನವ ಅಂಗಾಂಗ ಕಸಿ
Next Article ಸಡಗರದಿಂದ ನಡೆದ ಕ್ರಿಸ್‍ಮಸ್
News Desk Benkiyabale

Related Posts

ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ

December 10, 2025 3:55 pm ಇತರೆ ಸುದ್ಧಿಗಳು

ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ

December 10, 2025 3:54 pm ಇತರೆ ಸುದ್ಧಿಗಳು

ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ

December 10, 2025 3:52 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ

December 10, 2025 3:55 pm
ಇತರೆ ಸುದ್ಧಿಗಳು

ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ

December 10, 2025 3:54 pm
ಇತರೆ ಸುದ್ಧಿಗಳು

ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ

December 10, 2025 3:52 pm
ಇತರೆ ಸುದ್ಧಿಗಳು

ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ

December 10, 2025 3:50 pm
ಇತರೆ ಸುದ್ಧಿಗಳು

ಡಿ.೧೩: ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡದ ಉದ್ಘಾಟನೆ

December 10, 2025 3:49 pm
ಇತರೆ ಸುದ್ಧಿಗಳು

ಪತ್ರಿಕಾ ವೃತ್ತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಗೌರವ ನೀಡುತ್ತದೆ: ಶಾಸಕ

December 10, 2025 3:47 pm
Our Youtube Channel
Our Picks

ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ

December 10, 2025 3:55 pm

ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ

December 10, 2025 3:54 pm

ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ

December 10, 2025 3:52 pm

ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ

December 10, 2025 3:50 pm

ಡಿ.೧೩: ಜಿಲ್ಲಾ ಬಂಜಾರ ಭವನದ ನೂತನ ಕಟ್ಟಡದ ಉದ್ಘಾಟನೆ

December 10, 2025 3:49 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಪೋಷಕರ ಆದರ್ಶಗಳು, ಮೌಲ್ಯಗಳನ್ನು ಮುಂದುವರೆಸಿ: ಸ್ವಾಮೀಜಿ

By News Desk BenkiyabaleDecember 10, 2025 3:55 pm

ಕೊರಟಗೆರೆ: ತಂದೆ-ತಾಯಿಗಳ ಆಸ್ತಿಗೆ ಮಾತ್ರ ವಾರಸುದಾರರಾಗು ವುದು ಸಾಕಾಗುವುದಿಲ್ಲ, ಅವರು ಬದುಕಿನಲ್ಲಿ ಅನುಸರಿಸಿದ ಆ ದರ್ಶಗಳು, ಮೌಲ್ಯಗಳು ಹಾಗೂ ಸಮಾಜಮುಖಿ…

ಹಮಾಲಿ ಕಲ್ಯಾಣ ಮಂಡಳಿಗೆ ೫೦೦ ಕೋಟಿ ಮೀಸಲಿಡಲು ಒತ್ತಾಯ

December 10, 2025 3:54 pm

ಸಮಾಜದಲ್ಲಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿದೆ

December 10, 2025 3:52 pm

ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ

December 10, 2025 3:50 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.