BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಜೀವಂತ ಭಾಷೆ: ಡಾ. ಕರಿಗೌಡ
  • ಸುಸ್ಥಿರ ಸಂಶೋಧನೆಗಳತ್ತ ಗಮನಹರಿಸಿ: ರಾಜಾಸಾಬ್
  • ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು
  • ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ
  • ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು
  • ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್
  • ನ.೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ
  • ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ100 ಅಡಿ ಎತ್ತರದ ಶಿವಲಿಂಗ
ಇತರೆ ಸುದ್ಧಿಗಳು

ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ100 ಅಡಿ ಎತ್ತರದ ಶಿವಲಿಂಗ

By News Desk BenkiyabaleUpdated:June 12, 2023 5:05 pm

ಕೊರಟಗೆರೆ


ಮನುಷ್ಯನ ಜೀವನದ ಉನ್ನತಿಗೆ ಗುರಿಯು ಅತಿಮುಖ್ಯ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ಮನುಷ್ಯನ ಬದುಕು ವ್ಯರ್ಥ. ಸರಳ ವಿವಾಹದಿಂದ ಮನುಷ್ಯನ ಸುಂದರ ಬದುಕು ನಿರ್ಮಾಣ ಸಾಧ್ಯ. ೧೭ನವ ಜೋಡಿಗಳ ಬದುಕು ಸಮೃದ್ದವಾಗಿ ಬೆಳಗಲಿ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಶ್ರೀಮಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಆರ್ಶಿವಚನ ನೀಡಿದರು.
ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಸಸ್ಯಸಂಜೀವಿನಿ ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾಶಾಖಾ ಶ್ರೀಮಠದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ೧೭ನೇ ವರ್ಷದ ವಾರ್ಷಿಕೋತ್ಸವ, ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಶಾಂತಿ ಸುಖದಾಯಕ ಬದುಕು ನಿರ್ಮಾಣಕ್ಕಾಗಿ ಧರ್ಮದ ಅರಿವು ಅಚರಣೆ ಅಗತ್ಯ. ಬದುಕು ಭಗವಂತ ಕೊಟ್ಟ ಕೊಡುಗೆಯಲ್ಲಿ ಮನುಷ್ಯ ಕಲಿಯುವ ಪಾಠಗಳಿವೆ. ಅನುಭವಿಸುವ ವಿಚಾರ ಧಾರೆಗಳಿವೆ. ಸಿದ್ದರಬೆಟ್ಟ ಶ್ರೀಮಠವು ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬೆಳೆದುನಿಂತಿದೆ. ಶ್ರೀಮಠದ ಪ್ರಾಮಾಣಿಕ ಪ್ರಯತ್ನದ ಭರವಸೆ, ಗುರುಕುಲದ ಕನಸು, ಶಿಕ್ಷಣ ಮತ್ತು ಜನಪರ ಕಾರ್ಯಕ್ಕೆ ನಮ್ಮ ಆರ್ಶಿವಾದ ಸದಾ ಇರಲಿದೆ ಎಂದು ತಿಳಿಸಿದರು.
ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಶ್ರೀರಂಭಾಪುರಿ ಜಗದ್ಗುರುಗಳ ಆರ್ಶಿವಾದ ಮತ್ತು ಭಕ್ತರ ಸಹಕಾರದಿಂದ ಧರ್ಮಜಾಗೃತಿಯ ಸಂಕಲ್ಪ. ಸಿದ್ದರಬೆಟ್ಟ ಶ್ರೀಕ್ಷೇತ್ರದ ಧರ್ಮ ಕಾರ್ಯಗಳಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಹಕಾರ ಸೀಗುತ್ತಿದೆ. ಭಕ್ತಾವೃಂದ್ದ ಮತ್ತು ಶ್ರೀಮಠದ ಸಂಬAಧವೇ ವಾರ್ಷಿಕೋತ್ಸವ ಸಮಾರಂಭ. ಸರಳತೆಯ ವಿವಾಹ ಮಹೋತ್ಸವವು ಆಧುನಿಕ ಸಮಾಜಕ್ಕೆ ಮಾದರಿ ಆಗಲಿದೆ. ಪುಸ್ತಕ ದಾಸೋಹ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವು ಯಶಸ್ವಿಕಂಡಿದೆ ಎಂದು ತಿಳಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ ಸಿದ್ದರಬೆಟ್ಟ ಶ್ರೀಮಠದ ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯು ಆಧುನಿಕ ಜಗತ್ತಿಯಲ್ಲಿ ಪ್ರಜ್ವಲಿಸುತ್ತಿದೆ. ಸಿದ್ದರಬೆಟ್ಟ ಶ್ರೀಮಠವು ಲಕ್ಷಾಂತರ ಜನ ಭಕ್ತರಿಗೆ ಧರ್ಮದ ವಿಚಾರಧಾರೆ ತಿಳಿಸುವ ಪ್ರಯತ್ನ ಮಾಡಿದೆ. ಮಾಡಿದ್ದಾರೆ. ಸಿದ್ದಗಂಗಾ ಶ್ರೀಮಠದ ರೀತಿಯಲ್ಲಿ ಸಿದ್ದರಬೆಟ್ಟ ಶ್ರೀಮಠವು ಇನ್ನಷ್ಟು ಪ್ರಜ್ವಲಿಸಲಿ. ದೇವರಾಯನದುರ್ಗ, ಗೊರವನಹಳ್ಳಿ, ಕ್ಯಾಮೇನಹಳ್ಳಿ ಮತ್ತು ಸಿದ್ದರಬೆಟ್ಟ ಕ್ಷೇತ್ರವು ಪ್ರವಾಸೋದ್ಯಮ ಅಡಿಯಲ್ಲಿ ಅಭಿವೃದ್ದಿ ಆಗಲಿದೆ ಎಂದು ಭರವಸೆ ನೀಡಿದರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ಧರ್ಮಪಾಲನೆಯ ಸ್ವಾಮರಸ್ಯ ಮತ್ತು ಶಾಂತಿ ಸುವ್ಯವಸ್ಥೆಗೆ ಶ್ರೀಮಠಗಳ ಸಹಕಾರವು ಇನ್ನಷ್ಟು ಅಗತ್ಯವಿದೆ. ಸಾಮೂಹಿಕ ವಿವಾಹವು ಬಡಮಕ್ಕಳಿಗೆ ಮಾತ್ರ ಸಿಮೀತ ಆಗುವುದು ಬೇಡ. ಉಳ್ಳವರು ಸಹ ಸಾಮೂಹಿಕ ವಿವಾಹ ಮಾಡಿಕೊಂಡರೇ ನಮ್ಮ ಸಮಾಜಕ್ಕೆ ಮಾದರಿ. ಸಿದ್ದರಬೆಟ್ಟ ಶ್ರೀಮಠವು ಪರಿಸರ ಜಾಗೃತಿಗೆ ಹೆಚ್ಚಿನ ಕಾಳಜಿ ವಹಿಸಿದೆ. ಬಡಮಕ್ಕಳ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ರಾಜ್ಯದ ಶ್ರೀಮಠಗಳ ಕೊಡುಗೆ ಅನನ್ಯ. ಸಿದ್ದಗಂಗಾ ಶ್ರೀಮಠವು ಬಡಮಕ್ಕಳ ಶೈಕ್ಷಣಿಕ ದೇವಾಲಯ ಎಂದರೇ ತಪ್ಪಾಗದು ಎಂದು ಹೇಳಿದರು.
ಎಡೆಯೂರು ಶ್ರೀರೇಣುಕಾ ಶಿವಾಚಾರ್ಯರು, ಎಲೆರಾಂಪುರದ ಡಾ.ಹನುಮಂತ ಸ್ವಾಮೀಜಿ, ಬೆಳ್ಳಾವಿಯ ಶ್ರೀವೀರಬಸವ ಶ್ರೀಗಳು, ಬೀರೂರು ರುದ್ರಮುನಿ ಶ್ರೀಗಳು, ಹಲಕರಟಿಯ ಶ್ರೀಮುನೀಂದ್ರ ಶ್ರೀಗಳು, ಕಲ್ಕೇರಿಯ ಶ್ರೀಸಿದ್ದರಾಮ ಶ್ರೀಗಳು, ತಂಗನಹಳ್ಳಿಯ ಶ್ರೀಬಸವಲಿಂಗ ಶ್ರೀಗಳು, ಹತ್ತಿಕಣವಸ ಪ್ರಭುಶಾಂತ ಶ್ರೀಗಳವರು ಪಾಲ್ಗೊಂಡು ೫೦ಜನ ವೀರಮಾಹೇಶ್ವರ ಮತ್ತು ಶ್ರೀಮಠದ ಭಕ್ತರಿಗೆ ಅಯ್ಯಾಚಾರ ಶಿವದೀಕ್ಷೆ ನೇರವೇರಿಸಿದ ನಂತರ ೧೭ಜನ ನವ ದಂಪತಿಗಳಿಗೆ ಆರ್ಶಿವಾದ ಮಾಡಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ, ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಮುಖಂಡರಾದ ಸಿದ್ದಮಲ್ಲಪ್ಪ, ಬಲರಾಮಯ್ಯ, ಸಿದ್ದಗಿರಿ ನಂಜುAಡ ಸ್ವಾಮಿ, ಜಯರಾಮ್, ಪುಟ್ಟನರಸಪ್ಪ, ಮಲ್ಲೇಕಾವು ಸೋಮಣ್ಣ, ಅರವಿಂದ್, ತಿಪ್ಪೇಸ್ವಾಮಿ, ಗಿರೀಶ್, ಹರೀಶ್, ನಂಜಾರಾಧ್ಯ, ವಿನಯ್, ರುದ್ರಮುನಿ, ರಾಮಮೂರ್ತಿ ಇತರರು ಇದ್ದರು.

(Visited 1 times, 1 visits today)
tumkur
Previous Article10 ನಿಮಿಷದಲ್ಲಿ ಆಸ್ತಿ ನೋಂದಣಿ : ಕಾವೇರಿ- 2.0 ತಂತ್ರಾಂಶ ಅಳವಡಿಕೆ
Next Article ಮಠ, ಮಂದಿರಗಳ ಅಭಿವೃದ್ಧಿಗೆ ಅನುಧಾನ ಬಿಡುಗಡೆಗೊಳಿಸಿ
News Desk Benkiyabale

Related Posts

ಕನ್ನಡ ಜೀವಂತ ಭಾಷೆ: ಡಾ. ಕರಿಗೌಡ

November 14, 2025 2:43 pm ಇತರೆ ಸುದ್ಧಿಗಳು

ಸುಸ್ಥಿರ ಸಂಶೋಧನೆಗಳತ್ತ ಗಮನಹರಿಸಿ: ರಾಜಾಸಾಬ್

November 14, 2025 2:41 pm ಇತರೆ ಸುದ್ಧಿಗಳು

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕನ್ನಡ ಜೀವಂತ ಭಾಷೆ: ಡಾ. ಕರಿಗೌಡ

November 14, 2025 2:43 pm
ಇತರೆ ಸುದ್ಧಿಗಳು

ಸುಸ್ಥಿರ ಸಂಶೋಧನೆಗಳತ್ತ ಗಮನಹರಿಸಿ: ರಾಜಾಸಾಬ್

November 14, 2025 2:41 pm
ಇತರೆ ಸುದ್ಧಿಗಳು

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm
ಇತರೆ ಸುದ್ಧಿಗಳು

ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು

November 13, 2025 2:29 pm
ಇತರೆ ಸುದ್ಧಿಗಳು

ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್

November 13, 2025 2:27 pm
Our Youtube Channel
Our Picks

ಕನ್ನಡ ಜೀವಂತ ಭಾಷೆ: ಡಾ. ಕರಿಗೌಡ

November 14, 2025 2:43 pm

ಸುಸ್ಥಿರ ಸಂಶೋಧನೆಗಳತ್ತ ಗಮನಹರಿಸಿ: ರಾಜಾಸಾಬ್

November 14, 2025 2:41 pm

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm

ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು

November 13, 2025 2:29 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕನ್ನಡ ಜೀವಂತ ಭಾಷೆ: ಡಾ. ಕರಿಗೌಡ

By News Desk BenkiyabaleNovember 14, 2025 2:43 pm

ತುಮಕೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,.ಮೊದಲಿಗೆ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ…

ಸುಸ್ಥಿರ ಸಂಶೋಧನೆಗಳತ್ತ ಗಮನಹರಿಸಿ: ರಾಜಾಸಾಬ್

November 14, 2025 2:41 pm

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.