BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ
  • ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ
  • ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ
  • ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ
  • ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ
  • ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ
  • ದಾಖಲೆ ಸಮೇತ ಗ್ರಾಮಸ್ಥರ ಆರೋಪ
  • ಬೆಳಗಾವಿಯಲ್ಲಿ ತುಮಕೂರು ಗ್ರಾಮಾಂತರ ಅಭಿವೃದ್ಧಿಯ ಕುರಿತು ಸಿಎಂ ಗಮನ ಸೆಳೆದ ಶಾಸಕ ಸುರೇಶ್ ಗೌಡ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂ. ಅವ್ಯವಹಾರ: ಆರೋಪ
ಇತರೆ ಸುದ್ಧಿಗಳು

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂ. ಅವ್ಯವಹಾರ: ಆರೋಪ

By News Desk BenkiyabaleUpdated:April 01, 2025 3:55 pm

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರರೂ. ಅವ್ಯವಹಾರಗಳ ಸರಮಾಲೆಯೇ ನಡೆದಿದೆ ಎಂದು ತುಮಕೂರು ಹಾಲು ಒಕ್ಕೂಟ ಹಾಗೂ ಸಹಕಾರ ಸಂಘದ ನಿರ್ದೇಶಕ ಬಿ.ಎನ್. ಶಿವಪ್ರಕಾಶ್ ದಾಖಲೆಗಳೊಂದಿಗೆ ಆರೋಪಿಸಿದರು.
ಪಟ್ಟಣದ ನಂದಿನಿ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಕಸಬ ಹೋಬಳಿ ವ್ಯಾಪ್ತಿಗೆ ಒಳಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೧೯೭೭ಕ್ಕೂ ಮುನ್ನ ಹೊನ್ನೇಬಾಗಿ ಹಾಗೂ ಮೇಲನಹಳ್ಳಿಗಳಲ್ಲಿ ಕಾರ್ಯಾನಿರ್ವಹಿಸಿತ್ತು. ಶೈಶಾವಸ್ತೆಯಲ್ಲಿದ್ದ ಸಂಘವನ್ನು ಬೆಳೆಸುವ ಉದ್ದೇಶದಿಂದ ೧೯೭೭ ರಲ್ಲಿ ಪಟ್ಟಣದಲ್ಲಿ ನೆಲೆಗೊಳಿಸಲಾಯಿತು. ಇದರಿಂದ ಹೆಚ್ಚು ಶೇರುದಾರಾಗಿ, ವಹಿವಾಟು ಬೆಳೆಯಿತು. ಅಂದಿನ ಕಾರ್ಯದರ್ಶಿಯಾಗಿದ್ದ ಜಗಿದೀಶ್ ಒಡೆಯರ್‌ರವರ ಬದ್ದತೆಯಲ್ಲಿ ಸ್ವಂತಕಟ್ಟಡಹೊAದುವ ಮೂಲಕ ಪ್ರತಿದಿನ ಲಕ್ಷಾಂತರರೂ. ವಹಿವಾಟು ನಡೆಸುವ ಸಂಘವಾಗಿ ಪರಿವರ್ತನೆಯಾಗಿತ್ತು. ಪ್ರಸ್ತುತ ೪೪೫೯ ಮಂದಿ ಶೇರುದಾರರಿರುವ ಸಂಘದಲ್ಲಿ ಕಳೆದ ಹತ್ತುವರ್ಷದಿಂದ ಹೊಸದಾಗಿ ಬಂದ ಆಡಳಿತ ಮಂಡಳಿಯವರ ಸ್ವೇಚ್ಚಾಚಾರದ ನಡಿಗೆಯಿಂದ ಕಳೆದ ೫ವರ್ಷದಲ್ಲಿ ಹಲವಾರು ಹಗರಣಗಳು ನಡೆದು ಲಕ್ಷಾಂತರೂ ಅವ್ಯವಹಾರವಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿ ಆರೋಪಿಸಿದರು. ಸಂಘದಲ್ಲಿ ಪ್ರಭಾರ ಸಿಇಓ ಆಗಿದ್ದ ಕೆ.ಸಿ. ಯೋಗೀಶ್ ತನ್ನ ಹೆಸರಿನಲ್ಲಿ ೨ ಉಳಿತಾಯ ಖಾತೆ ಮಾಡಿಕೊಂಡು ಗ್ರಾಹಕರ ಹಾಗೂ ಸಂಘದ ಸುಮಾರು ೬೦ರಿಂದ ೭೦ಲಕ್ಷರೂ.ಗಳನ್ನು ಹೊಂದಾಣಿಕೆ ನೆಪದಲ್ಲಿ ತನ್ನಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು, ಇದನ್ನು ಪ್ರಶ್ನಿಸಿದಾಗ ಕೇವಲ ೧೨,೬೩,೭೦೦ರೂ.ಗಳನ್ನು ಸಂಘಕ್ಕೆ ಜಮಾ ಮಾಡದೆ ಅವರ ಹೆಸರಿನ ಅಮಾನತ್ತು ಖಾತೆಯಲ್ಲಿರಿಸಿದ್ದಾರೆ. ಸಂಘದ ಗುಮಾಸ್ತ ಸಿದ್ದರಾಜು ಹೆಸರಿನಲ್ಲಿ ಸಿಇಓರವರು ಅವರಿಗೆ ವಂಚಿಸಿ ರೂ.೬ಲಕ್ಷ ವೇತನಸಾಲ ಖರ್ಚಾಕಿದ್ದಾರೆ. ಎಂ.ಸಿದ್ದರಾಜುರವರು ನ್ಯಾಯಕ್ಕಾಗಿ ಅಧ್ಕಕ್ಷರಿಗೆ ಮನವಿ ಕೊಟ್ಟರೂ ಖ್ಯಾರೆಎಂದಿಲ್ಲ. ಆಡಳಿತ ಮಂಡಳಿ ಗಮನಕ್ಕೆ ತಾರದೆ ಲಕ್ಷಾಂತರರೂ. ಸಾಲ ನೀಡಿದ್ದಾರೆ, ನಿಯಮಗಳನ್ನು ಗಾಳಿಗೆತೂರಿ ಪಿಗ್ಮಿ ಆರಂಭಿಸಿದ ದಿನದಿಂದಲೇ ವ್ಯಕ್ತಿಗಳಿಗೆ ಲಕ್ಷಗಟ್ಟಲೆ ಸಾಲ ನೀಡಿದ್ದಾರೆ, ಗ್ರಾಹಕರಿಗೆ ಒಡವೆಸಾಲ ನೀಡಿದ್ದು, ಅವರಿಂದ ವಿಮಾಮೊತ್ತವನ್ನು ಪಡೆದಿದ್ದರೂ. ವಿಮೆ ಪಾವತಿಸಿಲ್ಲ. ಗ್ರಾಹಕರ ಚಿನ್ನ ಕಳುವಾದರೆ ಏನುಗತಿ ಎಂದು ಪ್ರಶ್ನಿಸಿದರು. ನಿರ್ದೇಶಕ ಎಂ.ಬಿ. ದಿನೇಶ್ ಮಾತನಾಡಿ ಹಲವಾರು ರೈತರಿಗೆ ಕೆಸಿಸಿ ಸಾಲ ಮಂಜೂರಾಗಿದ್ದು, ಅವರಿಗೆ ಸಾಲ ನೀಡಿಲ್ಲ, ಆದರೆ ಸಾಲ ನೀಡದಿದ್ದರೂ ಹಲವು ರೈತರಿಗೆ ಸಾಲ ಮರುಪಾವತಿಯ ನೋಟಿಸ್ ನೀಡಲಾಗಿದೆ. ಸಂಘದಿAದ ಹಾಗೂ ಠೇವಣಿಹಣದಿಂದ ೧೫ ಕೋಟಿರೂ. ಸಾಲ ನೀಡಿದ್ದು, ೮ಕೋಟಿರೂ. ಅಧಿಕ ಸಾಲ ಈವರೆಗೆ ಸುಸ್ತಿಯಾಗಿದೆ. ರೈತರಿಗೆ ಸರಿಯಾದ ಮಾಹಿತಿ ನೀಡದೆ ಜಿಲ್ಲಾ ಬ್ಯಾಂಕಿನಿAದ ೫ಕೋಟಿಗೂ ಅಧಿಕ ಕೆಸಿಸಿ ಸಾಲ ನೀಡಿದ್ದು, ರೂ.೩೦ಲಕ್ಷಕ್ಕೂ ಹೆಚ್ಚು ಸುಸ್ತಿಯಾಗಿದ್ದು ರೈತರು ವಿನಾಕಾರಣ ಶೇ.೧೦ ರಂತೆ ಬಡ್ಡಿಕಟ್ಟುವಂತೆ ಮಾಡಿದ್ದಾರೆ. ಹಾಗೂ ನೂರಾರು ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಸಂಘದ ನಿಯಮವನ್ನು ಉಲ್ಲಂಘಸಿ ಚಿತ್ರದುರ್ಗ ಜಿಲ್ಲೆಯ ಒಬ್ಬರಿಗೆ ೭ಲಕ್ಷರೂ. ಸಾಲ ನೀಡಿದ್ದರೆ, ಷೇರುದಾರರಲ್ಲದ ಸಂಘದ ವ್ಯಾಪ್ತಿಯೊಳಗಿಲ್ಲದ ಮಹಿಳೆಗೆ ರೂ.೧೦ಲಕ್ಷ ಸಾಲ ಮಂಜೂರು ಮಾಡಿದ್ದಾರೆ. ಆಕೆಯು ಇದುವರೆಗೂ ಅಸಲು ಹಾಗೂ ಬಡ್ಡಿಯನ್ನೇ ತೀರಿಸಿಲ್ಲವೆಂದು ಆರೋಪಿಸಿದರು. ಈ ಎಲ್ಲಾ ಹಗರಣಗಳನ್ನು ದಾಖಲೆ ನೀಡಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿ, ಅಲ್ಲಿಂದ ತಾಲ್ಲೂಕು ಅಧಿಕಾರಿಗೆ ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ. ಲೋಕಾಯುಕ್ತರಿಗೆ ದೂರು ನೀಡಿದ್ದು, ಅವರಿಗೆ ನೀಡಬೇಕಾದ ಅವ್ಯವಹಾರಗಳ ದಾಖಲೆಗಳನ್ನು ಸಂಘದಿAದ ಪಡೆಯಲು ಲಿಖಿತವಾಗಿ ಮಾಹಿತಿ ಕೇಳಿದಾಗ ಮಾಹಿತಿ ನೀಡದೆ, ತಮ್ಮ ಅರ್ಜಿಯನ್ನು ಆಡಳಿತ ಮಂಡಳಿ ಸಭೆಗೆ ತಂದು, ಅಲ್ಲಿನ ತೀರ್ಮಾನದಂತೆ ಮಾಹಿತಿ ನೀಡಲಾಗುವುದೆಂದು ಸಿಇಓ ಹಿಂಬರಹ ನೀಡುವ ಮೂಲಕ ತಮ್ಮ ಹೆಗಲನ್ನು ತಾವೇ ಸವರಿಕೊಂಡಿದ್ದಾರೆ ಎಂದರು. ಪ್ರಸ್ತತ ಅಧ್ಯಕ್ಷರ ಚಿತಾವಣೆಯಿಂದ ಈ ಅವ್ಯಹಾರ ನಡೆದಿದೆ ಎಂದರು. ಇಲ್ಲಿ ಬಗೆದಷ್ಟೂ ಅವ್ಯವಾಹರಗಳು ಬೆಳಕಿಗೆ ಬರುತ್ತಲೇ ಇದ್ದು ಇವೆಲ್ಲವನ್ನು ಸರಿಪಡಿಸಲು ಹೊಸ ಪ್ರಾಮಾಣಿಕ ಅಡಳಿತ ಮಂಡಳಿ ಅಧಿಕಾರಕ್ಕೆ ಬರಬೇಕಿದೆ. ಏ.೬ ರಂದು ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಮಾಜಿ ಪುರಸಭಾಧ್ಯಕ್ಷ ಸಿ.ಎಂ.ರAಗಸ್ವಾಮಿಯವರ ಮುಂದಾಳತ್ವದಲ್ಲಿ ಹೊಸ ತಂಡದೊAದಿಗೆ ನಾವು ಚುನಾವಣೆಯನ್ನು ಎದುರಿಸಲಿದ್ದು, ಸಂಘದ ಉಳಿವಿಗೆ ಹಾಗೂ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿ ಮತದಾರರ ಮುಂದೆ ಹೋಗುತ್ತಿದ್ದೇವೆ. ಪ್ರತಿಯೊಬ್ಬರಿಗೂ ಈ ಅವ್ಯವಹಾರದ ಮಾಹಿತಿಯನ್ನು ನೀಡಿ ಮತಕೇಳುತ್ತಿದ್ದೇವೆ. ನಮ್ಮ ತಂಡ ಪಕ್ಷಾತೀತ, ಜಾತ್ಯಾತೀತ ಹಾಗೂ ಪ್ರಾಂತ್ಯಾತೀತವಾಗಿರುವ ತಂಡವಾಗಿದೆ ಎಂದರು. ಈ ಸಂದರ್ಭದಲ್ಲಿ ಜಿ. ಶ್ರೀನಿವಾಸ್, ಸಿ.ಎನ್. ಶಾಂತಕುಮಾರ್, ಸಿ.ಜಿ. ಸೋಮಶೇಖರ್, ಕೆ.ಎಸ್.ನಿರಂಜನ್, ಶ್ರೀಧರ್, ಡಿ.ಎನ್. ಭರತ್‌ಪೂಜಾರ್, ಸಿ.ಎಸ್. ಸುಗಂದರಾಜು, ಮುಂತಾದವರಿದ್ದರು.
ಚಿತ್ರ:೩೦ಸಿಎನ್‌ಎಚ್೧ಇಪಿ. ಶೀರ್ಷಿಕೆ: ಚಿಕ್ಕನಾಯಕನಹಳ್ಳಿ ಪಟ್ಟಣದ ನಂದಿನಿ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೆಶಕರು ಪತ್ರಿಕಾ ಗೋಷ್ಠಿ ನಡೆಸಿದರು.

(Visited 1 times, 1 visits today)
Previous Articleತೆರಿಗೆ ಪದ್ಧತಿಯು ಸಂಘಟಿತ ಸಮಾಜವನ್ನು ರೂಪಿಸುವ ಸಾಧನ
Next Article ಫೈಗಂಬರ್ ಸಾರಿದ ಶಾಂತಿಯ ಸಂದೇಶ ಇಂದಿಗೂ ಪ್ರಸ್ತುತ
News Desk Benkiyabale

Related Posts

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm
ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm
ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm
ಇತರೆ ಸುದ್ಧಿಗಳು

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
ಇತರೆ ಸುದ್ಧಿಗಳು

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
ಇತರೆ ಸುದ್ಧಿಗಳು

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ

December 16, 2025 4:06 pm
Our Youtube Channel
Our Picks

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

By News Desk BenkiyabaleDecember 16, 2025 4:12 pm

ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ…

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.