ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಪಿಡಿಒ ಕಾರ್ಯವೈಖರಿ ಖಂಡಿಸಿ ಕೆಲ ಸದಸ್ಯರು ಮತ್ತು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಸಮಸ್ಯೆ ಆಗಿದೆ. ಬೋರ್ವೆಲ್ ಕೆಟ್ಟು ಹೋಗಿದೆ. ಅದನ್ನು ಕೂಡಲೇ ಸರಿಪಡಿಸಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಪಿಡಿಒ ಹನುಮಂತರಾಜು ಮಾಡುತ್ತಿಲ್ಲ’ ಎಂದು ಕೊಮ್ಮರದೇವರಹಳ್ಳಿಯ ನಿವಾಸಿ ವಕೀಲ ನಾಗರಾಜು ಆರೋಪಿಸಿದರು.
`ಗ್ರಾಮದಲ್ಲಿ ಉದ್ಭವಿಸಿರುವ ಸಮಸ್ಯೆಯ ಕುರಿತು ಪಿಡಿಒಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶುಚಿತ್ವ ಮರೀಚಿಕೆಯಾಗಿದೆ. ಬೀದಿ ದೀಪ ಸೌಲಭ್ಯ ಇಲ್ಲದಾಗಿದೆ. ದೀಪ ಹಾಕಿಸಿ ಎಂದರೆ ಹಣಕೊಡಿ ಹಾಕಿಸುತ್ತೇನೆ ಎಂದು ಉತ್ತರ ನೀಡುತ್ತಾರೆ. ಪಂಚಾಯಿತಿಯ ಸೌಲಭ್ಯವನ್ನು ಜನರಿಗೆ ನೀಡುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುವುದೇ ಕಾಯಕವಾಗಿಬಿಟ್ಟಿದೆ’ ಎಂದರು.
ಗ್ರಾಮದಲ್ಲಿ ಜಾರಿಗೆ ತಂದಿರುವ ಜಲಜೀವನ್ ಯೋಜನೆಯೂ ಸಹ ಪಿಡಿಒ ಬೇಜವಾಬ್ದಾರಿತನದಿಂದ ವಿಫಲವಾಗಿದೆ’ ಎಂದು ದೂರಿದರು.
ಗ್ರಾಮಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ. ಬೋರ್ವೆಲ್ ಕೆಟ್ಟು ಹೋಗಿದೆ. ಅದನ್ನು ಕೂಡಲೇ ಸರಿಪಡಿಸಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಪಿಡಿಒ ಹನುಮಂತರಾಜು ಮಾಡುತ್ತಿಲ್ಲ’ ಎಂದು ಕೊಮ್ಮರದೇವರಹಳ್ಳಿಯ ನಿವಾಸಿ ವಕೀಲ ನಾಗರಾಜು ಆರೋಪಿಸಿದರು.
ಗ್ರಾಮದಲ್ಲಿ ಉದ್ಭವಿಸಿರುವ ಸಮಸ್ಯೆಯ ಕುರಿತು ಪಿಡಿಒಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶುಚಿತ್ವ ಮರೀಚಿಕೆಯಾಗಿದೆ. ಬೀದಿ ದೀಪ ಸೌಲಭ್ಯ ಇಲ್ಲದಾಗಿದೆ. ದೀಪ ಹಾಕಿಸಿ ಎಂದರೆ ಹಣಕೊಡಿ ಹಾಕಿಸುತ್ತೇನೆ ಎಂದು ಉತ್ತರ ನೀಡುತ್ತಾರೆ. ಪಂಚಾಯಿತಿಯ ಸೌಲಭ್ಯವನ್ನು ಜನರಿಗೆ ನೀಡುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುವುದೇ ಕಾಯಕವಾಗಿಬಿಟ್ಟಿದೆ’ ಎಂದರು.
ಗ್ರಾಮದಲ್ಲಿ ಜಾರಿಗೆ ತಂದಿರುವ ಜಲಜೀವನ್ ಯೋಜನೆಯೂ ಸಹ ಪಿಡಿಒ ಬೇಜವಾಬ್ದಾರಿತನದಿಂದ ವಿಫಲವಾಗಿದೆ’ ಎಂದು ದೂರಿದರು.
ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಬಾಲಾಜಿ, ಗೋವಿಂದಯ್ಯ, ಖಾಲಿದ್, ಮುಖಂಡ ಅರುಣ್ ಕುಮಾರ್, ಕೆ.ರೇವಣ್ಣ, ಕೆಂಚಯ್ಯ ಇದ್ದರು.
(Visited 1 times, 1 visits today)