ತುರುವೇಕೆರೆ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಲಯನ್ಸ್ ಭವನಕ್ಕೆ ೧೦ ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಬರವಸೆ ನೀಡಿದರು.
ಪಟ್ಟಣದ ವಿರಕ್ತ ಮಠದ ಹತ್ತಿರ ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಲಯನ್ಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸುಮಾರು ೩೫ ವರ್ಷಗಳಿಂದ ಬಡಜನತಗೆ ನಿರಂತರವಾಗಿ ಸೇವೆ ಮಾಡುತ್ತಾ ಬಂದಿರುವ ಲಯನ್ಸ್ ಕ್ಲಬ್ ನ ನೂತನ ಕಟ್ಟಡ ಸೇವೆಗಳಿಗೆ ಸದಾ ಸದ್ಬಳಿಕೆಯಾಗಲಿ. ನೂತನ ಕಟ್ಟಡದಲ್ಲಿ ಆರೋಗ್ಯ ಸಂಬAದಿಸಿದAತ ಕಾರ್ಯಕ್ರಮ ನಿರಂತರವಾಗಿ ಐ ಕ್ಯಾಂಪ್ ಮಾಡಿ ಹೆಸರು ಗಳಿಸಿದ್ದು ಕಣ್ಣಿನ ಆಸ್ಪತ್ರೆ ಮಾಡಲಿ ಹಾಗೂ ಸ್ಪರ್ದಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತರ ಬೇತಿ ನೀಡುವಂತಹ ಕಾರ್ಯಕ್ರಮಗಳು ನೆಡೆಯಲಿ ಎಂದು ತಿಳಿಸಿದರು.
ಕೇವಲ ರಾಜಕಾರಣ ಮಾಡುವ ದೃಷ್ಟಿಯಿಂದ ತುಮಕೂರು ಹೆಸರನ್ನು ಬದಲಾವಣೆ ಸರಿಯಲ್ಲ. ನೆಡೆದಾಡುವ ದೇವರು ಎಂಬ ಹೆಸರು ಪಡೆದ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಜನರಿಗೆ ಅನ್ನ ಅಹಾರ ನೀಡಿ ಅಪಾರ ಸೇವೆ ಸಲ್ಲಿಸಿದ್ದಾರೆ. ಸುಮಾರು ೪೦ ಕ್ಕೂ ಹೆಚ್ಚು ಮಠಗಳಿವೆ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಮಾತನಾಡುತ್ತೇನೆ ತುಮಕೂರು ಹೆಸರು ಹಾಗೇ ಇರಲಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಆಶೀರ್ವಚನ ನೀಡಿ ಮಾತನಾಡಿ ಬಡ ಜನತಗೆ ಅನುಕೂಲವಾಗುವಂತಹ ಪಟ್ಟಣದಲ್ಲಿ ಕಣ್ಣಿನ ಆಸ್ಪತ್ರೆ ಹಾಗೂ ಕ್ಯಾನ್ಸರ್ ಆಸ್ಪತ್ರೆ ತರೆಯಲು ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿ ಅಗತ್ಯವಾದ ಭೂಮಿಯನ್ನು ಮುಂಜೂರು ಮಾಡಿಸಬೇಕು ನಾವು ಸಹ ಅಗತ್ಯ ನೆರವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಬದಲ್ಲಿ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದ ದಾನಿಗಳಾದ ಉದ್ಯಮಿ ಎಂ.ಡಿ.ಮೂರ್ತಿ, ಬಸವೇಶ್ವರ ಮೆಡಿಕಲ್ ಮಲ್ಲಿಕಾರ್ಜುನ್, ಮುನಿಯೂರು ಚಿದಂಬರ್ ಹಾಗೂ ಸಮಾಜ ಸೇವಕ ಕಲ್ಕರೆ ರಾಘು ಸೇರಿದಂತೆ ದಾನಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ವಿಮಾನ ಅಪಘಾತದಲ್ಲಿ ವಿದಿವಶರಾದ ಆತ್ನಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವಹಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಲಯನ್ಸ್ ಭವನದಲ್ಲಿ ಪ್ರಾರಂ ಭದ ಅಂಗವಾಗಿ ಸಾರ್ವಜನಿಕರಿಗಾಘಗಿ ಬಿಪಿ, ಸಕ್ಕರೆ ಕಾಯಿಲೆ, ಎಚ್.ಬಿ.ಎ ೧ ಸಿ, ಬೋನ್ ಮಿನಿರಲ್ ಡೆನ್ ಸಿಟಿ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಸ್ಥಾಪಕ ಅಧ್ಯಕ್ಷ ಎಂ.ಟಿ.ಲಕ್ಷ್ಮೀನಾರಾಯಣ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಗೌರವಾದ್ಯಕ್ಷರಾದ ಡಾ.ನಾಗರಾಜು, ಅಧ್ಯಕ್ಷ ಪಿ.ಎಚ್.ಧನಪಾಲ್, ನಿಮ್ಹಾನ್ಸ್ ಮಾಜಿ ನಿರ್ದೇಶಕರಾದ ಡಾ.ಡಿ.ನಾಗರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಚ್. ಆರ್.ರಂಗನಾಥ್ ಜಿಲ್ಲಾ ಲಯನ್ಸ್ ಕ್ಲಬ್ನ ಪದಾದಿಕಾರಿಗಳಾದ ಸುರೇಶ್ ರಾಮು, ಮೋಹನ್, ಶಶಿಧರ್ ಗಂಜೀಗಟ್ಟಿ, ನೃಪೇಂದ್ರ, ಕೆ.ಲೋಕೇಶ್, ಟಿ.ಎಸ್.ರಾಜನ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಟಿ.ವಿ.ಮಹೇಶ್, ಖಜಾಂಚಿ ಟಿಎವಿ ಗುಪ್ತಾ, ಗಂಗಾಧರ ದೇವರ ಮನೆ ಸೇರಿದಂತೆ ಲಯನ್ಸ್ ಪಧಾದಿಕಾರಿಗಳು ಇದ್ದರು.
(Visited 1 times, 1 visits today)