BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
  • ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ
  • ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ
  • ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ
  • ನಿರಂತರ ೩ ತಿಂಗಳು ಹುಳಿಯಾರುಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು: ಶಾಸಕ ಭರವಸೆ
  • ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ
  • ‘ಉತ್ತಮ ಚಿಂತನೆಯಿAದ ದೊಡ್ಡ ಸಾಧನೆ ಸಾಧ್ಯ’
  • ತುಮಕೂರು ರೈಲು ನಿಲ್ದಾಣ ರೀಮಾಡೆಲಿಂಗ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿರಂತರ ೩ ತಿಂಗಳು ಹುಳಿಯಾರುಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು: ಶಾಸಕ ಭರವಸೆ
ಇತರೆ ಸುದ್ಧಿಗಳು

ನಿರಂತರ ೩ ತಿಂಗಳು ಹುಳಿಯಾರುಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು: ಶಾಸಕ ಭರವಸೆ

By News Desk BenkiyabaleUpdated:July 23, 2025 3:49 pm

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ಗುರತ್ವಾಕರ್ಷಣೆಯ ಮೂಲಕ ಈಗಾಗಲೇ ಚಾನಲ್ ಕೆಲಸ ಆಗಿರುವಂತಹ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯಿಂದ ಹುಳಿಯಾರು ಕೆರೆಯವರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗಡಬನಹಳ್ಳಿ ಬಳಿಯ ಮುಖ್ಯ ನಾಲೆಯಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಗೇಟ್‌ನ್ನು ತೆರವು ಮಾಡುವ ಮೂಲಕ ಚಾಲನೆ ನೀಡಿ ಗಂಗಾಪೂಜೆ ನೆರೆವೆರಿಸಿ ಅವರು ಮಾತನಾಡಿದರು.
ಮಂಗಳವಾರದಿ0ದ ಮೂರು ತಿಂಗಳಕಾಲ ೮.೩ ಕಿ.ಮೀ ಚಾನಲ್ ಮೂಲಕ ಹರಿಯುವಂತ ನೀರು ತಾಲ್ಲೂಕಿನ ಸಾಸಲು ಕೆರೆಯಿಂದ ಪ್ರಾರಂಭವಾಗಿ ಶೆಟ್ಟಿಕೆರೆ, ಅಜ್ಜನಕೆರ, ಗೌಡನಹಳ್ಳಿಕೆರೆ, ಹೆಸರಹಳ್ಳಿಕೆರೆ, ಅಂಕಸAದ್ರಹಣೆಯ ಮೂಲಕ ತಿಮ್ಲಾಪುರದ ಕೆರೆ ಮೂಲಕ ಹುಳಿಯಾರು ಕೆರೆಯನ್ನು ತಲುಪುವುದು. ಹಾಗೇ ಮುಂದುವರೆದು ಸಾದ್ಯವಾದರೆ ಬೋರನಕಣಿವೆಗೂ ಹರಿಸಲಾಗುವುದು ಎಂದರು.
ಈ ಚಾನಲ್ ೧೦ ವೆಂಟಿಲೇಟರ್‌ಗಳಲ್ಲಿ ಮಳೆಯಿಂದಾಗಿ ಹೂಳೂ ತುಂಬಿತ್ತು. ಅದನ್ನು ೨೮ ಲಕ್ಷ ವೆಚ್ಚದಲ್ಲಿ ತೆಗೆಸಲಾಗಿದ್ದು ಈ ಬಾರಿ ಸಂಪೂರ್ಣ ನೀರು ಸರಾಗವಾಗಿ ಹರಿಯುವ ಸಾದ್ಯತೆ ಇದೆ. ಈ ಕೆಲಸದ ಬಗ್ಗೆ ಸಹಕರಿಸಿದ ಇಂಜಿನಿಯರ್‌ಗಳು, ರೈತರಿಗೆ ಹಾಗೂ ಗುತ್ತಿಗೆದಾರರಿಗೆ ಧನ್ಯವಾದ ಸಲ್ಲಿಸುವ ಜೊತೆಗೆ ಈ ಕೆಲಸದ ಬಗ್ಗೆ ನಮ್ಮನ್ನು ಎಚ್ಚರಿಕೆ ನೀಡಿ ನಿಂದಿಸಿದವರಿಗೂ ಧನ್ಯವಾದಗಳು. ನಿಮ್ಮ ನಿಂದನೆಗೆ ನಾವು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ನಿಮ್ಮ ನಿಂದನೆ ನಮಗೆ ಜಾಗೃತಿ ಇದ್ದಂತೆ ಅದನ್ನು ನಾನು ಸ್ವೀಕರಿಸುತ್ತೇನೆ. ಅವರ ಆಸೆಯಂತೆ ನೀರನ್ನು ಹರಿಸುವ ಕೆಲಸ ಮಾಡಿದ್ದೇನೆ. ಯಾವ ಸಂದರ್ಭಕ್ಕೆ ಯಾವ ಕೆಲಸ ಮಾಡಬೇಕೊ ಆ ಕೆಲಸವನ್ನು ಮಾಡುತ್ತೇನೆ. ಯಾವುದೇ ಸಂಶಯ ಬೇಡ ಎಂದರು.
ನಾಲೆಯಲ್ಲಿ ಹೂಳು ತೆಗೆಯಲು ಪ್ರತಿ ವರ್ಷ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಸಂಸದ ಸೋಮಣ್ಣ ಅವರಿಗೆ ಈ ಚಾನಲ್‌ಗೆ ಕಟ್ ಆಂಡ್ ಕವರ್‌ಗೆ ಅನುದಾನ ನೀಡುವಂತೆ ಪತ್ರ ಬರೆದಿದ್ದೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸಿದರೆ ನಾನು ಕೇಂದ್ರದಿAದ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಕಾಮಗಾರಿ ನಡೆಯದಿದ್ದರೆ ಪ್ರತಿ ವರ್ಷ ಈ ಸಮಸ್ಯೆ ಇರುತ್ತದೆ. ಅದ್ದರಿಂದ ಕಟ್ ಆಂಡ್ ಕವರ್ ಮಾಡಬೇಕು. ಇದಕ್ಕೆ ನಾನೇ ಖುದ್ದು ಕೇಂದ್ರಕ್ಕೆ ಹೋಗಿ ಈ ಕೆಲಸವನ್ನು ಮಾಡಿಸುತ್ತೆನೆ ಎಂದರು.
ಇನ್ನೊ0ದು ಭಾಗವಾದ ನವಿಲೆಕೆರೆ ಭಾಗದ ಚಾನಲ್ ಕೆಲಸಕ್ಕೆ ರೈತರು ಭೂಮಿ ನೀಡಲು ಮುಂದೆ ಬಂದಿದ್ದು ಅವರನ್ನು ವಿಶ್ವಾಸಕ್ಕೆ ಪಡೆದು ಈ ಭಾಗದ ಕೆಲಸ ಮಾಡುತ್ತೆನೆ. ರೈತರ0 ಭೂಸ್ವಾದೀನಕ್ಕೆ ೧೫ ಕೋಟ ಹಣ ಇದ್ದು ರೈತರು ದೊಡ್ಡ ಮನಸ್ಸು ಮಾಡಿ ತಮ್ಮ ಭೂಮಿ ಬಿಟ್ಟು ಕೊಟ್ಟರೆ ಚಾನಲ್ ಕೆಲಸ ಮಾಡಿ ಈ ವರ್ಷದ ಕೊನೆಯ ವೇಳೆಗೆ ನೀರನ್ನು ಪ್ರಾಯೋಗಿಕವಾಗಿ ಹರಿಸುತ್ತೇನೆ. ಈಗಾಗಲೇ ದಾಖಲೆ ನೀಡಿರುವಂತಹ ರೈತರಿಗೆ ಮೂರು ಕೋಟಿಗಳಷ್ಟು ಪರಿಹಾರದ ಹಣ ನೀಡಿದ್ದೇನೆ. ಅದೇ ರೀತಿ ಗ್ಯಾರೇಹಳ್ಳಿ ಭಾಗದ ರೈತರ ಮನವೊಲಿಸುವ ಕೆಲಸ ಮಾಡಿದ್ದೇನೆ. ರೈತರು ಸಹಕರಿಸಿದರೆ ಖಂಡಿತ ಈ ಹೇಮಾವತಿ ನಾಲಾ ಕಾಮಗಾರಿಯನ್ನು ಸಂಪೂರ್ಣಗೊಳಿಸುತ್ತೆನೆ ಎಂದರು.
ಕಾವೇರಿ ನೀರಾವತಿ ನಿಗದಮದ ಎಕ್ಸಿಟಿಟಿವ್ ಇಂಜಿನಿಯರ್ ಮುರುಳಿಧರ್ ಹೆಚ್.ಆರ್ ಮಾತನಾಡಿ ಮುಖ್ಯ ನಾಲೆಯಿಂದ ೧೪೨ ಕ್ಯೂಸೆಕ್ಸ್ ನೀರನ್ನು ಹಂಚಿಕೆ ಮಾಡಿದ್ದು ಈ ಹೇಮಾವತಿ ನಾಲೆಯಲ್ಲಿ ಹರಿಸಲಾಗುವುದು. ಇದು ಮರುಳು ಮಿಶ್ರೀತ ಮಣ್ಣು ಹೆಚ್ಚಾಗಿದ್ದು ಅದು ಪ್ರತಿವರ್ಷ ಕುಸಿಯುತ್ತಿದೆ. ಅದ್ದರಿಂದ ಇದಕ್ಕೆ ಕಟ್ ಆಂಡ್ ಕವರ್ ಮಾಡಿಸಲೇಬೇಕಿದೆ. ಈ ಬಗ್ಗೆ ಶಾಸಕರು ಹಾಗೂ ಸರ್ಕಾರದಿಂದ ಸಂಸದರಿ0ದ ಆಗಬೇಕಿದೆ. ಈ ಕಟ್ ಆಂಡ್ ಕವರ್ ಮಾಡದೇ ಇದ್ದರೆ ಹೂಳು ತೆಗೆಯಲು ಪ್ರತಿ ವರ್ಷ ಒಂದರಿAದ ಒಂದುವರೆ ಕೋಟಿ ಹಣ ಬೇಕಾಗುತ್ತದೆ. ಅದ್ದರಿಂದ ಶಾಸಕರಿಗೆ ಈ ಬಗ್ಗೆ ಅರಿವಿದ್ದು ಅವರು ಈಗಾಗಲೇ ಅದರ ಬಗ್ಗೆ ಕಾರ್ಯೋನ್ಮೂಖರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಸಿ.ಹೆಚ್.ದಯಾನಂದ್, ಪಿಎಲ್‌ಡಿ ಬ್ಯಾಂಕ್‌ಅದ್ಯಕ್ಷ ಹೆಚ್.ಆರ್.ಶಶಿದರ್, ನಿರ್ದೇಶಕ ರಾಮಚಂದ್ರಯ್ಯ, ಕಾವೇರಿ ನಿರಾವರಿ ನಿಗಮದ ಕೀರ್ತಿ ನಾಯ್ಕ, ಎಇ ಸೌಜನ್ಯ ಸೇರಿದಂತೆ ನೀರಾವರಿ ಹೋರಾಟಗಾರರಾದ ಆಟೋ ಮಂಜುನಾಥ್, ಶ್ಯಾವಿಗೆಹಳ್ಳಿ ಮಧು ಗುತ್ತಿಗೆದಾರರು ಮುಖಂಡರುಗಳು ಇದ್ದರು.

(Visited 1 times, 1 visits today)
Previous Articleಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ
Next Article ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ
News Desk Benkiyabale

Related Posts

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

July 23, 2025 3:56 pm ಇತರೆ ಸುದ್ಧಿಗಳು

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ

July 23, 2025 3:53 pm ಇತರೆ ಸುದ್ಧಿಗಳು

ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ

July 23, 2025 3:52 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

July 23, 2025 3:56 pm
ಇತರೆ ಸುದ್ಧಿಗಳು

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ

July 23, 2025 3:53 pm
ಇತರೆ ಸುದ್ಧಿಗಳು

ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ

July 23, 2025 3:52 pm
ಇತರೆ ಸುದ್ಧಿಗಳು

ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ

July 23, 2025 3:51 pm
ಇತರೆ ಸುದ್ಧಿಗಳು

ನಿರಂತರ ೩ ತಿಂಗಳು ಹುಳಿಯಾರುಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು: ಶಾಸಕ ಭರವಸೆ

July 23, 2025 3:49 pm
ಇತರೆ ಸುದ್ಧಿಗಳು

ಫ್ಲೋರೈಡ್ ಮುಕ್ತ ಪಾವಗಡಕ್ಕೆ ಕಾರಣಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ: ಶಾಸಕ ಎಚ್. ವಿ. ವೆಂಕಟೇಶ್ ಹೇಳಿಕೆ

July 18, 2025 3:15 pm
Our Youtube Channel
Our Picks

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

July 23, 2025 3:56 pm

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ

July 23, 2025 3:53 pm

ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ

July 23, 2025 3:52 pm

ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ

July 23, 2025 3:51 pm

ನಿರಂತರ ೩ ತಿಂಗಳು ಹುಳಿಯಾರುಕೆರೆ ಮಾರ್ಗವಾಗಿ ಬೋರನಕಣಿವೆೆಗೆ ಹೇಮಾವತಿ ನೀರು: ಶಾಸಕ ಭರವಸೆ

July 23, 2025 3:49 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕಂದಾಯ ಗ್ರಾಮ ರಚನೆ: ವಾರದೊಳಗಾಗಿ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleJuly 23, 2025 3:56 pm

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ ಕಂದಾಯ ಗ್ರಾಮ/ಉಪ ಗ್ರಾಮ/ ಬಡಾವಣೆ ರಚನೆಗೆ ಸಂಬ0ಧಿಸಿದ0ತೆ ಒಂದು ವಾರದೊಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ…

ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದನೆ

July 23, 2025 3:53 pm

ತಮಟೆ ಬಾರಿಸಿ ಎಚ್ಚರಿಸುವ ಮೂಲಕ ಗ್ರಾ.ಪಂ ವತಿಯಿಂದ ಕಂದಾಯ ವಸೂಲಾತಿ ಆಂದೋಲನ

July 23, 2025 3:52 pm

ಕನ್ನಡ ಸಾಹಿತ್ಯ ಪರಿಷತ್ತಿನ ನಡೆ, ಯುವ ಜನತೆಯ ಕಡೆ ಕಾರ್ಯಕ್ರಮ ಆಚರಣೆ

July 23, 2025 3:51 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.