BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ
  • ಜಿಲ್ಲಾಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನವಾಗುವ ಸ್ಥಳ ಪರಿಶೀಲನೆ
  • ಸಮಸ್ಯೆ ಈಡೇರಿಸಲು ಒತ್ತಾಯಿಸಿ ಸ್ಲಂ ಬೋರ್ಡ್ ಮುತ್ತಿಗೆ
  • ಸಮೀಕ್ಷೆ ಸಮರ್ಪಕ ಪಾರದರ್ಶಕತೆಯಿಂದ ನಡೆಸಲು ಆಗ್ರಹ
  • ಜೆಜೆಎಂ ಕಾಮಗಾರಿ: ಶೀಘ್ರ ಕಾರ್ಯಾದೇಶ ನೀಡುವಂತೆ ಸೂಚನೆ
  • ಹುಳಿಯಾರು ವಾರದ ಸಂತೆಗೆ ಸೌಕರ್ಯಕ್ಕಾಗಿ ರೈತರ ಧರಣಿ ೬ ನೇ ದಿನಕ್ಕೆ
  • ಹೆಚ್ಚಿನ ಸಂಖ್ಯೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರಾಗಿ ನೋಂದಣಿ ಮಾಡಿಸಿ : ವಸಂತಕುಮಾರ್
  • ಅ.೧೯ ರಂದು ಆರ್‌ಎಸ್‌ಎಸ್ ಪಥ ಸಂಚಲನ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮುಚ್ಚಿಟ್ಟ ಇತಿಹಾಸವನ್ನು ಅರಿಯಬೇಕಿದೆ: ಗುಣಶೀಲ
ತುಮಕೂರು ಜಿಲ್ಲಾ ಸುದ್ಧಿಗಳು

ಮುಚ್ಚಿಟ್ಟ ಇತಿಹಾಸವನ್ನು ಅರಿಯಬೇಕಿದೆ: ಗುಣಶೀಲ

By News Desk BenkiyabaleUpdated:January 03, 2019 4:15 pm

 ತುಮಕೂರು:

      ಭಾರತದಲ್ಲಿ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದು ಡಾ.ಬಿ.ಅಂಬೇಡ್ಕರ್ ಅವರೊಬ್ಬರೆ, ಅವರ ಸಾಹಿತ್ಯ, ಪುಸ್ತಕಗಳನ್ನು ಓದುವ ಮೂಲಕ ಈ ನೆಲದ ಮುಚ್ಚಿಟ್ಟ ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಯುವ ಸಮೂಹ ಮಾಡಬೇಕಿದೆ ಎಂದು ಉಪನ್ಯಾಸಕ ಗುಣಶೀಲ ಅಭಿಪ್ರಾಯಪಟ್ಟರು.

      ನಗರದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನಲ್ಲಿ ನಡೆದ ಸಾವಿತ್ರಿ ಬಾ ಫುಲೆ ಅವರ ಜನ್ಮ ಜಯಂತಿಯಲ್ಲಿ ಮಾತನಾಡಿದ ಅವರು ಇಂದು ಎಲ್ಲರೂ 40 ವರ್ಷಗಳ ಇತಿಹಾಸಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ, ಅದಕ್ಕಿಂತಲೂ ಹಿಂದೆ ಅಡಗಿರುವ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ, ಅಂಬೇಡ್ಕರ್ ಅವರು ಮುಚ್ಚಿಟ್ಟ ಇತಿಹಾಸವನ್ನು ಶೋಧಿಸಿದಲೇ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಅವರ ಬಗ್ಗೆ ನಾವೆಲ್ಲ ಇಂದು ತಿಳಿದುಕೊಳ್ಳುವಂತಾಗಿದ್ದು ಎಂದರು.

      ಅಂಬೇಡ್ಕರ್ ಅವರಿಗೆ ದಲಿತರ ಸ್ವಾಭಿಮಾನದ ವಿಜಯೋತ್ಸವದ ಸಂಕೇತವಾಗಿರುವ ಕೋರೆಗಾಂವ ಘಟನೆ ಬಗ್ಗೆ ಗೊತ್ತಿರಲಿಲ್ಲ, ನಮ್ಮ ಇತಿಹಾಸದಲ್ಲಿಯೂ ಅದರ ಉಲ್ಲೇಖವಿರಲಿಲ್ಲ, ಅಂಬೇಡ್ಕರ್ ಅವರು ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್‍ಗೆ ಹೋಗಿದ್ದಾಗ, ಅಲ್ಲಿ ಬ್ರಿಟಿಷ್ ಅಧಿಕಾರಿ ಬರೆದಿದ್ದ ಇತಿಹಾಸ ಪುಸ್ತಕದಲ್ಲಿ ಭೀಮಾ ಕೋರೆಗಾಂವದ ಬಗ್ಗೆ ಉಲ್ಲೇಖವಿರುವುದನ್ನು ನೋಡಿ, ಭಾರತಕ್ಕೆ ಮರಳಿದ ಆ ಪ್ರದೇಶವನ್ನು ಹುಡುಕಿಕೊಂಡು ಹೋಗಿ, ಆ ಪ್ರದೇಶದ ಇತಿಹಾಸವನ್ನು ತಿಳಿಸಿದರು, ಅಂತಹ ಅದೆಷ್ಟೋ ಇತಿಹಾಸಗಳು ಇಂದಿಗೂ ಮುಚ್ಚಿಟ್ಟಿವೆ ಎಂದು ಹೇಳಿದರು.

      ದೇಶದ ಶೂದ್ರಾತಿಶೂದ್ರರಿಗೆ ಅಕ್ಷರವನ್ನು ಕಲಿಸಿದ ಅಕ್ಷರದವ್ವ ಸಾವಿತ್ರಿ ಬಾ ಫುಲೆ ಅವರು, ಜ್ಯೋತಿಬಾಫುಲೆ ಅವರಿಂದ ಪ್ರೇರಿತರಾಗಿ ಮೌಢ್ಯದಿಂದ ಹೊರಬಂದು ಮಹಿಳೆಯರಿಗೆ ಅಕ್ಷರವನ್ನು ಕಲಿಸಿದರ ಪರಿಣಾಮವಾಗಿಯೇ ಇಂದು ಮಹಿಳೆಯರಲ್ಲಿ ಯೋಚಿಸುವ ಶಕ್ತಿ ಬಂದಿದೆ, ಮಹಿಳೆಯರಿಗೆ ಶಿಕ್ಷಣವನ್ನು ಕಲಿಸಲು ಮುಂದಾದ ಸಾವಿತ್ರಿಬಾಫುಲೆ ಅವರನ್ನು ಉನ್ನತ ವರ್ಗದವರು ಅವಾಚ್ಯವಾಗಿ ನಿಂದಿಸಿದರು, ಅವಮಾನಿಸಿದರು ಎದೆಗುಂದದೆ ಹಳ್ಳಿ ಹಳ್ಳಿಗಳನ್ನು ತಿರುಗಿ ಶಿಕ್ಷಣವನ್ನು ನೀಡಿದರು, ಅಂತಹ ಮಹಾನ್ ಚೇತನದ ಹೋರಾಟವನ್ನು ಗುರುತಿಸಿ ಅಂಬೇಡ್ಕರ್ ಅವರು ಎಲ್ಲರಿಗೂ ಉಚಿತ ಶಿಕ್ಷಣವನ್ನು ಸಂವಿಧಾನದತ್ತವಾಗಿ ನೀಡಿದರು ಎಂದರು.

      ರಾಜಾಶ್ರಯದ ವಿರೋಧದ ನಡುವೆ, ಪೇಶ್ವೆಗಳ ಅವಮಾನವನ್ನು ಸಹಿಸಿ, ವಿಕೃತ ಮನಸ್ಸಿನವರ ವಿರೋಧ ಕಟ್ಟಿಕೊಂಡು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಿ, ಶೂದ್ರರ ಕಲಿಕೆಗೆ ಅಡಿಪಾಯವನ್ನು ಹಾಕಿದ ಸಾವಿತ್ರಿಬಾಫುಲೆ ಅವರು, ಇಂದು ಹೆಣ್ಣು ಮಕ್ಕಳ ಕಲಿಕೆಗೆ ಕಾರಣವಾಗಿದ್ದಾರೆ, ಅಕ್ಷರ ಕಲಿಸಿದ ಅಕ್ಷರದವ್ವನ ಜನ್ಮದಿನವನ್ನು ನಾವು ನಿಜವಾದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಬೇಕು, ಆದರೆ ನಮ್ಮಲ್ಲಿ ಅವೈಜ್ಞಾನಿಕ ಆಚರಣೆಗಳೇ ಜಾಸ್ತಿ ಎಂದು ತಿಳಿಸಿದರು.

      ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನ ನಾಗರಾಜ್ ಅವರು ಮಾತನಾಡಿ ಬ್ರಿಟಿಷರ ಆಗಮನದ ನಂತರ ಶೂದ್ರರಿಗೆ ಶಿಕ್ಷಣ ಅವಕಾಶ ದೊರೆಯಿತು, ಮನು ವರ್ಣ ವ್ಯವಸ್ಥೆಗೆ ಅಂಟಿಕೊಂಡು ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಕಲಿಸುವ ಮೂಲಕ ಸಾವಿತ್ರಿಬಾಫುಲೆ ಶಿಕ್ಷಿತ ಸಮುದಾಯವನ್ನು ಹುಟ್ಟುಹಾಕಿದರು, 1840ರಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರದ ಅವರು, 1851ರಲ್ಲಿ ಅಸ್ಪøಶ್ಯರಿಗಾಗಿ ಶಾಲೆ ಹಾಗೂ ವಿದ್ಯಾರ್ಥಿನಿಲಯವನ್ನು ಹುಟ್ಟುಹಾಕುವ ಮೂಲಕ ದಲಿತರ ಏಳ್ಗೆಗೆ ಕಾರಣರಾದರು, ದಲಿತರನ್ನು, ಹೆಣ್ಣು ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿಯೇ ವಿಧವೆಯರಿಗೆ ಶಾಲೆ ಹಾಗೂ ವಿಧವಾ ಗೃಹಗಳನ್ನು ಹುಟ್ಟುಹಾಕಿ ಶಿಕ್ಷಣವನ್ನು ನೀಡಿದರು ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಕಾಂತ್, ಮಂಜುನಾಥ್, ರಾಜಣ್ಣ ಸೇರಿದಂತೆ ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

(Visited 46 times, 1 visits today)
Previous Articleಪ್ರಸಾದದಲ್ಲಿ ವಿಷ : ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
Next Article ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಮುಂದುವರಿಕೆ
News Desk Benkiyabale

Related Posts

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

October 16, 2025 1:03 pm ತುಮಕೂರು

ಜಿಲ್ಲಾಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನವಾಗುವ ಸ್ಥಳ ಪರಿಶೀಲನೆ

October 16, 2025 12:51 pm ತುಮಕೂರು

ಸಮಸ್ಯೆ ಈಡೇರಿಸಲು ಒತ್ತಾಯಿಸಿ ಸ್ಲಂ ಬೋರ್ಡ್ ಮುತ್ತಿಗೆ

October 16, 2025 12:45 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

October 16, 2025 1:03 pm
ತುಮಕೂರು

ಜಿಲ್ಲಾಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನವಾಗುವ ಸ್ಥಳ ಪರಿಶೀಲನೆ

October 16, 2025 12:51 pm
ತುಮಕೂರು

ಸಮಸ್ಯೆ ಈಡೇರಿಸಲು ಒತ್ತಾಯಿಸಿ ಸ್ಲಂ ಬೋರ್ಡ್ ಮುತ್ತಿಗೆ

October 16, 2025 12:45 pm
ತುಮಕೂರು

ಸಮೀಕ್ಷೆ ಸಮರ್ಪಕ ಪಾರದರ್ಶಕತೆಯಿಂದ ನಡೆಸಲು ಆಗ್ರಹ

October 16, 2025 12:44 pm
ತುಮಕೂರು

ಜೆಜೆಎಂ ಕಾಮಗಾರಿ: ಶೀಘ್ರ ಕಾರ್ಯಾದೇಶ ನೀಡುವಂತೆ ಸೂಚನೆ

October 15, 2025 12:56 pm
ತುಮಕೂರು

ಹುಳಿಯಾರು ವಾರದ ಸಂತೆಗೆ ಸೌಕರ್ಯಕ್ಕಾಗಿ ರೈತರ ಧರಣಿ ೬ ನೇ ದಿನಕ್ಕೆ

October 15, 2025 12:37 pm
Our Youtube Channel
Our Picks

ಸಚಿವರಿಂದ ನೂತನ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಪರಿಶೀಲನೆ

October 15, 2025 12:03 pm

ನ.೭ರಂದು ಜಿಲ್ಲೆಗೆ ಮುಖ್ಯಮಂತ್ರಿ ಆಗಮನ

October 15, 2025 12:00 pm

ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡ

October 13, 2025 3:11 pm

ಶ್ರೀ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮರ‍್ಷಿ ವಾಲ್ಮೀಕಿ : ಕೋಟಗುಡ್ಡದಲ್ಲಿ ಅದ್ದೂರಿ ಜಯಂತಿ ಆಚರಣೆ

October 13, 2025 2:56 pm

ವಿಜೃಂಭಣೆಯಿಂದ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ

October 13, 2025 2:47 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

By News Desk BenkiyabaleOctober 16, 2025 1:03 pm

ಹುಳಿಯಾರು: ಹುಳಿಯಾರು-ತಿಪಟೂರು ಮಾರ್ಗವಾಗಿ ಹುಳಿಯಾರು ಸೇರಿದಂತೆ ಹಂದನಕೆರೆ, ಮತಿಘಟ್ಟ ಒಳಗೊಂಡ0ತೆ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್…

ಜಿಲ್ಲಾಧಿಕಾರಿಗಳಿಂದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನವಾಗುವ ಸ್ಥಳ ಪರಿಶೀಲನೆ

October 16, 2025 12:51 pm

ಸಮಸ್ಯೆ ಈಡೇರಿಸಲು ಒತ್ತಾಯಿಸಿ ಸ್ಲಂ ಬೋರ್ಡ್ ಮುತ್ತಿಗೆ

October 16, 2025 12:45 pm

ಸಮೀಕ್ಷೆ ಸಮರ್ಪಕ ಪಾರದರ್ಶಕತೆಯಿಂದ ನಡೆಸಲು ಆಗ್ರಹ

October 16, 2025 12:44 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.