ವೈ.ಎನ್.ಹೊಸಕೋಟೆ: ಕನ್ನಡ ಸಾಹಿತ್ಯದ ಮೂಲಕ ವೈಚಾರಿಕ ಪ್ರಜ್ಞೆಯ ಕಟ್ಟಿಕೊಟ್ಟ ಶ್ರೇಷ್ಠ ಕವಿ ಕುವೆಂಪು ಎಂದು ಹಿರಿಯ ವಕೀಲ ಎಂ.ನಾಗೇ0ದ್ರಪ್ಪ ತಿಳಿಸಿದರು.
ಹೋಬಳಿಯ ಪೋತಗಾನಹಳ್ಳಿ ಗ್ರಾಮದಲ್ಲಿ ಭಾನುವಾರದಂದು ಕುವೆಂಪು ಜನ್ಮದಿನಾಚರಣೆ ಸಮಿತಿಯು ಹಮ್ಮಿಕೊಂಡಿದ್ದ ಶತಮಾನ ಸಂಭ್ರಮದ ನಾಡಗೀತೆ ಜಾಗೃತಿ ಬೈಕ್ ಜಾಥವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕವಿ ಕುವೆಂಪು ವೈಚಾರಿಕ ಅರಿವಿನ ಮೂಲಕ ವಿಶ್ವಮಾನವ ಸಂದೇ ಶವನ್ನು ಕೊಟ್ಟವರು ಮತ್ತು ಮೌಢ್ಯಗಳನ್ನು ಮೀರಿ ಬೆಳಯಬೇಕು ಎಂದು ತಿಳುವಳಿಕೆ ನೀಡವರು. ಅಂತ ಮಹಾನ್ ಚೇತನದ ಚಿಂತನೆ ಗಳನ್ನು ಗ್ರಾಮೀಣ ಮಟ್ಟದಲ್ಲಿ ಪಸರಿಸುವ ಸಲುವಾಗಿ ಪೋತಗಾ ನಹಳ್ಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ತಾಲ್ಲೂಕಿನಲ್ಲಿರುವ ಯಾವುದೇ ಪಂಚಾಯಿತಿ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿಲ್ಲ. ಇದೊಂದು ವಿಶೇಷ ಕಾರ್ಯಕ್ರಮ. ಪ್ರತಿ ಪಂಚಾ ಯಿತಿಯಲ್ಲೂ ಇಂತಹ ಕಾರ್ಯಕ್ರಮಗಳು ನೆರವೇರಬೇಕು ಮತ್ತು ಈ ಕಾರ್ಯಕ್ರಮ ಗ್ರಾಮ ದಲ್ಲಿ ಹಿರಿಯರು, ಮಕ್ಕಳು ಎಲ್ಲರನ್ನೂ ಸೇರಿಸಿ ಕೊಂಡು ರೂಪುಗೊಳ್ಳಬೇಕು. ಕುವೆಂಪುರವರ ವಿಚಾರಧಾರೆ ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂದರು.
ನಿವೃತ್ತ ಉಪನಿರ್ದೇಶಕ ಬಸಲಿಂಗಪ್ಪ ಮಾತ ನಾಡಿ ಗ್ರಾಮೀಣ ಮಟ್ಟಕ್ಕೂ ಕುವೆಂಪುರವರ ವಿಚಾರಗಳನ್ನು ತಂದು ಮುಟ್ಟಿಸುತ್ತಿರುವ ಹರಿಕೃಷ್ಣ ಮತ್ತು ತಂಡದವರ ಶ್ರಮ ಮೆಚ್ಚುವಂತಹದ್ದು. ನಾವು ನಮ್ಮ ನಾಡನ್ನು ಗೌರವಿಸಬೇಕು, ಸಂಭ್ರಮಿಸಬೇಕು ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯಬೇಕು ಎಂಬ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ರವರು ನಾಡಗೀತೆಯನ್ನು ಬರೆದು ತಿಳಿಸಿದರು. ಕುವೆಂಪು ರವರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಎಲ್ಲಾ ಪಂಚಾಯಿತಿಗಳಲ್ಲಿ ಕಾರ್ಯ ಕ್ರಮಗಳ ಮೂಲಕ ಮಾಡಬೇಕು ಎಂದು ತಿಳಿಸಿದರು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೊ.ಮ.ನಾಗರಾಜು ಮಾತನಾಡಿ, ರಾಷ್ಟ್ರಕವಿ ಕುವೆಂಪು ರವರ ವೈಚಾರಿಕೆ ಪ್ರಜ್ಞೆ ಮಲೆನಾ ಡಿನಿಂದ ಬಯಲು ಬೀಡಿನ ಈ ಗ್ರಾಮೀಣ ಪ್ರದೇಶಕ್ಕೂ ಪಸರಿಸುತ್ತಿರುವುದು ಸಂತಸದ ವಿಷಯ. ವಿಶ್ವಕವಿ ರಚಿಸಿರುವ ನಾಡಗೀತೆ ಪ್ರಸ್ತುತ ಶತಮಾನ ಕಾಲ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಪೋತಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಬೈಕ್ ಜಾಥ ಮೂಲಕ ನಾಡಗೀತೆ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಕಾರ್ಯಕ್ರಮಗಳು ಕನ್ನಡ ಸಂಘಟನೆಗಳಿ0ದ ನಿರಂತರವಾಗಲಿ ಎಂದರು.
ಪೋತಗಾನಹಳ್ಳಿ ಗ್ರಾಮದ ಕುವೆಂಪು ವೃತ್ತದಲ್ಲಿ ಎಂ.ನಾಗೇ0ದ್ರಪ್ಪ ರವರಿಂದ ಹಸಿರು ನಿಶಾನೆಯ ಮೂಲಕ ಚಾಲನೆ ಪಡೆದು ಬೈಕ್ ಜಾಥ, ಪೋತ ಗಾನಹಳ್ಳಿ ಹೊಸದುರ್ಗ, ವೈ.ಎನ್.ಹೊಸಕೋಟೆ, ಆರ್.ಡಿ. ರೊಪ್ಪ, ದಳವಾಯಿಹಳ್ಳಿ, ಭೀಮನಕುಂಟೆ, ಕುಣಿಹಳ್ಳಿ ಮತ್ತು ಇಂದ್ರಬೆಟ್ಟ ಗ್ರಾಮಗಳ ಮೂಲಕ ಸಾಗಿ ಪೋತಗಾನಹಳ್ಳಿಯಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ನಾಡಗೀತೆಯನ್ನು ಹಾಡುವ ಮೂಲಕ ಸಂಭ್ರಮಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪುಷ್ಪಾವತಿ, ಕುವೆಂಪು ಜನ್ಮದಿನಾಚರಣೆ ಸಮಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ.ಹೆಚ್, ಗೌರವಾಧ್ಯಕ್ಷ ಸಿ.ಪಾತನ್ನ, ಉಪಾಧ್ಯಕ್ಷ ಪಿ.ಆರ್.ಮಾರುತೀಶ್, ಹೆಚ್.ರಾಮಕೃಷ್ಣ, ಸಮಿತಿಯ ಸದಸ್ಯ ಚೈತನ್ಯ ಪ್ರಭು, ಬಲರಾಮ, ನಾರಾಯ ಣಪ್ಪ, ಸಿ.ಆರ್.ಪಿ ನಾಗರಾಜು ಇತರರು ಹಾಜರಿದ್ದರು.

(Visited 1 times, 1 visits today)