
ತುಮಕೂರು: ನಗರದ ಟೌನ್ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಬಳಿ, ಶ್ರೀಲಕ್ಷಿö್ಮದೇವಿ ಟ್ರಸ್ಟ್(ರಿ), ಜಯಪುರ ಬಡಾವಣೆಯ ನಾಗರಿಕರು ಮಾ.೨೫ ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಯುವ ವಕೀಲರು ಹಾಗೂ ಛಲವಾದಿ ಮಹಾಸಭಾ ರಾಜ್ಯ ಸಂಘಟನಾ ಸಂಚಾಲಕರಾದ ಟಿ.ಆರ್.ನಾಗೇಶ್ ಅವರ ನೇತೃತ್ವದಲ್ಲಿ ಜಯಪುರ ಬಡಾವಣೆಯ ಯುವ ಕರು ಪರಸ್ವರ ಕೈ ಹಿಡಿದು,ಸರಕಾರದ ನಡೆಯನ್ನು ಖಂಡಿಸಿ, ನ್ಯಾ.ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ, ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ವಕೀಲರಾದ ಟಿ.ಆರ್. ನಾಗೇಶ್, ನ್ಯಾ.ನಾಗಮೋಹನ್ದಾಸ್ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ದೋಷಪೂರಿಕ ಮತ್ತು ಪಕ್ಷ ಪಾತದಿಂದ ಕೂಡಿದೆ.ಗೊಂದಲ ಬಗೆಹರಿಸುವ ಬದಲು, ಹೊಲಯ ಸಮುದಾಯದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನವನ್ನು ಮಾಡಿದೆ.ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರಕಾರ ಕೇವಲ ೧ ಜಾತಿಯ ಒತ್ತಡಕ್ಕೆ ಮಣಿದು ಶೇ೧೫ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ.ನಮ್ಮ ವಿರೋಧದ ನಡುವೆಯೂ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ ಬಲಗೈ ಸಮುದಾಯಗಳ ವಿರೋಧವನ್ನು ಎದುರಿಸಬೇಕಾಗುತ್ತದೆ.ಬಲಗೈ ಸಮುದಾಯಗಳ ಈ ಹೋರಾಟಕ್ಕೆ ಜಯಪುರ ಬಡಾವಣೆಯಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಜಯಪುರದ ಅಧ್ಯಕ್ಷರಾದ ಟಿ.ಸಿ.ವಿಜಯಕುಮಾರ್, ಉಪಾಧ್ಯಕ್ಷರಾದ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್, ಸಿ.ಗುರುಶಂಕರ್, ಮಹದೇವ್, ರುದ್ರೇಶ್, ಗಿರೀಶ್, ಡಿ.ರಾಜು, ಲೋಕೇಶ್, ಕೃಷ್ಣಮೂರ್ತಿ, ಶಿವಶಂಕರ್, ರಾಜಣ್ಣ, ಗಿರೀಶ್, ತ್ರಿಲೋಕ್ ಮತ್ತಿತರರು ಪಾಲ್ಗೊಂಡಿದ್ದರು.





