ತುಮಕೂರು: ನಗರದ ಮಧ್ಯಭಾಗದಲ್ಲಿರುವ ಶತಮಾನವನ್ನು ಕಂಡಿರುವ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಸಾಂಸ್ಕöÈತಿಕ, ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನಾ ಸಮಾರಂಭದ ಜೊತೆಯಲ್ಲಿ ವಿದ್ಯಾರ್ಥಿನಿಯರಿಗೆ ಮಧ್ಯಾನ್ಹದ ಭೋಜನ ವ್ಯವಸ್ಥೆಯ ಪ್ರಾರಂಭೋತ್ಸವವೂ ಸಹ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ವಹಿಸಿದ್ದರು. ಸದರಿ ಕಾಲೇಜಿನ ಮಧ್ಯಾನ್ಹದ ಭೋಜನ ಯೋಜನೆಯ ಕಲ್ಪಾಮೃತ ಫೌಂಡೇಷನ್ ಸದಸ್ಯರುಗಳಾದ ಶ್ರೀ ಟಿ.ಎನ್.ಮಧುಕರ್, ಅಧ್ಯಕ್ಷರು, ಶ್ರೀ ಬಿ.ಆರ್.ಉಮೇಶ್, ಕಾರ್ಯದರ್ಶಿಗಳು, ಶ್ರೀ ಎಸ್.ಪಿ.ಚಿದಾನಂದ, ಖಜಾಂಚಿ ಹಾಗೂ ಶ್ರೀಮತಿ ಅನ್ನಪೂರ್ಣ ಡಿ.ಬಿ., ಪ್ರಾಂಶುಪಾಲರು, ಶ್ರೀಮತಿ ರಾಧಾ ಎಂ.ಎಸ್., ಉಪನಿರ್ದೇಶಕರು, ಶಿಕ್ಷಣ ಇಲಾಖೆ, ಪದವಿ ಪೂರ್ವ ರವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸರಿಸುಮಾರು ೧೨೦೦ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಸ್ಥೆಯ ಎಲ್ಲ ಪ್ರಾಧ್ಯಾಪಕರು, ಹಿರಿಯ ಉಪನ್ಯಾಸಕರುಗಳು ಭಾಗವಹಿಸಿದ ಕಾರ್ಯಕ್ರಮವಾಗಿತ್ತು. ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯ ಜಪಾನಂದಜೀ ರವರು ವಿದ್ಯಾರ್ಥಿನಿಯರು ಕೇವಲ ಅಂಕಕ್ಕಾಗಿ ಶಿಕ್ಷಣವನ್ನು ಪಡೆಯುವುದಲ್ಲ, ಬದಲಾಗಿ ಜೀವನದಲ್ಲಿ ಮಹತ್ಕಾರ್ಯವನ್ನು ಕೈಗೊಂಡು ಒಂದು ಛಾಪನ್ನು ಮೂಡಿಸಬೇಕು ಎಂದು ಕರೆಯಿತ್ತರು. ವಿದ್ಯಾರ್ಥಿನಿಯರು ಇತ್ತೀಚೆಗೆ ಶಿಕ್ಷಣದ ಕಡೆಗೆ ಗಮನವಿಡದೆ ಚಿತ್ರನಟರು ಮತ್ತಿತರರನ್ನು ಜೀವನದ ಆದರ್ಶಗಳು ಎಂದು ಗುರುತಿಸಿ ತಮ್ಮ ವೈಯುಕ್ತಿಕ ಜೀವನವನ್ನು ಸಂಪೂರ್ಣ ಹಾಳುಮಾಡಿಕೊಳ್ಳುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ ಜೀವನದ ಗುರಿ ಉತ್ಕಷ್ಟವಾಗಿರಬೇಕು ಹಾಗೂ ಈ ಜಗತ್ತಿನಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಗುರುತನ್ನು ಮೂಡಿಸಬೇಕು ಎಂಬ ಸ್ವಾಮಿ ವಿವೇಕಾನಂದರ ವಿಚಾರವನ್ನು ಅನೇಕಾನೇಕ ಉದಾಹರಣೆಗಳ ಮೂಲಕ ಜೊತೆಯಲ್ಲಿ ಅರಿಸ್ಟಾಟಲ್‌ನ ಅದ್ಭುತವಾದ ಬೋಧನೆಯಾದ ಕೇವಲ ಮಿದುಳಿಗೆ ಶಿಕ್ಷಣ ಕೊಡುವುದಲ್ಲ, ಜೊತೆ ಜೊತೆಯಲ್ಲಿ ಹೃದಯಕ್ಕೂ ಶಿಕ್ಷಣವನ್ನು ನೀಡಿ ಹೃದಯವಂತರಾದರೆ ಮಾತ್ರ ನಿಜವಾದ ಅರ್ಥದಲ್ಲಿ ಶಿಕ್ಷಣ ಪಡೆದಂತೆ ಎಂಬುದನ್ನು ಬಹಳ ಮನೋಜ್ಞಕರವಾಗಿ, ಪರಿಣಾಮಕಾರಿಯಾಗಿ ತಿಳಿಸಿದರು.
ಮಾನ್ಯ ಜಿಲ್ಲಾಧಿಕಾರಿಗಳಿಗೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಎಂಪ್ರೆಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾನ್ಹದ ಭೋಜನ ವ್ಯವಸ್ಥೆ ನಡೆಸುತ್ತಾ ಬರುತ್ತಿರುವುದನ್ನು ವಿವರಿಸಿ ಸರಿಸುಮಾರು ೪೦೦೦ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಇಡೀ ದೇಶದಲ್ಲಿಯೇ ಪ್ರಪ್ರಥಮವಾಗಿ ವಿಶ್ವವಿದ್ಯಾನಿಲಯದಿಂದ ಆರಂಭವಾದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂಬುದನ್ನು ವಿವರಿಸಿದರು. ಗೌರವಾನ್ವಿತ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೋಜನದೊಂದಿಗೆ ಸಿಹಿಯನ್ನು ವಿತರಿಸಿದ ದೃಶ್ಯ ಅತ್ಯಂತ ಗಮನಾರ್ಹವಾಗಿತ್ತು. ಒಟ್ಟಿನಲ್ಲಿ ಈ ಯೋಜನೆಯ ಇತರ ಸದಸ್ಯರುಗಳಾದ ಶ್ರೀ ಟಿ.ಎನ್.ಮಧುಕರ್, ಶ್ರೀ ಉಮೇಶ್ ಹಾಗೂ ಸಂಸ್ಥೆಯ ಪ್ರಾಂಶುಪಾಲರು ಮತ್ತಿತರರು ಪಾಲ್ಗೊಂಡಿದ್ದು ನಿಜಕ್ಕೂ ಪೂಜ್ಯ ಸ್ವಾಮಿ ಜಪಾನಂದಜೀ ರವರ ಮಾರ್ಗದರ್ಶನದಲ್ಲಿ ಈ ತೆರನಾದ ಯೋಜನೆಗಳು ಇನ್ನೂ ಹೆಚ್ಚಾಗಿ ಮುಂದುವರಿಯಲಿ ಎಂದು ಸನ್ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದರು.

(Visited 1 times, 1 visits today)