BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ
  • ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ
  • ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ
  • ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ
  • ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ
  • ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ
  • ದಾಖಲೆ ಸಮೇತ ಗ್ರಾಮಸ್ಥರ ಆರೋಪ
  • ಬೆಳಗಾವಿಯಲ್ಲಿ ತುಮಕೂರು ಗ್ರಾಮಾಂತರ ಅಭಿವೃದ್ಧಿಯ ಕುರಿತು ಸಿಎಂ ಗಮನ ಸೆಳೆದ ಶಾಸಕ ಸುರೇಶ್ ಗೌಡ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು : ಕಣ್ಮನಸೆಳೆದು ಯಶಸ್ವಿಯಾದ ಫಲಪುಷ್ಪ ಪ್ರದರ್ಶನ
ಇತರೆ ಸುದ್ಧಿಗಳು

ತುಮಕೂರು : ಕಣ್ಮನಸೆಳೆದು ಯಶಸ್ವಿಯಾದ ಫಲಪುಷ್ಪ ಪ್ರದರ್ಶನ

By News Desk BenkiyabaleUpdated:February 03, 2020 7:12 pm

ತುಮಕೂರು : 

     ವರ್ಣಮಯ ಹೂಗಳಿಂದ ಅರಳಿದ್ದ ಆಕೃತಿಗಳು, ನಾನಾ ಹಣ್ಣುಗಳಿಂದ ಮೂಡಿದ್ದ ಆಕಾರಗಳು, ಮಕ್ಕಳನ್ನು ಸೆಳೆಯುವ ಕಾರ್ಟೂನುಗಳು, ಕಲಾವಿದನ ಕಲಾಕುಂಚದಲ್ಲಿ ರೂಪುಗೊಂಡಿದ್ದ ನಾನಾ ಚಿತ್ರಗಳು, ಕಲಾಕಾರಗಳು, ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆಗಳು, ಅರಣ್ಯ-ಗುಡ್ಡದ ಪ್ರದೇಶಗಳು, ಜೇನು ಸಾಕಾಣಿಕೆಯ ಮಾದರಿ, ಹೀಗೆ ಹಳ್ಳಿ ಸೊಗಡನ್ನು ಬಿಂಬಿಸುವ ಪಂಚಾಯತಿ ಕಟ್ಟೆಯ ನೋಟ ಹೀಗೆ ನಾನಾ ಬಗೆಯಲ್ಲಿ ಜನವರಿ 31 ರಿಂದ ಮೂರು ದಿನಗಳ ಕಾಲ ತುಮಕೂರು ನಗರಲ್ಲಿ ಅನಾವರಣಗೊಂಡಿದ್ದ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನಗಳಿಗೆ ತಂಪು ನೀಡಿತು.

      ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಕೃಷಿ ಇಲಾಖೆ ಆತ್ಮ ಯೋಜನೆ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಮೂರು ದಿನವೂ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿತ್ತು. ಈ ಫಲಪುಷ್ಪ ಪ್ರದರ್ಶನ `ಸಕಲವೂ ಒಳಗೊಂಡ ನಿಸರ್ಗ ಮಾತೆ’ಯನ್ನು ಒಂದೇ ಸೂರಿನಡಿ ನೋಡಿದಂತಹ ಅನುಭವವನ್ನು ಮನಸ್ಸಿಗೆ ಉಣಬಡಿಸಿತು.

      ಬಗೆಬಗೆಯ ಪುಷ್ಪಗಳು, ಹಣ್ಣುಗಳ ಪ್ರದರ್ಶನ, ವಿವಿಧ ಹಣ್ಣು-ತರಕಾರಿ ತಳಿಗಳ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವದ ಅರಿವು ಪ್ರದರ್ಶನ, ರೈತಾಪಿ ವರ್ಗ ಅಳವಡಿಸಿಕೊಳ್ಳಬಹುದಾದ ನೂತನ ತಂತ್ರಜ್ಞಾನ, ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಾನವನ, ಕಲಾವಿದನ ಕೈಯಲ್ಲಿ ಬಳೆಗಳಿಂದ ಮೂಡಿದ್ದ ಲಿಂ.ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಕಲಾಕೃತಿ, ತೋಟಗಾರಿಕಾ ಪಿತಾಮಹ ಡಾ||ಎಂ.ಹೆಚ್.ಮರೀಗೌಡ ಅವರ ಪ್ರತಿಮೆಗೆ ಮಾಡಿದ್ದ ಅಲಂಕಾರ, ಹೂಗಳಿಂದ ಕಂಗೊಳಿಸುತ್ತಿದ್ದ ಆನೆ, ಜಿರಾಫೆ, ನವಿಲು, ಚಿಟ್ಟೆ, ಮರಗಿಡ ಬೆಳೆಸಿ ಕಾಡು, ವನ್ಯಜೀವಿ ರಕ್ಷಿಸಿ ಎಂಬ ಪರಿಕಲ್ಪನೆ, ಸ್ವಾಮಿ ವಿವೇಕಾನಂದರ ಮರಳಿನ ಕಲಾಕೃತಿ, ಸೆಲ್ಫೀ ಪಾಯಿಂಟ್ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡಗಳು ಪ್ರದರ್ಶನದಲ್ಲಿದ್ದವು.

      ರೈತರು ಮತ್ತು ನಾಗರಿಕರಿಗೆ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯಿಂದ 40 ಮಳಿಗೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳಿಂದ ಸುಮಾರು 120 ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಲಾವಿದರಿಂದ ಸಂಗೀತ, ಭರತನಾಟ್ಯ ಮತ್ತು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ನೃತ್ಯ ನೋಡುಗರನ್ನು ಕುತೂಹಲದ ಲೋಕಕ್ಕೆ ಒಯ್ಯುವಂತಿತ್ತು.

   ರೈತರಿಂದ ಮೆಚ್ಚುಗೆ :

      ಪ್ರದರ್ಶನದಲ್ಲಿ ದೇಶದ ಬೆನ್ನೆಲುಬು ರೈತನಿಗೆ ವಿಶೇಷ ಒತ್ತು ನೀಡಲಾಗಿತ್ತು. ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವುದೇಗೆ?, ಜೇನು ಕೃಷಿ ಅಳವಡಿಕೆ ಹೇಗೆ?, ಬೇಸಾಯದ ಕ್ರಮಗಳ ಮಾದರಿಗಳು, ನೀರು ಉಳಿಸಿ ಉತ್ತಮ ಬೆಳೆ ಬೆಳೆಯುವ ತಂತ್ರಜ್ಞಾನ, ತರಕಾರಿ ಬೆಳೆ ಬೆಳೆಯುವ ಕ್ರಮ, ತೆಂಗು ಪುನಶ್ಚೇತನ, ಒಂದು ಎಕರೆಯಲ್ಲಿ ಸಮಗ್ರ ಕೃಷಿ ಅಳವಡಿಕೆ, ಮಹಾತ್ಮ ಗಾಂಧಿ ನರೇಗಾದಲ್ಲಿ ಸಿಗುವ ಸೌಲಭ್ಯಗಳು ಸೇರಿದಂತೆ ತೋಟಗಾರಿಕಾ ಕ್ಷೇತ್ರದ ನಾನಾ ಮಾದರಿಗಳು ರೈತರ ಮೆಚ್ಚುಗೆಗೆ ಪಾತ್ರವಾಯಿತು.

      ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ಮೂಡಿಬಂದಿತ್ತು. ರೈತರ ಕನಸನ್ನು ಸಾಕಾರಗೊಳಿಸುವ ಪ್ರದರ್ಶನ ಇದಾಗಿತ್ತು. ರೈತರಿಗೆ ತುಂಬಾ ಅನುಕೂಲವಾಗಿತ್ತು ಎಂದು ಬಾಳೆ ಕೃಷಿ ಅಳವಡಿಕೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದಿರುವ ಊರುಕೆರೆ ಷಣ್ಮುಖಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನದಾತರಿಗೆ ತರಬೇತಿ:

      ಹನಿನೀರಾವರಿ ಘಟಕದ ತಾಂತ್ರಿಕ ಅಳವಡಿಕೆ ನಿರ್ವಹಣೆ ಹಾಗೂ ಖುಷ್ಕಿ ಬೇಸಾಯ ಪದ್ಧತಿ ಬಗ್ಗೆ ಕೆವಿಕೆ ವಿಜ್ಞಾನಿ ಡಾ.ನಾಗಪ್ಪ ದೇಸಾಯಿ, ಸುಧಾರಿತ ಬೇಸಾಯ ಪದ್ಧತಿ ಕುರಿತು ಅಖಿಲ ಭಾರತೀಯ ತೆಂಗು ಸಮನ್ವಯ ಯೋಜನೆ ತೋಟಗಾರಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ.ಆರ್.ಸಿದ್ದಪ್ಪ, ಜೇನುಕೃಷಿ ಕುರಿತು ಜಗದೀಶ್ ಸೇರಿದಂತೆ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳಿಂದ ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ರೈತರು ಕಾರ್ಯಗಾರದಲ್ಲಿ ಕೃಷಿಯ ಬಗ್ಗೆ ಮಾಹಿತಿ ಪಡೆದರು.

ಶಾಲಾ-ಕಾಲೇಜು ಮಕ್ಕಳಿಂದಲೂ ವೀಕ್ಷಣೆ :

      ಕೈಬೀಸಿ ಕರೆಯುತ್ತಿದ್ದ ಫಲಪುಷ್ಪ ಪ್ರದರ್ಶನಕ್ಕೆ ವಯಸ್ಸಿನ ಹಂಗಿರಲಿಲ್ಲ. ಮಕ್ಕಳಿಂದ ಹಿಡಿದು ವಯಸ್ಕರನ್ನೂ ತನ್ನತ್ತ ಸೆಳೆದಿತ್ತು. ಯುವಕ ಯುವತಿಯರಂತೂ ಹೂಗಳ ಆಕರ್ಷಣೆಗೆ ಮನಸೋತಿದ್ದರು. ವಿವಿಧ ಶಾಲಾ ಮಕ್ಕಳನ್ನು ಶಿಕ್ಷಕರು ಕರೆತಂದು ಪ್ರದರ್ಶನ ವೀಕ್ಷಿಸಲಾಯಿತು. ರಾತ್ರಿ ಸಮಯವಂತೂ ಕುಟುಂಬವೇ ಪ್ರದರ್ಶನದಲ್ಲಿ ನೆರೆಯುತ್ತಿತ್ತು.

       ನಾಗರಿಕರ ಜೊತೆಗೆ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಫಲಪುಷ್ಪ ಪ್ರದರ್ಶನದಲ್ಲಿ ಜನಸಂದಣಿ ದಟ್ಟವಾಗಿತ್ತು. ವರ್ಷದಿಂದ ವರ್ಷಕ್ಕೆ ಪ್ರದರ್ಶನವು ಬೆಳವಣಿಗೆಯನ್ನು ಸಾಧಿಸುತ್ತಿದೆ. ಫಲಪುಷ್ಪ ಪ್ರದರ್ಶನ ನೋಡಲು ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಜನರಿಗೆ ಅನುಕೂಲವಾಗುವಂತೆ ನಮ್ಮ ಜಿಲ್ಲೆಯಲ್ಲೇ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

                         –    ಬಿ.ರಘು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು

 

(Visited 93 times, 1 visits today)
Previous Articleಖಾಸಗಿಕರಣ ವಿರೋಧಿಸಿ ಎಲ್‍ಐಸಿ ನೌಕರರ ಸಾಂಕೇತಿಕ ಪ್ರತಿಭಟನೆ
Next Article ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ-ಶಾಸಕ
News Desk Benkiyabale

Related Posts

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm
ಇತರೆ ಸುದ್ಧಿಗಳು

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm
ಇತರೆ ಸುದ್ಧಿಗಳು

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm
ಇತರೆ ಸುದ್ಧಿಗಳು

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
ಇತರೆ ಸುದ್ಧಿಗಳು

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
ಇತರೆ ಸುದ್ಧಿಗಳು

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾ. ಶಾಖೆ ಆರಂಭ

December 16, 2025 4:06 pm
Our Youtube Channel
Our Picks

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

December 16, 2025 4:12 pm

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm

ಸೋಲಿನ ನಿರಾಶೆಗಿಂತ, ಮಾನವೀಯ ಮೌಲ್ಯ ತುಂಬುವುದು ಮುಖ್ಯ

December 16, 2025 4:08 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ

By News Desk BenkiyabaleDecember 16, 2025 4:12 pm

ತುಮಕೂರು: ಕ್ರೀಡಾಕೂಟಗಳು ವಿದ್ಯಾರ್ಥಿಗಳ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಪ್ರತಿನಿತ್ಯ ದೇಹವನ್ನು ದಂಡಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ…

ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ

December 16, 2025 4:11 pm

ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

December 16, 2025 4:10 pm

ಹುಳಿಯಾರು ಪಪಂಗೆ ಅಧ್ಯಕ್ಷರ ಅವಿರೋಧ ಆಯ್ಕೆ

December 16, 2025 4:09 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.