ಕೊರಟಗೆರೆ: ಪೊಲೀಸ್ಠಾಣೆ ಮೊ.ಸಂಖ್ಯೆ: ೫೬/೨೦೨೧. ಎಸ್.ಸಿ ಸಂಖ್ಯೆ ೫೦೨೩/೨೦೨೧ರ ಪ್ರಕರಣದಲ್ಲಿ ದಿನಾಂಕ:-೧೦-೦೩-೨೦೨೧ರAದು ಬೆಳಗ್ಗೆ ೭:೦೦ ಗಂಟೆ ಸಮಯದಲ್ಲಿ ಸಿ.ಎನ್ ದುರ್ಗ ಹೋಬಳಿ, ಥರಟಿಗ್ರಾಮದಲ್ಲಿ ಹನುಮಯ್ಯರವರ ಮಗಳು ಯಶೋಧರವರು ತನ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆರೋಪಿಯಾದ ದೇವರಾಜು ಬಿನ್ ಗೋವಿಂದಪ್ಪ, ೪೯ ವರ್ಷ, ಥರಟಿಗ್ರಾಮ ಈತನು,ತನ್ನ ಹೆಂಡತಿ ಯಶೋಧರವರ ಮೇಲೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿ ಹಾಗೂ ತುಮಕೂರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಅನುಮಾನ ಪಟ್ಟು ಆರೋಪಿಯು ಯಶೋದಮ್ಮರವ ರನ್ನು ಏನಾದರೂ ಮಾಡಿ ಕೊಲೆ ಮಾಡಿ ನಂತರ ಬೇರೆ ಮದುವೆಯಾಗಬೇಕೆಂಬ ಉದ್ದೇಶವಿಟ್ಟುಕೊಂಡು ಕೊಲೆ ಮಾಡುವಉದ್ದೇಶದಿಂದ ಆರೋಪಿಯು ಯಶೋದರವರ ಬಲತಲೆಗೆ ಮೂರು-ನಾಲ್ಕು ಬಾರಿ ಮಚ್ಚಿನಿಂದ ಬಲವಾಗಿ ಹೊಡೆದಾಗ ಬಲತಲೆಗೆ, ಬಲಕಿವಿಗೆ ಮತ್ತು ಬಲಭಾಗದ ಹಿಂಭಾಗದ ಕುತ್ತಿಗೆಗೆ ಏಟು ಬಿದ್ದುತೀವ್ರ ಸ್ವರೂಪದ ರಕ್ತ ಗಾಯವಾಗಿತುಮಕೂರು ಜಿಲ್ಲಾ ಆಸ್ಪತ್ರೆ, ಬೆಂಗಳೂರು ನಗರದಲ್ಲಿರುವ ವಿಕ್ಟೋರಿಯಾ ಆಸ್ಪತೆ, ನಿಮ್ಹಾನ್ಸ್ಆಸ್ಪತ್ರೆ, ಪೀಪಲ್ಟ್ರೀಆಸ್ಪತ್ರೆ, ಕಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ…
Author: News Desk Benkiyabale
ತಿಪಟೂರು: ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ, ಮತ್ತು ಲಕ್ಷಾಂತರ ಹಣ ಪ್ರವೇಶ ಶುಲ್ಕವಾಗಿ ಕಟ್ಟಲು ಕಷ್ಟವಾಗುತ್ತಿರುವುದನ್ನು ಗಮನಿಸಿ ತಿಪಟೂರಿನ ಹತ್ತಿರದ ಕೋಟೆನಾಯಕನಹಳ್ಳಿ ಬಳಿ ವಿದ್ಯಾರ್ಥಿಗಳಿಗೆ ಗುರುಕುಲ ಪದ್ದತಿಯಂತೆ ಆ ಚಾರ, ವಿಚಾರ, ಸಂಸ್ಕೃತಿ, ಮತ್ತು ಗುಣಮಟ್ಟದ ಬೋಧನೆಯೊಂದಿಗೆ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ತೆರೆದೆವು ತೆರೆದ ಮೂರು ವರ್ಷಗಳಲ್ಲಿ ಅತ್ಯುತ್ತಮ ಫಲಿತಾಂಶ ಬಂದಿರುವುದು ತೃಪ್ತಿಕರವಾಗಿದೆ ಈ ವಿಚಾರವಾಗಿ ಪ್ರಾಂಶುಪಾಲರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ರುದ್ರಮುನಿ ಸ್ವಾಮೀಜಿ ತಿಳಿಸಿದರು. ನಗರದ ಹೊರವಲಯದಲ್ಲಿರುವ ತಮ್ಮ ಸಂಸ್ಥೆಯ ಎಸ್ ಆರ್ ಎಸ್ ಕಾಲೇಜು ಆವರಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿ ಕೆ, ಲಕ್ಷ್ಮಿ ರಾಜ್ಯಕ್ಕೆ ೧ರ್ಯಾಂಕ್ ಪಡೆದು ಕಾಲೇಜಿನ ಕೀರ್ತಿಪತಾಕೆ ಎತ್ತರಕ್ಕೆ ಹಾರಿಸಿದ್ದಾರೆ, ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿನಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಪ್ರಾಂಶುಪಾಲ ಪ್ರಕಾಶ್ ಮಾತನಾಡಿ ನಮ್ಮ ಕಾಲೇಜು ಕಳೆದ ವರ್ಷ ೮೭% ಫಲಿತಾಂಶ ಪಡೆದು ಈ ಬಾರಿ…
ತುಮಕೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಈ ತಿಂಗಳ ೧೧ರಂದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಸೇವಾದೀಕ್ಷಾ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಪರಮೇಶ್ ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ವೀರಶೈವ ಲಿಂಗಾಯತರಲ್ಲಿ ಸಾಮಾಜಿಕ, ಧರ್ಮ ಜಾಗೃತಿ, ಐಕ್ಯತೆ ಹಾಗೂ ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸಿ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಹಾನಗಲ್ನ ಶ್ರೀ ಕುಮಾರ ಸ್ವಾಮೀಜಿಗಳು ೧೯೦೪ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ರಾಷ್ಟç ಮಟ್ಟದಲ್ಲಿ ಸ್ಥಾಪಿಸಿದರು. ೧೨೦ ವರ್ಷಗಳಿಂದಲೂ ಸಮಾಜದ ಏಳಿಗೆಗೆ ಮಹಾಸಭೆ ಶ್ರಮಿಸುತ್ತಿದೆ ಎಂದರು. ಐದು ವರ್ಷಕ್ಕೊಮ್ಮೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಆಯ್ಕೆಯಾದ ಪದಾಧಿಕಾರಿಗಳು ಮಹಾಸಭೆಯ ಸೇವಾದೀಕ್ಷೆ ಪಡೆದು ಕಾಯಕನಿರತವಾಗುವುದು ಮಹಾಸಭೆಯ ಪರಂಪರೆ. ಅದರಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಹಾಸಭೆಯ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಸೇವಾದೀಕ್ಷೆ ಪಡೆಯುವ ಕಾರ್ಯಕ್ರಮವನ್ನು ಇದೇ ೧೧ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ…
ತುಮಕೂರು: ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ ೧೪ರಂದು ನಡೆಯಲಿರುವ ಡಾ: ಬಿ.ಆರ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಲು ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಜರುಗಿದ ಡಾ: ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಡಾ: ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯAದು ಪ್ರತಿಮೆ ಅನಾವರಣವಾಗುತ್ತಿರುವುದು ವಿಶೇಷ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆಂಗಳೂರು ಹಾಗೂ ತುಮಕೂರಿನ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಬೇಕು ಎಂದು ಸೂಚಿಸಿದ ಅವರು, ಬೌದ್ಧ ಭಿಕ್ಕುಗಳ ವಸತಿ, ಊಟೋಪಚಾರ, ವಾಹನ ವ್ಯವಸ್ಥೆ, ಮೇಲುಸ್ತುವಾರಿಯನ್ನು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ವಹಿಸಿದರು. ಕೋವಿಡ್ ಹಾಗೂ ಚುನಾವಣೆ ನಿಮಿತ್ತ ಕಳೆದ ೪ ವರ್ಷಗಳಿಂದ ಡಾ: ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ವಿಜೃಂಭಣೆಯಿAದ ಆಚರಿಸುವ ನಿಟ್ಟಿನಲ್ಲಿ ನಗರದ ಟೌನ್ಹಾಲ್ ವೃತ್ತದಿಂದ…
ತುಮಕೂರು: ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ರೀಲಕ್ಷಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೫೯೬ ಅಂಕ ಪಡೆದು ರಾಜ್ಯಕ್ಕೆ ೪ನೇ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ಅಕ್ಕಿ ವ್ಯಾಪಾರಿ ರಾಜು ಹಾಗೂ ಪ್ರಭಾವತಿ ದಂಪತಿಗಳ ಪುತ್ರಿಯಾಗಿರುವ ವಿದ್ಯಾರ್ಥಿನಿ ಶ್ರೀಲಕ್ಷಿ÷್ಮÃರವರು ವಾಣಿಜ್ಯ ವಿಭಾಗದಲ್ಲಿ ೫೯೬ ಅಂಕ ಪಡೆದು ರಾಜ್ಯದಲ್ಲೇ ೪ ಸ್ಥಾನ ಪಡೆಯುವ ಮೂಲಕ ಕಾಲೇಜು ಹಾಗೂ ತುಮಕೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾನಿಧಿ ಹಾಗೂ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಅವರು ವಿದ್ಯಾರ್ಥಿನಿ ಶ್ರೀಲಕ್ಷಿ÷್ಮÃರವರಿಗೆ ಪುಷ್ಪಗುಚ್ಛ ನೀಡಿ ಸಿಹಿ ತಿನಿಸುವ ಮೂಲಕ ಅಭಿನಂದಿಸಿದರು. ನಂತರ ಮಾತನಾಡಿದ ಪ್ರದೀಪ್ಕುಮಾರ್ ಅವರು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶ್ರೀಲಕ್ಷಿ÷್ಮÃ ಆರ್. ೫೯೬ ಅಂಕ ಪಡೆದು ರಾಜ್ಯಕ್ಕೆ ೪ ಸ್ಥಾನ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ…
ತುಮಕೂರು: ಡಿಸೇಲ್ ಮೇಲಿನ ಸೆಸ್ ಕಡಿತ, ಅಂತರರಾಜ್ಯ ಆರ್.ಟಿ.ಓ.ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.೧೫ ರಿಂದ ರಾಜ್ಯದಾದ್ಯಂತ ಲಾರಿ ಮಾಲೀಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಕೈಗೊಳಲಿದ್ದಾರೆ ಎಂದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಎಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲಾರಿ ಮಾಲೀಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಐದು ರೂ ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಇಂದಿನ ಪೈಪೋಟಿಯಲ್ಇಲಿ ನಾವು ತಕ್ಷಣವೇ ಬಾಡಿಗೆ ರೂಪದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ.ರಾಜ್ಯ ಸರಕಾರದ ನೀತಿಗಳಿಂದ ಸುಮಾರು ಆರು ಲಕ್ಷ ಲಾರಿಗಳ ಮಾಲೀಕರು ಮತ್ತು ಅವರ ಅವಲಂಬಿತರು ಬೀದಿಗೆ ಬೀಳುವುದು ಖಚಿತವಾಗಿದೆ ಎಂದರು. ರಾಷ್ಟಿçÃಯ ಹೆದ್ದಾರಿಗಳಲ್ಲದೇ ,ರಾಜ್ಯ ಹೆದ್ದಾರಿಗಳಲ್ಲಿ ಸುಮಾರು ೧೮ ಕಡೆಗಳಲ್ಲಿ ಟೋಲ್ ಕಟ್ಟಬೇಕಾಗಿದೆ. ಇದರಿಂದ ರೈತರು ಮತ್ತು ಲಾರಿ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ.ದುಡಿಮೆಯ…
ತುರುವೇಕೆರೆ: ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದವಾಗಿ ಎನ್.ಡಿ.ಎ ಮೈತ್ರಿಕೂಟದಿಂದ ಏ.೨೧ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರತಿಭಟನೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಎನ್.ಡಿ.ಎ.ಮೈತ್ರಿಕೂಟದ ಮುಖಂಡರ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ದ ಎನ್.ಡಿ.ಎ ಮೈತ್ರಿಯಿಂದ ಹೋರಾಟ ಜಿಲ್ಲಿಯಲ್ಲಿಯೇ ನಮ್ಮ ತಾಲೂಕಿನಿಂದ ಮೊದಲು ಪ್ರಾರಂಬವಾಗುತ್ತಿದ್ದು ನಂತರ ಎಲ್ಲ ತಾಲೂಕಿನಲ್ಲಿ ನೆಡೆಯಲಿದೆ. ಎಲ್ಲಿನ ಗಾಡಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಆಗಮಿಸುವ ನಿರೀಕ್ಷೆ ಇದೆ. ಉಳಿದಂತೆ ಬಿಜೆಪಿಯಿಂದ ಮಾಜಿ ಶಾಸಕ ಮಸಾಲಜಯರಾಮ್, ಎಂ.ಡಿ.ಲಕ್ಷಿö್ಮÃನಾರಾಯಣ್ ಸೇರಿದಂತೆ ಹಲವು ಮುಖಂಡರು ಆಗಮಿಸಲಿದ್ದು ಅಪಾರ ಪ್ರಮಾಣದಲ್ಲಿ ಎನ್.ಡಿ.ಎ. ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಬಡವರ ವಿರೋದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಘಲೇ ಎಲ್ಲ ವಸ್ತುಗಳ ಮೇಲು ಟ್ಯಾಕ್ ಹಾಕಿದ್ದು ಸಗಣಿ ಮೇಲೂ ಟ್ಯಾಕ್ ಹಾಕೊದನ್ನು ಬಿಟ್ಟಿದ್ದಾರೆ ಅಷ್ಟೆ…
ತುಮಕೂರು: ರಾಜ್ಯಾದ್ಯಂತ ವಿಪ್ರ ಸಮುದಾಯ ಅನುಭವಿಸು ತ್ತಿರುವ ಹಲವು ರೀತಿಯ ಸಂಕಷ್ಟಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದರ ಜೊತೆಗೆ ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವೆನೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘು ನಾಥ್ ಭರವಸೆ ನೀಡಿದರು. ಅವರು ತುಮಕೂರಿನ ವಿಪ್ರಭವನದಲ್ಲಿ ಏರ್ಪ ಟ್ಟಿದ್ದ ಸಮಾಲೋಚನಾ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು. ಆರ್ಥಿಕವಾಗಿ ದುರ್ಬಲರಾದ ವಿಪ್ರರಿಗೆ, ಮಹಿಳೆಯರಿಗೆ, ಯುವಕರಿಗೆ ಎಲ್ಲ ರೀತಿಯ ಸಹಾಯಹಸ್ತ ನೀಡುವುದು, ರಾಜ್ಯಾದ್ಯಂತ ಪ್ರವಾಸ ಮಾಡಿ, ವಿಪ್ರ ಸಮುದಾಯದ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದು, ಅದಕ್ಕನುಗುಣವಾಗಿ ಕಲ್ಯಾಣ ಯೋಜನೆಗಳನ್ನು ರೂಪಿಸುವುದು, ಬ್ರಾಹ್ಮಣ ಮಹಾಸಭೆಗೆ ಶಾಶ್ವತ ಆದಾಯ ಬರುವಂತೆ ಕ್ರಿಯಾ ಯೋಜನೆಯನ್ನು ರೂಪಿಸಿ, ಕಾರ್ಯಗತಗೊಳಿಸುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳು ಬ್ರಾಹ್ಮಣರಿಗೂ ಸಿಗುವಂತೆ ಪ್ರಾಮಾಣಿಕ ಪ್ರಯತ್ನ, ಮಹಿಳೆಯರು ಮತ್ತು ಯುವಕರಿಗೆ ಬ್ರಾಹ್ಮಣ ಮಹಾಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ, ಸಮುದಾಯದ ಹಿರಿಯ ರ ವಿಶ್ವಾಸದೊಂದಿಗೆ ಎಲ್ಲರೊಂದಿಗೆ ಸಮಾಲೋ ಚಿಸಿ ಕಾರ್ಯೋನ್ಮುಖನಾಗುತ್ತೇನೆ – ಹೀಗೆ ಅನೇಕ ಆಲೋಚನೆ-ಯೋಜನೆಗಳನ್ನು ರೂಪಿ ಸಿದ್ದು, ಅವುಗಳನ್ನು ಕಾರ್ಯರೂಪಕ್ಕೆ ತರಲು…
ತುರುವೇಕೆರೆ: ಬಡವರ ಹೆಸರಿನಲ್ಲಿ ಬಹು ವರ್ಷ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಡವರ ಶೋಷಣೆ ಮಾಡಿದೆ ಎಂದು ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಮೃತ್ಯಂಜಯ ಆಪಾದಿಸಿದರು. ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬಾನುವಾರ ನಡೆದ ಬಿಜೆಪಿಯ ೪೫ ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಕುತಂತ್ರಕ್ಕೆ ಹೆಸರುವಾಸಿ. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ಮುಸ್ಲಿಮರನ್ನು ಓಟ್ ಬ್ಯಾಂಕ್ ಮಾಡಿಕೊಳ್ಳಲು ದೇಶದ ಸವಲತ್ತುಗಳನ್ನು ಅವರಿಗೆ ನೀಡಲು ಮುಂದಾಗಿದೆ. ಇದುವರೆಗೂ ವಕ್ಫ್ ಕಾಯ್ದೆಯಡಿ ದೇಶವನ್ನು ಲೂಟಿ ಮಾಡಿದ್ದವರನ್ನು ನಮ್ಮ ಬಿಜೆಪಿ ಸರ್ಕಾರ ಮಟ್ಟ ಹಾಕಲು ಮುಂದಾಗಿದೆ. ಕಾಂಗ್ರೆಸ್ ನಿಜವಾದ ರಾಷ್ಟçದ್ರೋಹಿ ಪಕ್ಷವಾಗಿದೆ ಎಂದು ಕಿಡಿಕಾರಿದರು. ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್ ಮಾತನಾಡಿ ದೇಶದಲ್ಲಿ ಸಮಾನತೆಯನ್ನು ಸಾರುವಲ್ಲಿ ಭಾರತೀಯ ಜನತಾ ಪಕ್ಷ ತನ್ನದೇ ಆದ ಕೊಡುಗೆ ನೀಡಿದೆ ಎಂದು ದೇಶದ ಐಕ್ಯತೆಗೆ ಧಕ್ಕೆ ಬಂದ ವೇಳೆ ಸ್ವತಂತ್ರವಾಗಿ ೧೯೮೦ ರಲ್ಲಿ ಬಿಜೆಪಿ ಅಸ್ಥಿತ್ವಕ್ಕೆ ಬಂದಿತು. ಅಂದಿನಿAದಲೂ ಬಿಜೆಪಿ ರಾಷ್ಟçದ ಸಮಗ್ರತೆಗೆ ಹೋರಾಟ…
ತುಮಕೂರು: ಆಸ್ಪತ್ರೆಗಳಲ್ಲಿ ರೋಗಿಗಳ ಆರೋಗ್ಯ ಸೇವೆಯು ಸೇವಾಮನೋಭಾವವುಳ್ಳ ಕೆಲಸ. ಸೇವೆಯನ್ನು ಆತ್ಮಸಂತೃಪ್ತಿಯಿAದ ನಿಭಾಯಿಸಬೇಕು. ದಾದಿ ಯರು ರೋಗಿಯನ್ನು ತಾಯಿ ಮನಸ್ಸಿನಿಂದ ನೋಡಿ ಸೇವೆಯನ್ನು ನೀಡಬೇಕು ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ ಅವರು ಕರೆ ನೀಡಿದರು. ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ನರ್ಸಿಂಗ್ ಕಾಲೇಜು ಮತ್ತು ನೆಲಮಂ ಗಲದ ಸಮೀಪದ ಟಿ-ಬೇಗೂರಿನಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ಆಫ್ ನರ್ಸಿಂಗ್ ಸೈನ್ಸ್ಆಂಡ್ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಮಂಗಳವಾರ ಶಿಕ್ಷಣ ಭೀಷ್ಮ ಡಾ.ಎಚ್.ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಮೊದಲನೆ ವರ್ಷದ ಬಿ.ಎಸ್ಸಿ ಮತ್ತು ಜಿಎನ್ಎಮ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಹಾಗೂ ಪದವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗಳಾಗಿ ಕೆಲಸ ಮಾಡುವ ಗುಣಗಳನ್ನು ದಾದಿಯರು ಬೆಳೆಸಿಕೊಳ್ಳಬೇಕು. ರೋಗಿ ಸಕಾರಾತ್ಮಕ ಪ್ರತಿಕ್ರಿ ಯೆ ಅರಿತು ಅವಶ್ಯಕತೆ ತಕ್ಕ ಹಾಗೇ ಕೆಲಸ ಮಾಡಿ. ಆಸ್ಪತ್ರೆ ನಮ್ಮ ಮನೆ ಎಂದು ಭಾವಿಸಿ ರೋಗಿಯನ್ನು ತಮ್ಮ ಸಂಬAಧಿಕರೆAದು ಕಾಣಿ ಎಂದು ನರ್ಸಿಂಗ್…











