BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
  • ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
  • ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
  • ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ
  • ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು
  • ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ
  • ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹುಡುಗ ಈಗ ಟಾಪರ್!
  • ಕಾರ್ಮಿಕ ಇಲಾಖೆ ಯೋಜನೆಗೆ ಸಂಘದ ನೆರವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ
news

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

ಮುಂಗಾರು ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ: ತಜ್ಞರ ಅಭಿಪ್ರಾಯ
By News Desk BenkiyabaleUpdated:June 22, 2026 5:19 pm

ತುಮಕೂರು: ರಾಜ್ಯಾದ್ಯಂತ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವವಿರುವುದಾಗಿ ತಜ್ಞರು ಅಭಿಪ್ರಾಯಿಸಿರುತ್ತಾರೆ. ಫೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ಸರಾಸರಿ ತಾಪಮಾನಕ್ಕಿಂತ ಹೆಚ್ಚಿರುವುದು ಎಂದರೆ ಎಲ್ ನಿನೋ ಇದಕ್ಕೆ ಕಾರಣವಾಗಿರುತ್ತದೆ. ಆದ್ದರಿಂದ ರೈತ ಬಾಂಧವರು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಮಳೆಯನ್ನು ಆಧರಿಸಿ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆ ಕೈಗೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕ ಲಕ್ಷö್ಮಣ ಎಸ್.ಕಳ್ಳೆನ್ನವರ ಮನವಿ ಮಾಡಿದ್ದಾರೆ.
ಜಿಲ್ಲೆಯ ರೈತರು ವಿವಿಧ ಬೆಳೆಗಳಲ್ಲಿ ಈ ಕೆಳಕಂಡAತೆ ತಳಿಗಳನ್ನು ಆಯ್ಕೆ ಮಾಡಿ ತಾಂತ್ರಿಕತೆಗಳನ್ನು ಅನುಸರಿಸಬೇಕು.
ಖುಷ್ಕಿ ಬೆಳೆಗಳನ್ನು ಬೆಳೆಯುವ ಸಂದರ್ಭದಲ್ಲಿ ೫೦ ರಿಂದ ೬೦ ಮಿಲಿ ಮೀಟರ್ ಮಳೆ ಬಂದ ನಂತರ ಬಿತ್ತನೆ ಮಾಡುವುದು ಸೂಕ್ತ. ಕಳೆ ನಿಯಂತ್ರಣ ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆಗಾಗಿ ಅಂತರ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆಗಳ ಸಾಲುಗಳ ನಡುವೆ ಕೃಷಿ ತ್ಯಾಜ್ಯಗಳನ್ನು ಹೊದಿಕೆಯಾಗಿ ಬಳಸಬೇಕು. ಮಧ್ಯಂತರ ಬರ ಪರಿಸ್ಥಿತಿಯಲ್ಲಿ ಹಾಗೂ ಮಳೆಯ ನಂತರ ಬೆಳೆ ಚೇತರಿಕೆಗೆ ೧% ರಿಂದ ೩% ಯೂರಿಯಾವನ್ನು ೦.೫% ಜಿಂಕ್ ಸಲ್ಫೇಟ್ ಜೊತೆಗೆ ಅಥವಾ ಪ್ರತ್ಯೇಕವಾಗಿ ಸಿಂಪಡಿಸಬೇಕು. ಶೇ.೨ರಷ್ಟು ಡಿ.ಎ.ಪಿ, ಶೇ.೨ರಷ್ಟು ೧೩:೦:೪೫ ದ್ರಾವಣ ಅಥವಾ ಶೇ.೨ರಷ್ಟು ೧೯:೧೯:೧೯ ದ್ರಾವಣವನ್ನು ಸಿಂಪಡಿಸಬೇಕು. ಸಾವಯವ ಗೊಬ್ಬರಗಳು ಅಥವಾ ನೀರನ್ನು ಹೀರಿಕೊಳ್ಳುವ ಹೈಡ್ರೋಜೆಲ್ ಬಳಕೆಯಿಂದ ಹೊಲದಲ್ಲಿ ತೇವಾಂಶ ಲಭ್ಯತೆ ಹೆಚ್ಚುತ್ತದೆ. ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಅವಕಾಶವಿದ್ದ ಕಡೆ ತುಂತುರು ನೀರಾವರಿ ಘಟಕ ಅಥವಾ ಹನಿ ನೀರಾವರಿ ಬಳಸಿ ನೀರನ್ನು ಹಾಯಿಸಬೇಕು.
ನೆಲಗಡಲೆಯಲ್ಲಿ ತಳಿಗಳಾದ ಜೆಎಲ್ ೨೪, ಕೆ-೬ ಮತ್ತು ಕೆ-೯ ತಳಿಗಳನ್ನು ಬಿತ್ತನೆ ಮಾಡಬೇಕು. ಸಾಮಾನ್ಯವಾಗಿ ಬಿತ್ತನೆ ಸಮಯ ಜುಲೈ ಮೊದಲ ವಾರವಾಗಿರುತ್ತದೆ. ಆದರೆ ಜುಲೈ ಮೊದಲ ೧೫ ದಿನಗಳ ನಂತರ ಮಳೆ ವಿಳಂಬವಾದರೆ ಪರ್ಯಾಯ ಬೆಳೆಯಾಗಿ ರಾಗಿ, ಹುರುಳಿ ಮತ್ತು ಹಿಂಗಾರಿ ಕಡಲೆ ಬೆಳೆಯನ್ನು ಬೆಳೆಯಬಹುದು. ಬಿತ್ತನೆ ಮಾಡಿದ ೩೦ ರಿಂದ ೪೦ ದಿನಗಳ ನಂತರ ೩ ಮೀಟರ್ ಅಂತರದಲ್ಲಿ ಉಕ್ಕೆ ಸಾಲು ಅಥವಾ ತೋಡನ್ನು (ಆeಚಿಜ ಈuಡಿಡಿoತಿs) ತೆಗೆಯಬೇಕು.
ಮುಸುಕಿನ ಜೋಳದಲ್ಲಿ ಸಂಕರಣ ತಳಿಗಳನ್ನು ಬಿತ್ತನೆ ಮಾಡಬೇಕು. ಮೆಥಾಲಿನ್+ಅಟ್ರಜಿನ್ ಅನ್ನು ಪ್ರತಿ ಹೆಕ್ಟರ್‌ಗೆ ೦.೫ ಕೆ.ಜಿ. ಪ್ರಮಾಣದಲ್ಲಿ ಮೊಳಕೆಗೆ ಮೊದಲು ಸಿಂಪಡಿಸಬೇಕು.
ತೊಗರಿ ತಳಿಗಳಾದ ಬಿಆರ್ ಜಿ-೧ ಮತ್ತು ಬಿಆರ್ ಜಿ-೨ ಅನ್ನು ತೊಗರಿ ಬಿತ್ತನೆಗೆ ಬಳಸಬಹುದು. ಆದರೆ ಮಳೆ ವಿಳಂಬವಾದರೆ ಎಕೆಟಿ-೮೮೧೧ ಅಥವಾ ಬಿಎಸ್ ಎಂಆರ್-೭೮೬ ತಳಿಗಳನ್ನು ಬಳಸಬೇಕು.
ಆಗಸ್ಟ್ ಮಾಹೆಯಲ್ಲಿ ಬಿತ್ತನೆಗೆ ಪೂರಕವಾದ ಉತ್ತಮ ಮಳೆಯಾದರೆ ರಾಗಿಯಲ್ಲಿ ಜಿ.ಪಿ.ಯು-೨೮, ಎಂ.ಎಲ್-೩೬೫, ಪಿ.ಆರ್-೨೦೨, ಜಿ.ಪಿ.ಯು-೬೬, ತಳಿಗಳನ್ನು ಆಗಸ್ಟ್ ೧೫ರೊಳಗೆ ಮತ್ತು ಜಿ.ಪಿ.ಯು-೨೬, ಜಿ.ಪಿ.ಯು-೪೫, ಜಿ.ಪಿ.ಯು-೪೮ನ್ನು ಆಗಸ್ಟ್ ಅಂತ್ಯದವರೆಗೆ ಬಿತ್ತನೆ ಮಾಡಬಹುದು. ರಾಗಿ ಸಸಿ ಮಡಿಗಳನ್ನು ಬೆಳೆಸಿದ್ದಲ್ಲಿ ನಾಟಿಗೆ ಉಪಯೋಗಿಸುವುದು ಉತ್ತಮ. ರಾಗಿ ಬಿತ್ತನೆಯಾಗಿದ್ದು ಸರಿಯಾಗಿ ಹುಟ್ಟುವಳಿಯಾಗದಿದ್ದರೆ ರಾಗಿ ಪೈರನ್ನು ನಾಟಿ ಮಾಡುವುದು ಸೂಕ್ತ. ಅಲಸಂದೆ, ಹುರುಳಿ ಮತ್ತು ಹೆಬ್ಬಾಳ ಅವರೆಯನ್ನು ಬಿತ್ತನೆ ಮಾಡಬಹುದು. ಜಾನುವಾರುಗಳಿಗೆ ಅಗತ್ಯವಿರುವ ಮೇವಿಗಾಗಿ ಮೇವಿನ ಜೋಳ ಬಿತ್ತನೆ ಮಾಡಬಹುದು.
ಸೆಪ್ಟಂಬರ್ ಮಾಹೆಯಲ್ಲಿ ಬಿತ್ತನೆಗೆ ಪೂರಕವಾದ ಉತ್ತಮ ಮಳೆಯಾದರೆ ಸಸಿ ಮಡಿಗಳನ್ನು ತಯಾರಿಸಿದಲ್ಲಿ ಮೊದಲ ಪಾಕ್ಷಿಕದಲ್ಲಿ ರಾಗಿ ಸಸಿಗಳನ್ನು ಸಸಿ ಮಡಿಗಳಿಂದ ಕಿತ್ತು ನಾಟಿ ಕಾರ್ಯ ಪೂರ್ಣಗೊಳಿಸಬೇಕು. ಜಿ.ಪಿ.ಯು-೨೬, ಜಿ.ಪಿ.ಯು-೪೫, ಜಿ.ಪಿ.ಯು-೪೮, ಕೆ.ಎಂ.ಆರ್-೩೦೧ ಹಾಗೂ ಇಂಡಾಫ್-೧೫ ತಳಿಗಳ ಪೈರನ್ನು ಬೆಳೆಸಿ ನಾಟಿ ಮಾಡಬಹುದು. ಸೆಪ್ಟಂಬರ್ ೧೫ ರೊಳಗೆ ಹಿಂಗಾರಿ ಜೋಳದ ಬಿತ್ತನೆಯನ್ನು ಪೂರ್ಣಗೊಳಿಸುವುದು ಸೂಕ್ತ. ದ್ವಿದಳಧಾನ್ಯ ಬೆಳೆಗಳಾದ ಅಲಸಂದೆ, ಹುರುಳಿ ಮುಂತಾದ ಅಲ್ಪವಧಿ ಬೆಳೆಗಳನ್ನು ಬಿತ್ತನೆ ಮಾಡಬಹುದು. ತಳಿಗಳ ಆಯ್ಕೆ ಮತ್ತು ಮಧ್ಯಂತರ ಬರ ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಾಗ ಮಳೆಯ ಅಭಾವದಿಂದಾಗುವ ಬೆಳೆ ಹಾನಿಯನ್ನು ತಡೆಯಬಹುದು.
ತಳಿಗಳ ಆಯ್ಕೆ ಮತ್ತು ಮಧ್ಯಂತರ ಬರ ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಾಗ ಮಳೆಯ
ಅಭಾವದಿಂದಾಗುವ ಬೆಳೆ ಹಾನಿಯನ್ನು ತಡೆಯಬಹುದು ಎಂದು ಅವರು ತಿಳಿಸಿದ್ದಾರೆ.

(Visited 1 times, 1 visits today)
formers news kannada karnataka rainy season tumkur
Previous Articleಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ
Next Article ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ
News Desk Benkiyabale

Related Posts

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm news

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm news

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm news
ತಾಜಾ ಸುದ್ಧಿಗಳು

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm

ನಮ್ಮ ಕ್ಲಿನಿಕ್ ಸ್ಥಾಪನೆಗೆ ವಿರೋಧ

June 20, 2026 5:11 pm
Our Youtube Channel
Our Picks

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

June 22, 2026 5:23 pm

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm

ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಮಹತ್ವದ್ದು

June 22, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಕನ್ನಡ ಕೈಬಿಟ್ಟು ರೈಲ್ವೆ ಇಲಾಖೆಯ ಹುದ್ದೆ ಪದೋನ್ನತಿಯ ಪರೀಕ್ಷೆ

By News Desk BenkiyabaleJune 22, 2026 5:23 pm

ತುಮಕೂರು: ರೈಲ್ವೆ ಇಲಾಖೆಯ ಕನ್ನಡ ಕಡೆಗಣನೆ ಮುಂದುವರೆದಿದೆ. ಈ ತಿಂಗಳ ೨೫ರಂದು ಕರ್ನಾಟಕದಲ್ಲಿಯೇ ನಡೆಯುವ ನೈರುತ್ಯ ರೈಲ್ವೆಯ ಗೂಡ್ಸ್ ಟ್ರೇನ್…

ಮಳೆಯನ್ನು ಆಧರಿಸಿ ಬಿತ್ತನೆ ಕೈಗೊಳ್ಳಲು ರೈತರಿಗೆ ಸಲಹೆ

June 22, 2026 5:19 pm

ಬೀದಿನಾಯಿಗಳ ಹಾವಳಿ: ಕಂಟಕಪ್ರಾಯವಾದ ಶ್ವಾನ ಪಡೆ

June 22, 2026 5:17 pm

ವೀರಶೈವ ಲಿಂಗಾಯಿತರು ಸಂಘಟಿತರಾಗಿ ಸಮಾಜವನ್ನು ಮುನ್ನೆಡೆಸಿರಿ

June 22, 2026 5:14 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.