BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ
  • ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು
  • ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ
  • ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ
  • ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ: ಟಿ.ಎಸ್. ಅಶೋಕ್ ಕುಮಾರ್
  • ಅನಿಷ್ಟ ಪದ್ದತಿ ಹೋಗಲಾಡಿಸಲು ಶ್ರಮಿಸಿದ ಸಂತ ಕನಕದಾಸ
  • ಆರ್‌ಎಸ್‌ಎಸ್ ದೇಶದಲ್ಲಿ ಬ್ಯಾನ್ ಮಾಡುವಂತೆ ಆಗ್ರಹ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುಬ್ಬಿ ಕಸಬ ಹೋಬಳಿಯಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಕರೆಕಟ್ಟೆಗಳ ನಾಶ!!
ಇತರೆ ಸುದ್ಧಿಗಳು

ಗುಬ್ಬಿ ಕಸಬ ಹೋಬಳಿಯಲ್ಲಿ ರಸ್ತೆ ಅಭಿವೃದ್ಧಿ ಹೆಸರಲ್ಲಿ ಕರೆಕಟ್ಟೆಗಳ ನಾಶ!!

By News Desk BenkiyabaleUpdated:June 23, 2020 6:35 pm

ಗುಬ್ಬಿ: 

       ಮೈನಿಂಗ್ ನಡೆಯುವ ಸ್ಥಳಗಳಿಗಿಂತ ಭಿನ್ನವಾಗಿ ಕೆರೆಕಟ್ಟೆಗಳಲ್ಲಿ ಮಣ್ಣು ತೆಗೆಯುವ ಕೆಲಸ ನಿರಂತರವಾಗಿ ತಾಲ್ಲೂಕಿನ ಕಸಬ ಹೋಬಳಿಯಲ್ಲಿ ಹೆಚ್ಚಾಗಿ ನಡೆದಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೆರೆಕಟ್ಟೆಗಳಲ್ಲಿ ನಿಯಮ ಮೀರಿ ಮಣ್ಣು ಸಾಗಿಸಿರುವುದು ಪ್ರಕೃತಿಗೆ ವಿರುದ್ಧವಾದದ್ಧು ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

      ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಫ್ಲೈಓವರ್ ಸೇತುವೆಗಳ ನಿರ್ಮಾಣ ಮಾಡಬೇಕಾಗಿರುವ ಕಾರಣ ಮಣ್ಣಿನ ಅಗತ್ಯತೆ ಇತ್ತು. ಆದರೆ ಮಣ್ಣು ಸಮೀಪದಲ್ಲೇ ಹುಡುಕಲು ಮುಂದಾದ ಗುತ್ತಿಗೆದಾರರು ರಸ್ತೆ ನಿರ್ಮಾಣದ ಅಕ್ಕಪಕ್ಕದ ಕೆರೆಕಟ್ಟೆ, ಗೋಮಾಳ, ಗೋಕಟ್ಟೆ, ಅರಣ್ಯ ಪ್ರದೇಶ ಸ್ಥಳಗಳ ಜತೆಗೆ ರೈತರ ಜಮೀನಿನಲ್ಲಿ ಸಹ ಮಣ್ಣು ಸಾಗಿಸಲು ಆರಂಭಿಸಿದರು. ದಿನ ಕಳೆದಂತೆ ಕೆರೆಗಳ ಆಕೃತಿಯೇ ವಿಚಿತ್ರವಾಗಿದ್ದು ಕೆಲ ಪ್ರಜ್ಞಾವಂತ ರೈತರಲ್ಲಿ ಆತಂಕ ತಂದಿದೆ. ಸರ್ಕಾರದ ನಿಯಮ ಪ್ರಕಾರ ನಾಲ್ಕೈದು ಅಡಿಗಳಿಂತ ಆಳ ತೊಡುವಂತಿಲ್ಲ. ಆದರೆ ಸುಮಾರು 50 ಅಡಿಗಳ ಆಳಕ್ಕೂ ಹೊರಟ ಜೆಸಿಬಿ ಯಂತ್ರಗಳು ಬಿಡುವಿಲ್ಲದೇ ಹಗಲಿರುಳು ಮಣ್ಣು ತೆಗೆದಿರುವುದು ತಾಲ್ಲೂಕು ಅಡಳಿತ ಗಮನಿಸಲಿಲ್ಲ ಎಂದು ದೂರುತ್ತಿದ್ದಾರೆ.

      ಪಟ್ಟಣದ ಸುತ್ತಲಿನ ಕೆರೆಗಳಲ್ಲೇ ಮಣ್ಣು ತೆಗೆಯುತ್ತಿರುವ ಬಗ್ಗೆ ತಿಳಿದೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನಲಾಗುತ್ತಿದೆ. ಹೆದ್ದಾರಿ ರಸ್ತೆ ಕೆಲಸ ಸಾರ್ವಜನಿಕರ ಉದ್ದೇಶಕ್ಕೆ ಸರಿಯೇ ಆಗಿದ್ದರೂ ನಮ್ಮ ಪ್ರಕೃತಿಯ  ವಿರುದ್ಧ ಕೆರೆಗಳನ್ನೇ ಹಾಳು ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊದಲೂರು, ಕಿಟ್ಟದಕುಪ್ಪೆ, ರಂಗನಾಥಪುರ, ಹೊನ್ನವಳ್ಳಿ, ಬಿಲ್ಲೇಪಾಳ್ಯ ಕಟ್ಟೆ, ಅರುವೇಸಂದ್ರ ಹೀಗೆ ಹಲವು ಭಾಗದಲ್ಲಿ ಲೆಕ್ಕವಿಲ್ಲದಂತೆ ಮಣ್ಣು ತೆಗೆಯಲಾಗಿದೆ. ನಿಯಮ ಮೀರಿ 50 ಕ್ಕೂ ಅಧಿಕ ಅಡಿಗಳ ಆಳದಲ್ಲಿ ಮಣ್ಣು ಲೂಟಿ ಮಾಡಲು ರಸ್ತೆ ಗುತ್ತಿಗೆದಾರರಿಗೆ ಅನುಮತಿ ನೀಡಿದವರ್ಯಾರು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ಪ್ರಶ್ನಿಸಿದ್ದಾರೆ.

      ಕೆರೆಗಳಲ್ಲಿ ಬಗೆದ ರೀತಿ ನೀಡಿದರೆ ಯಾವುದೇ ಗಣಿಗಾರಿಕೆಗೆ ಸಾಟಿ ಇಲ್ಲ ಎಂಬಂತಿದೆ. ಮೈನಿಂಗ್ ಪ್ರದೇಶದಲ್ಲಿ ಕಾಣುವಂತೆ ಕೆರೆಗಳಲ್ಲಿ ತೋಡಲಾಗಿದೆ. ಮಣ್ಣಿನ ಪದರಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಈ ಜತೆಗೆ ಹಳ್ಳಿಗಾಡಿನ ರಸ್ತೆಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿಗಳ ಓಡಾಟ ಕೂಡಾ ಡಾಂಬರ್ ರಸ್ತೆಗಳನ್ನು ಹಾಳು ಮಾಡಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಹರಿಸಿಲ್ಲ. ಗ್ರಾಮೀಣ ಭಾಗದ ರಸ್ತೆಗಳೂ ಸಹ ಗುಂಡಿ ಬಿದ್ದಿದ್ದು, ಮಳೆ ಬಂದರೆ ಸಂಪೂರ್ಣ ಹಾಳಾಗಲಿದೆ. ಈ ನಷ್ಟ ಕೇಳುವರಿಲ್ಲ. ಅರಣ್ಯ ಪ್ರದೇಶದ ಸ್ಥಳದಲ್ಲಿ ಕೊರೆದ ಯಂತ್ರಗಳ ಕೆಲಸಕ್ಕೆ ಅರಣ್ಯ ಪ್ರದೇಶದ ಮರಗಿಡಗಳ ಬೇರು ನಾಶವಾಗಿದೆ. ಮರಳು ಮಾಫಿಯಾ ನಡೆಸುವವರಂತೆ ಕೆರೆಗಳನ್ನು ಯಾವುದೇ ಆದೇಶವಿಲ್ಲದೇ ಮನಬಂದಂತೆ ಮಣ್ಣು ತೆಗೆಯಲು ಇವರ ಬೆನ್ನ ಹಿಂದೆ ಸಹಕಾರ ನೀಡಿದವರ್ಯಾರು ಎಂದು ಅಧಿಕಾರಿಗಳಿಗೆ ತಿಳಿದಿದೆ. ಆದರೂ ಗುತ್ತಿಗೆದಾರರ ವಿರುದ್ಧ ಈವರೆವಿಗೆ ಕ್ರಮವಹಿಸಿಲ್ಲ. ಕೇಳಿದರೆ ಹಾರಿಕೆ ಉತ್ತರ ಸಜ್ಜಾಗಿರುತ್ತದೆ ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಯ್‍ಕುಮಾರ್ ಕಿಡಿಕಾರಿದರು.

      ಒಟ್ಟಾರೆ ಹಾಳಾದ ಕೆರೆಕಟ್ಟೆಗಳ ಮೊದಲಿನ ರೂಪ ತರುವಲ್ಲಿ ತಾಲ್ಲೂಕು ಆಡಳಿತ ಜವಾಬ್ದಾರಿ ವಹಿಸಬೇಕಿದೆ. ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಸಂಬಂದಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲೆಯಲ್ಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಬಾರಿ ಕೇಳಿ ಬಂದಿದೆ.

      ಈ ರೀತಿ ಭೂಮಿಯ ಮಣ್ಣು ಲೂಟಿ ಮಾಡಿದರೂ ಇತ್ತ ಸುಳಿಯದ ಇಲಾಖೆ ಹಾಗೂ ಪರಿಸರನಾಶಕ್ಕೆ ಮುಂದಾದವರ ವಿರುದ್ಧ ಹೋರಾಟ ನಡೆಸಲಾಗುವುದು. ತಾಲ್ಲೂಕು ಅಧಿಕಾರಿಗಳಿಂದ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.

(Visited 16 times, 1 visits today)
Previous Articleತುಮಕೂರು : SSLC ಪರೀಕ್ಷಾ ಕೇಂದ್ರಗಳಿಗೆ ಮೇಯರ್ ಭೇಟಿ!
Next Article ಚೇಳೂರಿನಲ್ಲಿ ಮೂರನೇ ಕೊರೊನ ಪ್ರಕರಣ ಪತ್ತೆ!!
News Desk Benkiyabale

Related Posts

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

November 11, 2025 3:29 pm ಇತರೆ ಸುದ್ಧಿಗಳು

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm ಇತರೆ ಸುದ್ಧಿಗಳು

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

November 11, 2025 3:29 pm
ಇತರೆ ಸುದ್ಧಿಗಳು

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm
ಇತರೆ ಸುದ್ಧಿಗಳು

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm
ಇತರೆ ಸುದ್ಧಿಗಳು

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm
ಇತರೆ ಸುದ್ಧಿಗಳು

ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ

November 11, 2025 3:23 pm
ಇತರೆ ಸುದ್ಧಿಗಳು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಆದ್ಯ ಕರ್ತವ್ಯ: ಟಿ.ಎಸ್. ಅಶೋಕ್ ಕುಮಾರ್

November 10, 2025 3:07 pm
Our Youtube Channel
Our Picks

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

November 11, 2025 3:29 pm

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm

ರೋಟರಿಯಿಂದ ಗರ್ಭ ಕಂಠ ಕ್ಯಾನ್ಸರ್, ಪೋಲಿಯೊ ಜಾಗೃತಿ

November 11, 2025 3:23 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ

By News Desk BenkiyabaleNovember 11, 2025 3:29 pm

ತುಮಕೂರು: ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಿಂದ ಪರಿಸರ ಗಣಿಗಾರಿಕೆ ಪ್ರಭಾವ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆಯಡಿ ಜಿಲ್ಲೆಯ ಗಣಿಬಾಧಿತ…

ನಗರದಲ್ಲಿ ನ.೧೭ ರಿಂದ ನಾಟಕೋತ್ಸವ: ಸತೀಶ್ ತಿಪಟೂರು

November 11, 2025 3:27 pm

ಭಾಷೆ ಕಣ್ಮರೆಯಾದರೆ ವಿವೇಕ ಸತ್ತಂತೆ

November 11, 2025 3:26 pm

ತಾಲ್ಲೂಕಿನಲ್ಲಿ ಬಂಪರ್ ರಾಗಿ ಇಳುವರಿ ನಿರೀಕ್ಷೆ

November 11, 2025 3:25 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.