ಹುಳಿಯಾರು:

      ಹೋಬಳಿ ವ್ಯಾಪ್ತಿಯ ಅಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಸಂತೋಷ ಮೂಡಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

     ಈಗಾಗಲೆ ಬಂದಿರುವ ಮಳೆಗೆ ರೈತರು ತಮ್ಮ ಕೃಷಿ ಭೂಮಿಯನ್ನ ಸಿದ್ದಪಡಿಸಿಕೊಂಡಿದ್ದು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈಗ ಬಿತ್ತನೆಗೆ ಅಗತ್ಯವಾದ ಹೆಸರು, ಉದ್ದು, ಜೋಳ, ತೊಗರಿ ಬೀಜಗಳನ್ನ, ರಸಗೋಬ್ಬರವನ್ನ ಖರೀಧಿಸಲು ರೈತಸಂಪರ್ಕ ಕಚೇರಿ ಹಾಗೂ ಖಾಸಗಿ ರಸಗೊಬ್ಬರದ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ.

       ಬಿತ್ತನೆಗೆ ಅಗತ್ಯವಾದ ಡಿಐಪಿ, 20-20 ರಸಗೋಬ್ಬರವನ್ನ ಖರೀಧಿಸಲು ಖಾಸಗಿ ರಸಗೋಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ರಸಗೋಬ್ಬರವನ್ನ ತೆಗೆದುಕೊಂಡು ಹೊಗಲು ಮುಂದಾಗಿದ್ದಾರೆ.

(Visited 7 times, 1 visits today)