ಕೊರಟಗೆರೆ :

      ಸ್ನೇಹಿತರ ಜೊತೆ ಆಟವಾಡುತ್ತ ಈಜಾಡಲು ಅಕ್ಕಿರಾಂಪುರ ಕೆರೆಗೆ ತೆರಳಿದ ಯುವಕರಿಬ್ಬರು ಕೊರಟಗೆರೆ ಪಿಡ್ಲ್ಯೂಡಿ ಇಲಾಖೆಯ ಗುತ್ತಿಗೆದಾರ ಕೆರೆಏರಿ ಕಾಮಗಾರಿಗೆ ಪರವಾನಗಿ ಇಲ್ಲದೇ ತೆಗೆದಿರುವ 60 ಅಡಿ ಆಳದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

       ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರದ ಕೆರೆಯಲ್ಲಿ ಹೊಸಹಳ್ಳಿ ಗ್ರಾಮದ ರಮೇಶನ ಮಗನಾದ ಸತೀಶ(15) ಮತ್ತು ಹನುಮಂತರಾಯಪ್ಪನ ಮಗನಾದ ನಂದನ ಕುಮಾರ್(16) ಈಜಾಡಲು ಬರದೆ ಕೆರೆಯಲ್ಲಿನ ಆಳವಾದ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ದುರ್ಧೈವಿ ಆಗಿದ್ದಾರೆ.

      ಹೊಸಹಳ್ಳಿ ಗ್ರಾಮದ ಸತೀಶ, ನಂದನ, ಆಕಾಶ್, ಸಂತೋಷ, ಮಧುಸೂದನ ಎಂಬ ಐದು ಜನ ಯುವಕರು ಈಜಾಡಲು ತೆರಳಿದ್ದಾರೆ. ಸತೀಶ ಆಳವಾದ ನೀರಿನಲ್ಲಿ ಈಜಾಡಲು ಹೋಗಿ ಮುಳುಗಿರುವ ವೇಳೆ ಕಾಪಾಡಲು ಪ್ರಯತ್ನಿಸಿ ನಂದನ ಕೂಡ ದಡದಿಂದ ಜಾರಿ ಮುಳುಗಿದ್ದಾನೆ. ಇಬ್ಬರ ಕೈಹಿಡಿಯಲು ತೆರಳುತ್ತಿದ್ದ ಸಂತೋಷನನ್ನು ಆಕಾಶ್ ಹಿಂದಕ್ಕೆ ಎಳೆದು ತಮ್ಮನ ಪ್ರಾಣವನ್ನು ರಕ್ಷಣೆ ಮಾಡಿದ್ದಾನೆ.

       ಪಿಡ್ಲ್ಯೂಡಿ ಇಲಾಖೆ ವಿರುದ್ಧ ಆಕ್ರೋಶ: ಅಕ್ಕಿರಾಂಪುರ ಕೆರೆ ಏರಿಯ ರಸ್ತೆ ಕಾಮಗಾರಿ ನಡೆದಾಗ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆ ಕೆರೆಯಲ್ಲಿ 20ಕ್ಕೂ ಹೆಚ್ಚು 40ಅಡಿ ಆಳದ ಗುಂಡಿಗಳನ್ನು ತೆಗೆದಿದ್ದಾರೆ. ಆಳವಾದ ಗುಂಡಿಯಲ್ಲಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾಯ ನೀಡುವಂತಿದೆ. ಗುಂಡಿ ಮುಚ್ಚುವಂತೆ ಪಿಡ್ಲ್ಯೂಡಿ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ ವಹಿಸಿರುವ ಪರಿಣಾಮ ಯುವಕರ ಈಜಾಡಲು ತೆರಳಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಯುವಕರ ಕುಟುಂಬಕ್ಕೆ ಪರಿಹಾ ನೀಡುವಂತೆ ಒತ್ತಾಯ ಮಾಡಿದ ಘಟನೆ ನಡೆದಿದೆ.

      ಕಾರ್ಯಚರಣೆ ವೇಳೆ ನಂದನಕುಮಾರ್ ಮೃತದೇಹ ದೂರಕಿದೆ. ಇನ್ನೂಳಿದ ಸತೀಶನ ಮೃತದೇಹಕ್ಕಾಗಿ ಸ್ಥಳೀಯ ರಾಮಾಂಜಿ ಮತ್ತು ರಾಕೇಶ್‍ನಿಂದ ಹುಡುಕಾಟ ನಡೆದಿದೆ. ಸ್ಥಳದಲ್ಲಿಯೇ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ನಧಾಪ್, ಪಿಎಸೈ ಮುತ್ತುರಾಜು, ಎಎಸೈ ಯೊಗೀಶ್ ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂಧಿವರ್ಗ ಮೊಕ್ಕಾಂ ಹೋಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

(Visited 91 times, 1 visits today)