ತುಮಕೂರು : 

      ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿ ತೋಟಗಾರಿಕೆ ಇಲಾಖೆ ಎದುರು ಭಾರತೀಯ ಭೋವಿ ಪರಿಷತ್(ಓ.ಸಿ.ಸಿ.ಐ) ತುಮಕೂರು ಜಿಲ್ಲಾ ಕಛೇರಿಯನ್ನು ಮಾಜಿ ಸಚಿವರು, ಭಾರತೀಯ ಭೋವಿ ಪರಿಷತ್‍ನ ರಾಷ್ಟ್ರೀಯ ಗೌರವಾಧ್ಯಕ್ಷರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗು ಕೋರ್ ಕಮಿಟಿ ಸದಸ್ಯರು, ಶಾಸಕರಾದ ಶ್ರೀ ಅರವಿಂದ ಲಿಂಬಾವಳಿ ರವರು ಉದ್ಘಾಟಿಸಿದರು.

      ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಸಮಾಜದ ಜನಸಂಖ್ಯೆ, ಅವರ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸಂಘಟನೆ ಶ್ರಮಿಸಬೇಕು ಎಂದರು. ಭೋವಿ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು. ಕಲ್ಲು ಕೆಲಸ, ಕಟ್ಟಡ ಕಟ್ಟುವ ಅನೇಕ ಕುಲಕಸುಬುಗಳನ್ನೆ ನಂಬಿರುವ ಶ್ರಮಿಕರೇ ಹೆಚ್ಚಾಗಿರುವ ಸಮಾಜ ಭೋವಿ ಸಮಾಜ ಎಂದರು. ಕಲ್ಲು ಗಣಿಗಾರಿಕೆಯಲ್ಲಿ ಕುಲಕಸುಬನ್ನೆ ನಂಬಿರುವ ಭೋವಿ ಸಮಾಜಕ್ಕೆ ಕಲ್ಲುಗಣಿಗಾರಿಕೆಯಲ್ಲಿ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ದಿವ್ಯಾಸಾನಿಧ್ಯ ವಹಿಸಿ ಮಾತನೀಡದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಕಾಯಕವನ್ನೆ ನಂಬಿ ಬದುಕುತ್ತಿರುವ ಭೋವಿ ಸಮಾಜ ಶೈಕ್ಷಣಿಕವಾಗಿ ಮುಂದುವರಿಯಬೇಕಾಗಿದೆ ಎಂದರು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು, ಸಮಾಜ ಜಾಗೃತರಾಗಬೇಕು ಎಂದರು.

      ಶಾಸಕರಾದ ಜ್ಯೋತಿಗಣೇಶ್ ಮಾತನಾಡಿ, ಭೋವಿ ಪರಿಷತ್‍ಗೆ ಸಮುದಾಯ ಭವನ ನಿರ್ಮಿಸಲು ತಮ್ಮ ಅನುದಾನದಲ್ಲಿ 10 ಲಕ್ಷ ರೂ.ಗಳನ್ನು ನಿಡುವುದಾಗಿ ಘೋಷಿಸಿದರು. ಸ್ಥಳೀಯ ಚುನಾವಣೆಗಳಲ್ಲಿ, ಸರ್ಕಾರದ ನಾಮನಿರ್ದೇಶನದಲ್ಲಿ ಸಮಾಜದ ಮುಖಂಡರಿಗೆ ಅವಕಾಶ ನೀಡಿರುದಾಗಿ ತಿಳಿಸಿದರು.

       ಭೋವಿ ಪರಿಷತ್ ಜಿಲ್ಲಾಧ್ಯಕ್ಷರು ಹಾಗು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂಕಾರ್‍ರವರು ಮಾತನಾಡಿ, ಸಂಘಟನೆಯ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಿದ ಸ್ವಾಮೀಜಿಗಳಿಗೆ, ಲಿಂಬಾವಳಿರವರಿಗೆ ಹಾಗು ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದರು. ಜಿಲ್ಲಾಧ್ಯಾಂತ ಎಲ್ಲಾ ಭೋವಿ ಕಾಲೋನಿಗಳಿಗೆ ಪ್ರವಾಸ ಮಾಡಿ ಸಮಾಜವನ್ನು ಬಲವಾಗಿ ಸಂಘಟಿಸುವುದಾಗಿ ಮುಖಂಡರಿಗೆ ಭರವಸೆ ನಿಡಿದರು. ಶಿರಾ ತಾಲ್ಲೂಕಿನ ಮದ್ದಕ್ಕನಹಳ್ಳಿ ಕಲ್ಲು ಗಣಿಗಾರಿಕೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ, ಮುಖ್ಯಮಂತ್ರಿಗಳ ಬಳಿ ಸಮಾಜದ ಮುಖಂಡರ ನಿಯೋಗ ತೆರಳಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಅರವಿಂದ ಲಿಂಬಾವಳಿರವರಿಗೆ ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಾ.ರವಿ ಮಾಕಳಿ, ರಾಜ್ಯಾಧ್ಯಕ್ಷರಾದ ಆನಂದಪ್ಪ, ಕೆಪಿಸಿಸಿ ಸದಸ್ಯ ಹಾಗು ತಿಪಟೂರು ನಗರಸಭಾ ಸದಸ್ಯ ಯೋಗೀಶ್, ಪಾಲಿಕೆ ಸದಸ್ಯ ಮಂಜುನಾಥ್, ಮುಖಂಡರಾದ ಜಯಶಂಕರ್, ಗಂಗಾಧರ್, ಮಂಜುನಾಥ್, ತ್ರಿಲೋಚನ್, ಕಾಶಿನಾಥ್, ರವಿಕಿರಣ್, ವೆಂಕಟೇಶ್, ಪುರುಷೋತ್ತಮ್ ಮುಂತಾದವರಿದ್ದರು

(Visited 6 times, 1 visits today)