BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ
  • ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
  • ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ
  • ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ
  • ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ
  • ಅನರ್ಹ ಬಿಪಿಎಲ್ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಳ್ಳಲು ಎಡಿಸಿ ತಿಪ್ಪೇಸ್ವಾಮಿ ಸಲಹೆ
  • ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
  • ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತೆಂಗಿನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಲು ಆಗ್ರಹಿಸಿ ಪ್ರತಿಭಟನೆ
Trending

ತೆಂಗಿನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಲು ಆಗ್ರಹಿಸಿ ಪ್ರತಿಭಟನೆ

By News Desk BenkiyabaleUpdated:March 09, 2020 6:53 pm

ತುಮಕೂರು:

      ಕೊಬ್ಬರಿಗೆ ಕನಿಷ್ಠ 20 ಸಾವಿರ ಘೋಷಿಸಬೇಕು,ನೀರಾ ಇಳಿಸಲು ಅನುಮತಿ ನೀಡಬೇಕು,ತೆಂಗಿನ ಮೌಲ್ಯವರ್ಧಿತ ಉತ್ಪನಗಳ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಆಗ್ರಹಿಸಿ ಇಂದು ಟೌನಾಹಾಲ್ ವೃತ್ತದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

      ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ,ಡಾ.ಎಸ್.ರಫೀಕ್ ಅಹಮದ್,ಅರೆ ಶಂಕರ ಮಠದ ಶ್ರೀಚೈತನ್ಯ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದ ಪ್ರತಿಭಟನೆಗೆ ಕರ್ನಾಟಕ ಪ್ರಾಂತ ರೈತ ಸಂಘ, ಹಲವು ಸಂಘ ಸಂಸ್ಥೆಗಳ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಧರಣಿ ನಿರಂತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತೆಂಗು ಬೆಳೆಗಾರರು ಇಂದು ಅತ್ಯಂತ ಸಂಕಷ್ಟದಲ್ಲಿದೆ.ಕೇಂದ್ರ ಸರಕಾರ ತೆಂಗಿಗೆ 9200 ರೂ ಬೆಂಬಲ ಬೆಲೆ ಘೋಷಿಸಿದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ 9600 ರೂಗಳಿಗೆ ಮಾರಾಟವಾಗುವ ಮೂಲಕ ವ್ಯಾಪಾರಸ್ತರು ಹಾವು ಸಾಯಬಾರದು, ಕೊಲು ಮುರಿಯಬಾರದು ಎಂಬಂತಹ ನೀತಿ ಅನುಸರಿಸುತ್ತಿದ್ದಾರೆ.

      ಕೊಬ್ಬರಿ ಕನಿಷ್ಠ 20 ಸಾವಿರ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿ ಮಾಡಬೇಕು, ಹಾಗೆಯೇ ಈ ನಿಟ್ಟಿನಲ್ಲಿ ರಾಜ್ಯ,ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಕಳುಹಿಸಿ ರಾಜ್ಯದ ತೆಂಗು ಬೆಳೆಗಾರರ ಹಿತ ಕಾಯುಬೇಕು. ಒಂದು ವೇಳೆ ಕೇಂದ್ರ ಸರಕಾರ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದಿದ್ದಲ್ಲಿ ರಾಜ್ಯದ ಎಲ್ಲಾ ತೆಂಗು ಬೆಳೆಗಾರರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

      ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ಭಾರತದ ತೆಂಗು ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ.ತುಮಕೂರು ಜಿಲ್ಲೆಯ 1.42 ಲಕ್ಷ ಹೆಕ್ಟೇರ್ನ ಲ್ಲಿ ತೆಂಗು ಬೆಳೆಯಲಾಗುತ್ತದೆ.ಕೇಂದ್ರ ಕೃಷಿ ಬೆಲೆ ನೀತಿ ಆಯೋಗವೇ ಒಂದು ಕ್ವಿಂಟಾಲ್ ತೆಂಗು ಬೆಳೆಯಲು 11334 ರೂ ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ, ಕೇಂದ್ರ ಮಾತ್ರ ಬೆಂಬಲ ಬೆಲೆಯನ್ನು 9200 ರೂಗಳಿಂದ ಹೆಚ್ಚಳ ಮಾಡಿಲ್ಲ.
ಇದನ್ನೇ ನೆಪವಾಗಿಟ್ಟುಕೊಂಡು ವ್ಯಾಪಾರಸ್ಥರು ತೆಂಗು ಬೆಳೆಗಾರರನ್ನು ಶೋಷಣೆ ಮಾಡುತ್ತಿದ್ದು, ಕೇಂದ್ರ ಸರಕಾರ ಇತ್ತ ಗಮನಹರಿಸಿ, ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದರು.

      ತೆಂಗಿನ ಉಪ ಉತ್ಪನ್ನಗಳಾದ ನೀರಾವನ್ನು ಇಳಿಸಲು ಕಾನೂನು ಬದ್ದ ಅವಕಾಶವನ್ನು ರೈತರಿಗೆ ನೀಡಬೇಕು.ಅಲ್ಲದೆ ತೆಂಗಿನ ಉತ್ಪನ್ನಗಳ ಮೌಲ್ಯ ವರ್ಧನೆಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು.

      ಕರ್ನಾಟಕದ ತೆಂಗು ಅದರಲ್ಲಿಯೂ ಮಧ್ಯಕರ್ನಾಟಕ ಜಿಗುಟು ಕೊಬ್ಬರಿಗೆ ಜಿಯೋ ಟ್ಯಾಗ ಮಾಡುವ ಮೂಲಕ ಪ್ರಪಂಚದಾದ್ಯಂತ ಬ್ರಾಂಡ್ಯ ವ್ಯೂಲು ದೊರೆಯುವಂತೆ ಕೇಂದ್ರ ಸರಕಾರ ಮಾಡಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಒತ್ತಾಯಿಸಿದರು.

      ಪ್ರತಿಭಟನಾಧರಣಿಯಲ್ಲಿ ಶ್ರೀ ಹನುಮಂತನಾಥ ಸ್ವಾಮೀಜಿ, ಮುಖಂಡರಾದ ಕೆ.ಎ.ದೇವರಾಜು, ಚಿಕ್ಕವೆಂಕಟಯ್ಯ, ಜಯರಾಮ್, ರಾಯಸಂದ್ರ ರವಿಕುಮಾರ್, ಕೆಸ್ತೂರು ಗಂಗಾಧರಯ್ಯ, ಮೇಯರ್ ಫರೀಧಾ ಬೇಗಂ, ಪಾಲಿಕೆ ಸದಸ್ಯರಾದ ನಯಾಜ್,ಮೆಹಬೂಬ್, ವಿಜಯಕುಮಾರ್, ಕಾಮರಾಜು, ಚೌದ್ರಿರಂಗಪ್ಪ, ಜಯರಾಮ್, ಆಟೋರಾಜು,ಮಲ್ಲೇಶ್, ಸರೋಜಗೌಡ, ನಾಗಮಣಿ, ಗಿರೀಶ್, ಕುಚ್ಚಂಗಿ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

(Visited 23 times, 1 visits today)
Previous Articleಕೊರಟಗೆರೆ ಗಿರಿನಗರದಲ್ಲಿ 20 ದಿನಗಳಿಂದ ಚಿರತೆ ಹಾವಳಿ
Next Article ಕೊರಟಗೆರೆ : ಕಸದ ಬುಟ್ಟಿ ವಿತರಿಸಿ ಕಸ ವಿಂಗಡಣೆ ಬಗ್ಗೆ ಜಾಗೃತಿ!
News Desk Benkiyabale

Related Posts

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು

ರಾತ್ರಿ 8 ರವರೆಗೂ ಪಡಿತರ ವಿತರಣೆ

December 08, 2025 4:18 pm ತುಮಕೂರು

ಅಂಬೇಡ್ಕರ್ ವಿಚಾರಧಾರೆಗಳನ್ನು ಅನುಸರಿಸಿ

December 08, 2025 4:12 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm
ಇತರೆ ಸುದ್ಧಿಗಳು

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm
ಇತರೆ ಸುದ್ಧಿಗಳು

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm
ಇತರೆ ಸುದ್ಧಿಗಳು

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm
ಇತರೆ ಸುದ್ಧಿಗಳು

ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ

December 11, 2025 4:24 pm
ಇತರೆ ಸುದ್ಧಿಗಳು

ಅನರ್ಹ ಬಿಪಿಎಲ್ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಳ್ಳಲು ಎಡಿಸಿ ತಿಪ್ಪೇಸ್ವಾಮಿ ಸಲಹೆ

December 11, 2025 4:23 pm
Our Youtube Channel
Our Picks

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm

ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ

December 11, 2025 4:24 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

By News Desk BenkiyabaleDecember 11, 2025 4:30 pm

ಕುಣಿಗಲ್: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ಗೌರವಿಸಬೇಕು. ಭಾರತೀಯ ಸಂವಿಧಾನವು…

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.