ತುಮಕೂರು


ಆಂದ್ರ ಪ್ರದೇಶ ಅನಂತಪುರಂ ಜಿಲ್ಲೆ ಮಡಕಸಿರಾ ಮಂಡಲಂ ಶ್ರೀಕ್ಷೇತ್ರ ಹೇಮಾವತಿ ಗ್ರಾಮದಲ್ಲಿ ಶ್ರೀ ಶರಣ ಹಂಪಣ್ಣ ತಾತಯ್ಯನವರ ಗದ್ದುಗೆ ಪುನರ್ ನಿರ್ಮಾಣದ ಕಾರ್ಯಕಾರಿ ಸಮಿತಿ ವತಿಯಿಂದ ನವೆಂಬರ್ 6 ರಂದು ಭಾನುವಾರ ಪುನರ್ ನಿರ್ಮಿತ ಹಂಪಣ್ಣ ತಾತಯ್ಯನವರ ಗದ್ದುಗೆ (ದೇವಾಲಯ) ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಅಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಬೆಳಿಗ್ಗೆ 8.30 ಕ್ಕೆ ಗಂಗಾಪೂಜೆ, ರುದ್ರಕಳಸ ಸ್ಥಾಪನೆ, ಮಹಾಗಣಪತಿ ಪೂಜೆ, ಚರಲಿಂಗಕ್ಕೆ ರುದ್ರಾಭಿಷೇಕ, ಬೆಳಿಗ್ಗೆ 11ಕ್ಕೆ ಶ್ರೀ ಕ್ಷೇತ್ರದ ಹೆಂಜೇರು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿ ತಾತಯ್ಯನ ಸನ್ನಿಧಿಗೆ ಆಗಮನ. ಬೆಳಿಗ್ಗೆ 11.30 ಕ್ಕೆ ಅಷ್ಟೋತ್ತರ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1 ಗಂಟೆಗೆ ದಾಸೋಹ ಏರ್ಪಡಿಸಲಾಗಿದೆ.
ಈ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಾತಯ್ಯನವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿಯವರು ಕೋರಿದ್ದಾರೆ.

(Visited 6 times, 1 visits today)