ಚಿಕ್ಕನಾಯಕನಹಳ್ಳಿ


ಅಂತರಾಷ್ಟ್ರೀಯ ಕೊಕೊನಟ್ ಕಮ್ಯೂನಿಟಿ (ಕೃಷಿ ಸಂಸ್ಥೆ) ವತಿಯಿಂದ ನವಂಬರ್ 7 ರಿಂದ 11 ರ ವರೆಗೆ ಮಲೇಷಿಯಾ ದೇಶದ ಕೋಲಾಲಂಪುರ ನಗರದಲ್ಲಿ ಆಯೋಜಿಸಲಾಗಿದ್ದ 50 ನೇ ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನ ದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಸಿ ಟಿ ಮುದ್ದುಕುಮಾರ್ ಮತ್ತು ತಂಡ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರ ಚಂದ್ರಶೇಖರ್ ದೊಡ್ಡಮನಿ, ತಾಂತ್ರಿಕ ಕೋಶ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಜೈ ಕುಮಾರ್ ತಂಡದಲ್ಲಿದ್ದರು.
ಅಂತರಾಷ್ಟ್ರೀಯ ಕೊ ಕೊ ಟೆಕ್ ಸಮಾವೇಶ ಮತ್ತು ವಸ್ತುಪ್ರದರ್ಶನವು ಪ್ರತಿ 2 ವರ್ಷಕ್ಕೊಮ್ಮೆ ಜರುಗುವ ಸಮಾವೇಶವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಏಷ್ಯ ಖಂಡದ 8 ದೇಶಗಳು ಒಳಗೊಂಡಂತೆ ಒಟ್ಟು 20 ತೆಂಗು ಬೆಳೆಯುವ ದೇಶಗಳು ಈ ಅಂತರಾಷ್ಟ್ರೀಯ ಒಕ್ಕೂಟಕ್ಕೆ ಒಳಪಟ್ಟಿದ್ದು, ಈ ಎಲ್ಲಾ ದೇಶಗಳು ಸಮಾವೇಶದಲ್ಲಿ ಭಾಗವಹಿಸಿವೆ.
ಈ ಸಮಾವೇಶದಲ್ಲಿ ತೆಂಗು ಬೆಳೆಯುವ ರೈತರಿಗೆ ಮತ್ತು ತೆಂಗಿನ ಕೈಗಾರಿಕೊದ್ಯಮಿಗಳಿಗೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅಗತ್ಯ ಮಾಹಿತಿ ತಾಂತ್ರಿಕ ಸಲಹೆಗಳು ಪ್ರಾತ್ಯಕ್ಷಿಕೆ ಒಳಗೊಂಡ ತರಬೇತಿಯನ್ನು ನೀಡಲಾಗಿದೆ. ಈ ಸಮಾವೇಶದಲ್ಲಿ ವಿಜ್ಞಾನಿ, ಸಂಶೋಧಕರಿಂದ ತೆಂಗು ಬೆಳೆ ಸಮಗ್ರ ಅಭಿವೃದ್ಧಿ, ರೋಗನಿವಾರಣೆ ಕುರಿತ ವರದಿ ಮಂಡನೆಯಾಗಿದೆ, ಅಂತಿಮವಾಗಿ ಹಲವು ಉಪಯುಕ್ತ ನಿರ್ಣಯಗಳು ಮತ್ತು ಶಿಫಾರಸ್ಸುಗಳೊಂದಿಗೆ ಸಮಾವೇಶ ಮುಕ್ತಾಯಗೊಂಡಿದೆ. ಈ ಸಮಾವೇಶದಲ್ಲಿ ತಾಂತ್ರಿಕ ಕೋಶ ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ಇತರೆ ದೇಶಗಳಿಂದ ನೂರಾರು ಸಂಖ್ಯೆಯಲ್ಲಿ ಅಧಿಕಾರಿಗಳು ವಿಜ್ಞಾನಿ ಗಳು ಪ್ರದರ್ಶಕರು ಭಾಗವಹಿಸಿದ್ದರು.

(Visited 1 times, 1 visits today)