ತುಮಕೂರು


ತಿಪಟೂರಿನ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ನೀಡುವ ಸಾಹಿತ್ಯ ಕಲ್ಪತರು ರಾಜ್ಯಮಟ್ಟದ ಪ್ರಶಸ್ತಿಗೆ ನಮ್ಮ ನಾಡಿನ ಹಿರಿಯ ಕವಯತ್ರಿ, ಅನುವಾದಕರು, ಪ್ರಬಂಧಕಾರರು, ಪ್ರಕಾಶಕರು ಆದ ಪೆÇ್ರ. ಎಂ.ಆರ್. ಕಮಲ ಅವರು ಭಾಜನರಾಗಿದ್ದಾರೆ.
ಈ ಪ್ರಶಸ್ತಿಯು ಹತ್ತು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಭಾನುಪ್ರಶಾಂತ್ ತಿಳಿಸಿದ್ದಾರೆ.
ಕಮಲ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಜೀವಮಾನದ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದು ಸಂಘವು ಕೊಡಮಾಡುತ್ತಿರುವ ಮೂರನೆಯ ಪ್ರಶಸ್ತಿಯಾಗಿದ್ದು, ಕಳೆದರೆಡರು “ಸಾಹಿತ್ಯ ಕಲ್ಪತರು” ಪ್ರಶಸ್ತಿಗೆ ಹಿರಿಯ ಕವಿಗಳಾದ ಡುಂಡಿರಾಜ್ ಮತ್ತು ಬಿ.ಆರ್. ಲಕ್ಷ್ಮಣರಾವ್ ಅವರುಗಳು ಭಾಜನರಾಗಿದ್ದರು.
ಈ ವರ್ಷದ ಪ್ರಶಸ್ತಿಯು ತಿಪಟೂರಿನ ಸೊಸೆ, ಪಕ್ಕದ ಮೇಟಿಕುರ್ಕೆಯ ಕವಯತ್ರಿ ಎಂ.ಆರ್. ಕಮಲ ಅವರನ್ನು ಆಯ್ಕೆ ಮಾಡಲಾಗಿದೆ.
ಸಾಹಿತಿ ಹೆಚ್.ಎಸ್. ಸತ್ಯನಾರಾಯಣ ಮತ್ತು ಸಾಹಿತಿ ತುರುವೇಕೆರೆ ಪ್ರಸಾದ್ ನೇತೃತ್ವದ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ, ಉಪನ್ಯಾಸಕರಾದ ಎಲ್.ಎಂ. ವೆಂಕಟೇಶ್, ಶಿಕ್ಷಕರಾದ ಪಟ್ಟಾಭಿರಾಮು, ನಿವೃತ ಬ್ಯಾಂಕ್ ಮ್ಯಾನೇಜರ್ ಆರ್.ಎಂ. ಕುಮಾರಸ್ವಾಮಿ, ಪತ್ರಕರ್ತರಾದ ರಮೇಶ್, ಸತೀಶ್ ಯಲದಬಾಗಿ ರವರನ್ನೊಳಗೊಂಡ ಆಯ್ಕೆ ಸಮಿತಿಯು ಎಂ.ಆರ್. ಕಮಲರವರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನ. 18 ರಂದು, ಸಂಜೆ 6 ಗಂಟೆಗೆ ತಿಪಟೂರಿನ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಏರ್ಪಡಿಸಲಾಗಿದೆ.
21ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್, ಹಿರಿಯ ಪತ್ರಕರ್ತರು, ಬೆಂಗಳೂರು ದೂರದರ್ಶನ ಕೆಂದ್ರದ ವಿಶ್ರಾಂತ ನಿರ್ದೇಶಕರು ಆಗಿರುವ ಜಿ.ಎಂ. ಶಿರಾಹಟ್ಟಿ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಮಾದ್ಯಮ ಪರಿಣತರಾದ ಎಲ್.ಜಿ. ಜ್ಯೋತೀಶ್ವರ್, ಮುಖಂಡ ಲೋಕೇಶ್ಬರ ಮತ್ತಿತರರು ಭಾಗವಹಿಸಲಿದ್ದಾರೆ.

(Visited 1 times, 1 visits today)