ತುಮಕೂರು ಗ್ರಾಮಾಂತರ 

ಹೆತ್ತೇನಹಳ್ಳಿ ಮಾರಮ್ಮನಿಗೆ ಮಾಜಿ ಶಾಸಕರಾದ ಸುರೇಶ್ ಗೌಡ ಅವರು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಮಂಗಳವಾರ ಬೆಳ್ಳಿ ಖಡ್ಗವನ್ನು ಸಮರ್ಪಿಸಿದರು.
ಡಿಸೆಂಬರ್-7 ರಂದು ಭಾರತೀಯ ಜನತಾ ಪಕ್ಷದ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಛೇರಿ “ ಶಕ್ತಿ ಸೌಧ’’ ಉದ್ಘಾಟಿಸಲು ಆಗಮಿಸಿದ್ದ ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುರೇಶ್ ಗೌಡರವರು ಬೆಳ್ಳಿ ಖಡ್ಗವನ್ನು ನೀಡಿದ್ದರು. ಮುಖ್ಯಮಂತ್ರಿಗಳು ಬೆಳ್ಳಿ ಖಡ್ಗವನ್ನು ಈ ಭಾಗದ ಶಕ್ತಿ ದೇವತೆಗೆ ಸಮರ್ಪಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾನ್ಯ ಮಾಜಿ ಶಾಸಕರಾದ ಸುರೇಶ್ ಗೌಡರವರು ಮಾರಮ್ಮ ದೇಗುಲಕ್ಕೆ ಬೆಳ್ಳಿಖಡ್ಗ ನೀಡಿದರು.
ಮಾಜಿ ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಬೆಳ್ಳಿ ಖಡ್ಗವನ್ನು ಶಕ್ತಿದೇವತೆಗೆ ಸಮರ್ಪಿಸಿ, ಪ್ರಾರ್ಥಿಸಲಾಗಿದೆ ಎಂದರು. ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಸಿದ್ದೇಶ್ , ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್,ಉದ್ಯಮಿ ನೀಲೇಶ್, ಸಿದ್ದೇಗೌಡ್ರು,ರವೀಂದ್ರ,ರಾಜಣ್ಣ ನರಸಿಂಹಮೂರ್ತಿ,ಸಿದ್ದರಾಜು, ಎಪಿಎಂಸಿ ಸದಸ್ಯ ಚಂದ್ರಣ್ಣ, ಎ ಪಿ ಎಂಸಿ ಉಪಾಧ್ಯಕ್ಷ ಶಿವರಾಜು, ಬಿಜೆಪಿ ಉಪಾಧ್ಯಕ್ಷ ರಾಜಶೇಖರ್, ಸಿದ್ದರಾಜು, ರಮೇಶ್, ಕಾರ್ಯಕರ್ತರು, ಮುಖಂಡರು, ಅಧ್ಯಕ್ಷರು ಗ್ರಾಮಸ್ಥರು ಇದ್ದರು.

 

(Visited 1 times, 1 visits today)