ಗುಬ್ಬಿ


ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ನನಗೆ ಯಾವುದೇ ರೀತಿಯ ನೋಟೀಸ್ ಆಗಲಿ ಮಾಹಿತಿ ಆಗಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜಿಎಸ್ ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾವು ಸಹ ಇಂದಿನಿಂದ ಕಾಂಗ್ರೆಸ್ ಪಕ್ಷದ ಪರವಾಗಿಪ್ರಚಾರ ಆರಂಭಿಸಿದ್ದೇವೆ ಇದುವರೆಗೂ ಯಾರಿಗೂ ಸಹ ಕಾಂಗ್ರೆಸ್ ಅಭ್ಯರ್ಥಿ ಯನ್ನು ಘೋಷಣೆ ಮಾಡಿಲ್ಲ ಹಾಗಾಗಿ ನಮ್ಮ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ.
ಸಾಮಾಜಿಕ ಜಾಲತಾಣದಲ್ಲಿ ಪಕ್ಷದಿಂದ ತೆಗೆದು ಹಾಕಿದ್ದೇವೆ ಎಂಬ ವದಂತಿ ಹರಡಿದೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಪರಮೇಶ್ವರ್ ಅವರು ಬಂದಮೇಲೆ ಸ್ಪಷ್ಟನೆ ಸಿಗಲಿದೆ ಎಂದು ತಿಳಿಸಿದರು.
ಇನ್ನೂ ಎರಡು ಲಕ್ಷ ಕಟ್ಟಿ ಅರ್ಜಿಯನ್ನೇ ಹಾಕದಂತಹ ವರಿಗೆ ಮನ್ನಣೆ ನೀಡುತ್ತೀರಾ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನರೇ ಬೇಸರ ವ್ಯಕ್ತ ಪಡಿಸುತ್ತಾರೆ ನನ್ನನ್ನು ತೆಗೆದು ಹಾಕಲು ದೊಡ್ಡ ಪಿತೂರಿ ನಡೆಯುತ್ತಿದೆ ನಾನು ಮತ್ತು ಹೊನ್ನಗಿರಿ ಗೌಡರು ಆಕಾಂಕ್ಷಿಗಳಾಗಿದ್ದೇವೆ ಕೊನೆಯವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಯಾವುದೇ ಕಾರಣಕ್ಕೂ ಮಾಜಿ ಗುಬ್ಬಿ ಶಾಸಕ ರಿಗೆ ನಾವು ಕೆಲಸ ಮಾಡುವುದಿಲ್ಲ ಅವರ ಮೇಲೆ ದ್ವೇಷವನ್ನು ಸಾಧಿಸುವುದಿಲ್ಲ ಪ್ರಚಾರವನ್ನು ಮಾಡುವುದಿಲ್ಲ ದೇವೇಗೌಡರನ್ನ ಬೈದಿರುವುದು ಬೇಸರ ತಂದಿದೆ ನನಗೆ ಪಕ್ಷದಲ್ಲಿ ಬೇಸರ ತಂದರೆ ನಾನು ರಾಜೀನಾಮೆ ಕೊಡುತ್ತೇನೆ ನಾವು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ನಮ್ಮೆಲ್ಲಾ ಕಾರ್ಯಕರ್ತರು ಹಿತೈಷಿಗಳ ಜೊತೆ ಮಾತುಕತೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಜೆಡಿಎಸ್ ಬಿಟ್ಟು ಕಾಂಗ್ರೆಸಿಗೆ ಬಂದಿರುವವರು ಯಾರು ಇದುವರೆಗೂ ಗೆದ್ದಿಲ್ಲ ನಿಜವಾದ ಕಾಂಗ್ರೆಸ್ಸಿಗರು ಮಾತ್ರ ಗೆಲುವು ಪಡೆಯುತ್ತಾರೆ.
ಮುಖಂಡ ಶಶಿಕಿರಣ್ ಮಾತನಾಡಿ ಇದುವರೆಗೂ ಬಿ ಫಾರಂ ಯಾರಿಗೂ ನೀಡಿಲ್ಲ ಸಿ ಫಾರಂಗೂ ಸಹ ತುಂಬಾ ಬೆಲೆ ಇದ್ದು ಅದನ್ನು ಸಹ ಪಡೆಯುವಂತಹ ಎಲ್ಲಾ ಅವಕಾಶಗಳು ಇವೆ ಕಷ್ಟ ಬಿದ್ದು ಪಕ್ಷ ಕಟ್ಟಿರುವಂತಹ ಅವರಿಗೆ ಗೌರವ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದ್ದು ನಾವು ಪಕ್ಷದಲ್ಲೇ ಇರುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಂ ವಿ ಶ್ರೀನಿವಾಸ್,ಶಿವಣ್ಣ ಗೋವಿಂದಪ್ಪ,ಶಂಕರೆ ಗೌಡ, ಯೋಗೀಶ್, ಲಕ್ಷ್ಮಿ ನಾರಾಯಣ್, ಸಿದ್ದೇಶ್,ಗಂಗಾಧರ್, ಹೇಮಂತ್ ರಂಗನಾಥ್ ಶಿವಾನಂದ್ ಸೇರಿದಂತೆ ಇನ್ನಿತರರರು ಹಾಜರಿದ್ದರು.

(Visited 1 times, 1 visits today)