ತುಮಕೂರು :

      ಅಂಚೆ ಇಲಾಖೆ ಆಶ್ರಯದಲ್ಲಿ ಮಧುಗಿರಿ ತಾಲೂಕಿನ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಚೆ ಪತ್ರವನ್ನು ಬರೆದು ಪ್ರಧಾನ ಮಂತ್ರಿಯವರಿಗೆ ರವಾನಿಸಿದರು.

      ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಎಲೆ ಮರೆಯ ಅಪ್ರತಿಮ ದೇಶ ಭಕ್ತ’, ‘ಸ್ವಾತಂತ್ರ್ಯ ಹೋರಾಟಗಾರರು’ ಹಾಗೂ ‘2047ರಲ್ಲಿ ನನ್ನ ಕನಸಿನ ಭಾರತ’ ಎಂಬ ವಿಷಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಂಚೆ ಪತ್ರ ಬರೆಯಲಾಯಿತು.

     ಕಾರ್ಯಕ್ರಮದಲ್ಲಿ ತುಮಕೂರು ಅಂಚೆ ವಿಭಾಗದ ಅಧೀಕ್ಷಕ ಎನ್.ಗೋವಿಂದರಾಜು, ಸಹಾಯಕ ಅಂಚೆ ಅಧೀಕ್ಷಕ ಗಂಗಪ್ಪ, ಮಧುಗಿರಿ ಅಂಚೆ ಉಪವಿಭಾಗದ ನಿರೀಕ್ಷಕ ಮಹೇಶ್, ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ರಘು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 

(Visited 27 times, 1 visits today)