ತುಮಕೂರು


ಜಲ, ಸೌರ ಮತ್ತು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್ ಸದ್ಯದ ಪರಿಸ್ಥಿಯಲ್ಲಿ ಸಾಲುತ್ತಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಇಂದು
ಆಧುನಿಕ ತಂತ್ರಜ್ಞಾನದಿಂದ ಹೆಚ್ಚು ಉತ್ಪಾದನೆ ಮತ್ತು ಸುಧಾರಣೆ ತಂದುಕೊಳ್ಳುವ ಅಗತ್ಯವಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ.ಸೆಮಿನಾರ್ ಸಭಾಂಗಣದಲ್ಲಿ ಇಂದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ‘ಎನರ್ಜಿ ಕ್ಲಬ್’ ಏರ್ಪಡಿಸಲಾಗಿದ್ದ ‘ ‘ವಿದ್ಯುತ್‍ಚಾಲಿತ ವಾಹನಗಳ ಬಳಕೆ ಮತ್ತು ಅದರ ಅನ್ವಯಿಕಗಳು’ ಕುರಿತು ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿದರು.
ತಂತ್ರಜ್ಞಾನ ಬಳಕೆಯಲ್ಲಿ ಜಗತ್ತನ್ನೇ ಬದಲಾಯಿಸಿಬಿಟ್ಟಿದೆ ಸೌರ ಶಕ್ತಿ ಉತ್ಪಾದನೆ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಉತ್ಪಾದನೆಗೆ ತಕ್ಕದಾಗಿಲ್ಲ. ಜಲ ವಿದ್ಯುತ್ ಹನ್ನೆರಡು ಸಾವಿರದಿಂದ ಹದಿನೈದು ಸಾವಿರ ಮೆಗಾ ವ್ಯಾಟ್ ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತೆ . ಅದರಲ್ಲಿ ಪಾವಗಡದಲ್ಲಿ 2900 ಕರ್ನಾಟಕದಲ್ಲಿ ಅದರಲ್ಲಿ 50% ನವೀಕರಿಸಬಹುದಾದ ಮೂಲಗಳಿಂದ ಶೇ.13 ರಿಂದ 15 ಪಸೆರ್ಂಟ್ ಹೈಡ್ರೋ 30% ಕಲ್ಲಿದ್ದಲು ನಿಂದ ಉತ್ಪಾದಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಲ, ಸೌರ ಮತ್ತು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಪಡೆಯುತ್ತಿರುವ ವಿದ್ಯುತ್ ಸಾಲುತ್ತಿಲ್ಲ. ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಂತರವಿದೆ. ಈ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ತುಮಕೂರು ಹಾಗೂ ರಾಜ್ಯದಲ್ಲಿ ಸೇರಿದಂತೆ ಅನೇಕ ಇಂದು ಪ್ರಸಕ್ತ ಸಾಲಿನಲ್ಲಿ ನೈಸರ್ಗಿಕವಾಗಿ ತಯಾರಿಸುವತ್ತ ರಾಜ್ಯಸರ್ಕಾರ ಗಮನಹರಿಸಬೇಕಾಗಿದೆ ಎಂದು ಸಾಹೇ ಕುಲಪತಿಗಳಾದ ಡಾ.ಜಿ.ಪರಮೇಶ್ವರ ಹೇಳಿದರು
ಪ್ರಪಂಚದ ಇತರೆ ಮುಂದುವರೆದ ದೇಶಗಳ ಪ್ರಸ್ತುತ ವಿದ್ಯುತ್ ಬೇಡಿಕೆ, ಪೂರೈಕೆ ಮತ್ತು ಕೊರತೆ ಬಗ್ಗೆಯೂ ಸಮನ್ವಯತೆ ಸಾಧಿಸುತ್ತಿರುವುದನ್ನು ಅಂಕಿ ಅಂಶಗಳ ಸಮೇತ ಉಲ್ಲೇಖಿಸಿದ ಅವರು, ಭಾರತದಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ನೀಡುತ್ತಿರುವ ಸಬ್ಸಿಡಿ, ಮತ್ತು ಅದರಿಂದ ಭವಿಷ್ಯದಲ್ಲಾಗುವ ಪರಿಣಾಮಗಳ ಬಗ್ಗೆಯೂ ಡಾ.ಜಿ.ಪರಮೇಶ್ವರ್ ಬೆಳಕು ಚೆಲ್ಲಿದರು. ಇದೇ ವೇಳೆ ಕೇಂದ್ರ ತಂತ್ರಜ್ಞಾನ ಉತ್ಪಾದನಾ ವಿದ್ಯಾಲಯದ ನಿರ್ದೇಶಕರಾದ ಡಾ. ನಾಗಹನುಮಯ್ಯ ಮಾತನಾಡಿ, ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗುತ್ತವೆ. ಎಲಿಕ್ಟ್ರಾನಿಕ್ ಇಂಜನಿಯರಗಳು ಅದನ್ನು ಅಭಿವೃದ್ಧಿ ಪಡಿಸಿದರೆ ಮೆಕ್ಯಾನಿಕಲ್ ಎಂಜನಿಯರಗಳು ಅದರ ವಿನ್ಯಾಸ ಮಾಡುತ್ತಾರೆ. ಇಂತಹ ಯೋಜನೆಗಳ ಜಾರಿಗೆ ಕಾರ್ಯಗಾರ ಮತ್ತು ಸಂವಾದ ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ ಮೂಲಕ ಸಂವಾದ ನಡೆಸಿದರು.
ಇಸ್ರೋ ಸಂಸ್ಥೆಯ ಸಿ.ಕೆ.ಗೌರಿಶಂಕರ್, ಸಾಹೇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಾಲಚಂದ್ರ.ಪಿ.ಶೆಟ್ಟಿ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ಸಂಜೀವ್ ಕುಮಾರ್, ‘ಎನರ್ಜಿ ಕ್ಲಬ್’ ಸಂಯೋಜಕರಾದ ಪ್ರೊ. ಎನ್. ಪ್ರದೀಪ್, ಶ್ರೀಹರ್ಷ ಜೆ, ವಿದ್ಯಾರ್ಥಿ ಸಂಯೋಜಕಿ ಪೂರ್ಣಿಮಾ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

(Visited 5 times, 1 visits today)