ತುಮಕೂರು:


ದಿವಂಗತ ರಾಜೀವ್ ಗಾಂಧಿಯವರ ಸ್ಮರಣಾರ್ಥ ತಮಿಳುನಾಡಿನ ಶ್ರೀ ಪೆರಂಬುದೂರಿನ ಶ್ರೀ ರಾಜೀವ್ ಗಾಂಧಿ ಸ್ವಾರಕದ ಬಳಿ ಜ್ಯೋತಿ ಉದ್ಘಾಟಿಸಿ ವಿವಿಧ ರಾಜ್ಯಗಳ ಮಾರ್ಗವಾಗಿ ನವದೆಹಲಿಯ ವೀರಭೂಮಿಗೆ ತಲುಪಲಿದೆ. ಕಳೆದ 31 ವರ್ಷಗಳಿಂದ ರಾಜೀವ್‍ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಅದರಂತೆ ಈ ವರ್ಷದ ಜ್ಯೋತಿಯಾತ್ರೆ ಸಾಗುವ ಮಾರ್ಗಮಧ್ಯೆ ಇಂದು ತುಮಕೂರು ನಗರಕ್ಕೆ ಆಗಮಿಸಿದ ಸಂದರ್ಭ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಫೀಕ್ ಅಹ್ಮದ್ ರವರು ಜ್ಯೋತಿಯನ್ನು ಸ್ವಾಗತಿಸಿ, ರಾಜೀವ್‍ಗಾಂಧಿ ಸದ್ಭಾವನಾ ಜ್ಯೋತಿಯಾತ್ರೆ ಸಮಿತಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಡಾ.ರಫೀಕ್ ಅಹ್ಮದ್ ರವರು ಮಾತನಾಡಿ ರಾಜೀವ್ ಗಾಂಧಿಯವರ ವಿಚಾರಧಾರೆಗಳನ್ನು ಪಸರಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಂತಸದ ವಿಷಯ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಈ ಜ್ಯೋತಿಯನ್ನು ಸ್ವಾಗತಿಸಿ ಈ ಯಾತ್ರೆ ಯಶಸ್ವಿಯಾಗಿ ಸಾಗಲಿ ಎಂದು ಶುಭ ಕೋರಿದರು.
ಸಮಿತಿಯ ಕಾರ್ಯಾಧ್ಯಕ್ಷರಾದ ದೊರೈ, ಪದಾಧಿಕಾರಿಗಳಾದ ಮಾಣಿಕ್ಯ ರೆಡ್ಡಿ, ಗೊಮತೇಶನ್ ಮತ್ತಿತರರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

(Visited 1 times, 1 visits today)