ತುಮಕೂರು:
ನಗರದ ಶ್ರೀ ಸಿದ್ಧಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ನಿವೃತ್ತರಾದ ಪ್ರೊ.ಸಿದ್ಧಗಂಗಪ್ಪ ಮತ್ತು ಅವರ ಮಗಳು ಶ್ರೀಮತಿ ಜಲಜರವರು ಒಂದು ಲಕ್ಷ ರೂಗಳ ದೇಣಿಗೆಯನ್ನು ನೀಡಿದ್ದಾರೆ.ಆ ಹಣವನ್ನು ಸಂಘ ನಿಶ್ಚಿತ ಠೇವಣಿ ಇಟ್ಟು ಪ್ರತಿ ವರ್ಷ ಆ ಹಣದಲ್ಲಿ ಬರುವ ಬಡ್ಡಿ ಹಣದಲ್ಲಿ ಕಾಲೇಜಿನಲ್ಲಿ ಓದುವ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವ್ಯಯಿಸುವಂತೆ ಸಂಘಕ್ಕೆ ಮನವಿ ಮಾಡಿದ್ದಾರೆ.
ದೇಣಿಗೆ ಸ್ವೀಕರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರೂ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ||ಹೆಚ್.ಪಿ.ವೀರಭದ್ರಸ್ವಾಮಿರವರು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಸಿದ್ಧಗಂಗಪ್ಪ ನವರು ಮತ್ತು ಅವರ ಕುಟುಂಬ ಸದಸ್ಯರು ನೀಡಿದ ಹಣದ ಪ್ರತಿ ರೂಪಾಯಿ ಕಾಲೇಜಿನಲ್ಲಿ ಓದುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೀಡಲಾಗುವುದು,ಇಂದು ನೀಡಿದ ದೇಣಿಗೆ ಎಲ್ಲರಿಗೂ ಮಾದರಿ ಎಂದು ಪ್ರಶಂಸಿದರು,ಇದೇ ರೀತಿ ಎಲ್ಲರೂ ಸಂಘಕ್ಕೆ ದೇಣಿಗೆ ನೀಡಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಪ್ರೊ.ಸಿ.ಎಸ್.ಸೋಮಶೇಖರಯ್ಯ,ಶ್ರೀಮತಿಇಂದ್ರಾಣಿ,ಸೂರ್ಯನಾರಾಯಣಗುಪ್ತ,ಬಸವರಾಜಪ್ಪ,ಪ್ರೊ.ಶೈಲೇಶ್, ಕುಮಾರಸ್ವಾಮಿ,ಪ್ರೊ.ಮಧು.ಎಸ್.ಕುಮಾರ್,ರೇಣುಕಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

(Visited 6 times, 1 visits today)