ತುರುವೇಕೆರೆ:


ಹೆಂಡತಿ ಮಕ್ಕಳೊಂದಿಗೆ ಕೆರೆಗೆ ಈಜು ಕಲಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ನಡೆದಿದಿ.
ತಾಲ್ಲೂಕಿನ .ಎಂ.ಬೇವಿನಹಳ್ಳಿ ನಿವಾಸಿ ಯೋಗಾನಂದ (45) ಎಂದಿನಂತೆ ಈಜು ಕಲಿಯಲು ತೆರಳಿ ಸಾವನ್ನಪ್ಪಿದ ಮೃತ ದುರ್ದೈವಿ.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಗೆ ಈಜು ಕಲಿಯಲು ಪಟ್ಟಣದವರು ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಯವರು ತೆರಳುತ್ತಾರೆ.
ಈ ರೀತಿ ತರಳುವವರಲ್ಲಿ ಎಲ್ಲಾ ವಯೋಮಾನದವರು ಹಾಗೂ ಹೆಂಗಸರು ಮಕ್ಕಳು ಕಲಿಯಲು ಟ್ಯೂಬ್ ಗಳ ಸಮೇತ ಮುಂಜಾನೆಯೆ ತರಳಿ ಸ್ಥಳೀಯ ಈಜು ಪಟು ದಂಡಿನಶಿವರ ತಿಮ್ಮೇಗೌಡ ಮಾರ್ಗದರ್ಶನದಲ್ಲಿ ಈಜು ಕಲಿಯಲು ಬರುತ್ತಾರೆ.
ಆದರೆ ಎರಡು ದಿನಗಳಿಂದ ದಂಡಿನಶಿವರ ತಿಮ್ಮೇಗೌಡ ಅನಾರೋಗ್ಯ ನಿಮಿತ್ತ ನಾನು ಬರುವುದಿಲ್ಲ ಎಂದು ತಿಳಿಸಿದ್ದರೂ, ಸಾರಿಗೆಹಳ್ಳಿ ಕೆರೆಗೆ ಇಂದು ಎಂದಿನಂತೆ ಕುಟುಂಬ ಸಮೇತ ಈಜು ಕಲಿಯಲು ಟ್ಯೂಬ್ ಸಮೇತ ಕೆರೆಯಲ್ಲಿ ಹೆಂಡತಿ ಆಶಾ ಹಾಗೂ ಮೂರು ವರ್ಷದ ಮಗುವಿನೊಂದಿಗೆ ಬಂದ ಯೋಗಾನಂದ್ ಟ್ಯೂಬ್ ನೊಂದಿಗೆ ಈಜಲು ಪ್ರಾರಂಭಿಸಿದನಾದರೂ ಮೇಲಿನಿಂದ ನೀರಿನಲ್ಲಿ ಬಿದ್ದಾಗ ಟ್ಯೂಬ್ ದೇಹದಿಂದ ಹೊರಬಂದು ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಸ್ಥಳದಲ್ಲಿ ಇದ್ದ ಹೆಂಡತಿ ಸ್ಥಳೀಯರಿಗೆ ವಿಚಾರ ಮುಟ್ಟಿಸಿದ್ದಾರೆ.
ನಂತರ ಸ್ಥಳಕ್ಕೆ ದಂಡಿನಶಿವರ ಪೆÇೀಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಮೃತ ದೇಹವನ್ನು ಹೊರತೆಗೆದಿದ್ದರೆ.

(Visited 5 times, 1 visits today)