BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಇನ್ನರ್ ವಿಲ್ ಸಂಸ್ಥೆ ಸಮಾಜದಲ್ಲಿ ಪರಸ್ಪರ ಸೇವಾ ಸಹಕಾರ ನೀಡುತ್ತಿದೆ: ಭವಾನಿ ಜಯರಾಮ್
  • ಹಿರಿಯ ನಾಗರೀಕರಿಗಾಗಿ ವಯಾ ವಿಕಾಸ್ ಸಂಸ್ಥೆ ಪ್ರಾರಂಭ
  • ಎಸ್‌ಎಸ್‌ಐಟಿಐಯಲ್ಲಿ ನೇಮಕಾತಿ ಡ್ರೆöÊವ್: ೬೯ವಿದ್ಯಾರ್ಥಿಗಳು ಆಯ್ಕೆ
  • ಇಸಿ-೨೦ ಹೆದ್ದಾರಿ ಕಾಮಗಾರಿಗೆ ಶೀಘ್ರ ಪರಿಹಾರ: ಸಂಸದ
  • ಜು.೦೮ ರಿಂದ ಪ್ರಿಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ
  • ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಗಮಕ ಕಲೆ ಪರಿಚಯ ಅತ್ಯಗತ್ಯ: ಚಿಕ್ಕಬೆಳ್ಳಾವಿ ಶಿವಕುಮಾರ್ ಹೇಳಿಕೆ
  • ಸಚಿವರಿಂದ ಮೇಲ್ಸೇತುವೆಗಳಿಗೆ ಶಂಕುಸ್ಥಾಪನೆ
  • ಸಿದ್ಧಾರ್ಥ ರೇಡಿಯೋ ಕೇಂದ್ರಕ್ಕೆ ಬೆಂಗಳೂರಿನ ಸೇಂಟ್ ಪೌಲ್ಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಭೇಟಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ
ತುಮಕೂರು ಜಿಲ್ಲಾ ಸುದ್ಧಿಗಳು

ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ

By News Desk BenkiyabaleUpdated:November 01, 2018 4:38 pm

ಚಿಕ್ಕನಾಯಕನಹಳ್ಳಿ:

      ಕರ್ನಾಟಕ ಒಂದು ಮಾಡಿದ ಭಾಗದಿಂದಲೇ ಇಂದು ವಿಭಜನೆ ಮಾತು ಕೇಳಿ ಬರುತ್ತಿದೆ. ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ತಾರತಮ್ಯ ಹೆಸರಿನಲ್ಲಿ ಕರ್ನಾಟಕ ಒಡೆಯುವ ಮಾತುಗಳು ಸರಿಯಲ್ಲ, ಇಡೀ ಕರ್ನಾಟಕ-ಕನ್ನಡಿಗರು ಒಂದಾಗಿದ್ದರೆ ಮಾತ್ರ ಬೆಳವಣಿಗೆ ಕಾಣುತ್ತದೆ, 1956ರ ನವಂಬರ್ 1ರಂದು ಅನೇಕ ಕವಿಗಳು, ಹೋರಾಟಗಾರರ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲಾಯಿತು, ಹೋರಾಟದ ಆಶಯದಂತೆ 1973ರ ನವಂಬರ್ 1ರಂದೇ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು, ಇದರ ಸವಿ ನೆನಪಿಗಾಗಿಯೇ ಪ್ರತಿ ವರ್ಷ ನವಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

      ಪ್ರತಿಯೊಬ್ಬ ಕನ್ನಡಿಗನು ಈ ನೆಲ, ಜಲದ ಅಭಿಮಾನ ಇಮ್ಮಡಿಸಿಕೊಳ್ಳಬೇಕು, ಸುದೀರ್ಘ ಇತಿಹಾಸವುಳ್ಳ ಕನ್ನಡ ಭಾಷೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಬೇಕು ಎಂದ ಅವರು, ದೇಶದಲ್ಲಿ ಶೇ.33%ರಷ್ಠಿರಬೇಕಾಗಿದ್ದ ಅರಣ್ಯ ಪ್ರದೇಶ ಇಂದು ಶೇ.17% ಇದೆ, ಅರಣ್ಯವಿಲ್ಲದೆ ಮಳೆ ಇಲ್ಲ-ಬೆಳೆ ಇಲ್ಲದಂತಾಗಿದೆ, ನಾವೆಲ್ಲರೂ ಸೇರಿ ಅರಣ್ಯ ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

      ತಹಶೀಲ್ದಾರ್ ಸೋಮಪ್ಪ ಕಡಕೋಳ ಮಾತನಾಡಿ, ಕನ್ನಡ ನಾಡು ಸಾಹಿತ್ಯ, ಕಲೆ, ಸಂಸ್ಕøತಿಗಳ ನೆಲವೀಡು ಸುಮಾರು 2ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಕರುನಾಡಿನ ಗತ ವೈಭವವು ಇತಿಹಾಸದ ಪುಟಗಳಲ್ಲಿ ಸೇರಿದೆ, ಕಪ್ಪು ಮಣ್ಣಿನ ನಾಡು ಎಂದು ಕರೆಯುವ ಈ ನೆಲ ಅನೇಕ ಕವಿ ಚಿಂತಕರು ಬರಹಗಾರರ ತ್ಯಾಗದ ಹೋರಾಟದ ಫಲವಾಗಿದೆ, ಕರ್ನಾಟಕ ಅನೇಕ ಜೀವ ನದಿಗಳ ತಾಣವಾಗಿ, ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮ ಐತಿಹಾಸಿಕ ವೈಭವಕ್ಕೆ ಸಾಟಿಯಾಗಿದೆ ಎಂದರು.

      ಕನ್ನಡದ ಈ ನೆಲ ಕವಿ ಸಂತ, ಋಷಿ ಮುನಿಗಳ ತವರೂರು ಮಾನವ ಜಾತಿ ತಾನೊಂದೆ ವಲಂ, ಎನ್ನುವ ಮನುಷ್ಯ ಪ್ರೇಮವನ್ನು ಬಿತ್ತಿದ ಕನ್ನಡದ ಆದಿಕವಿ ಪಂಪ, ಚಂಪೂ ಸಾಹಿತ್ಯ ನೀಡಿದ ರನ್ನ, ಪೊನ್ನ, ಜನ್ನರಂತಹ ಕವಿಗಳ ಕಾವ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ, ವಚನಕಾರರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಬಿಕೆ, ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮರಂತಹ ಕವಿಗಳ ಕಾವ್ಯ ಜಗತ್ತು ಕನ್ನಡ ನಾಡನ್ನು ಶತಮಾನಗಳಿಂದ ಬೆಳಗುತ್ತಲೇ ಬಂದಿದೆ ಹಾಗೂ ಸಾಹಿತ್ಯದ ಬೆಳವಣಿಗೆಯ ಜೊತೆಯಲ್ಲಿ ಸಮಾಜದ ಮೂಡನಂಬಿಕೆ ಕಂದಾಚಾರ, ನಿಯಮಗಳನ್ನು ಸರಿಪಡಿಸಿ ಸಮಸಮಾಜದ ಕನಸು ಕಂಡ ಕನಕದಾಸರ ಸಾಹಿತ್ಯ, ಜಾತಿ, ಮತ, ವರ್ಗ, ವರ್ಣಗಳಿಂದ ಮುಕ್ತವಾದ ನಿರ್ಮಾಣಕ್ಕೆ ಅವರ ಕೀರ್ತನ ಸಾಹಿತ್ಯ ಒತ್ತು ನೀಡಿತು ಎಂದ ಅವರು, ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಕನ್ನಡ ಭಾಷೆಯನ್ನು ವಿಶ್ವಮಾನ್ಯಗೊಳಿಸಿ ಹಲವಾರು ಪ್ರಶಸ್ತಿಗಳನ್ನು ಕನ್ನಡದ ತಾಯಿಗೆ ಮುಡಿಸಿದ್ದಾರೆ, ಶಿವರಾಮಕಾರಂತರು, ದ.ರಾ.ಬೇಂದ್ರೆ, ಪಿ.ಲಂಕೇಶ್, ಪೂರ್ಣಚಂದ್ರ, ತೇಜಸ್ವಿ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಸಾ.ರಾ.ಅಬೂಬಕರ್, ಬಿ.ಎಂ.ಶ್ರೀಕಂಠಯ್ಯ, ತೀ.ನಂ.ಶ್ರೀಕಂಠಯ್ಯನಂತಹ ದಿಗ್ಗಜರು ಕನ್ನಡ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

 ಕಾರ್ಯಕ್ರಮದಲ್ಲಿ ಬಿಇಓ ಕಾತ್ಯಾಯಿನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಉಪಸ್ಥಿತರಿದ್ದರು.

(Visited 29 times, 1 visits today)
Previous Articleಡೇಲಿಹಂಟ್ ಸಮೀಕ್ಷೆ : ನಿರ್ಣಾಯಕ ನಾಯಕರಾದ ಪ್ರಧಾನಿ ಮೋದಿ
Next Article ಬಯಲು ಬಹಿರ್ದೆಸೆ ಮುಕ್ತ ರಾಜ್ಯ: 62ಲಕ್ಷ ಶೌಚಾಲಯ ನಿರ್ಮಾಣದ ಗುರಿ
News Desk Benkiyabale

Related Posts

ಇನ್ನರ್ ವಿಲ್ ಸಂಸ್ಥೆ ಸಮಾಜದಲ್ಲಿ ಪರಸ್ಪರ ಸೇವಾ ಸಹಕಾರ ನೀಡುತ್ತಿದೆ: ಭವಾನಿ ಜಯರಾಮ್

July 04, 2025 3:19 pm ತುಮಕೂರು

ಹಿರಿಯ ನಾಗರೀಕರಿಗಾಗಿ ವಯಾ ವಿಕಾಸ್ ಸಂಸ್ಥೆ ಪ್ರಾರಂಭ

July 04, 2025 3:08 pm ತುಮಕೂರು

ಎಸ್‌ಎಸ್‌ಐಟಿಐಯಲ್ಲಿ ನೇಮಕಾತಿ ಡ್ರೆöÊವ್: ೬೯ವಿದ್ಯಾರ್ಥಿಗಳು ಆಯ್ಕೆ

July 04, 2025 3:05 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಇನ್ನರ್ ವಿಲ್ ಸಂಸ್ಥೆ ಸಮಾಜದಲ್ಲಿ ಪರಸ್ಪರ ಸೇವಾ ಸಹಕಾರ ನೀಡುತ್ತಿದೆ: ಭವಾನಿ ಜಯರಾಮ್

July 04, 2025 3:19 pm
ತುಮಕೂರು

ಹಿರಿಯ ನಾಗರೀಕರಿಗಾಗಿ ವಯಾ ವಿಕಾಸ್ ಸಂಸ್ಥೆ ಪ್ರಾರಂಭ

July 04, 2025 3:08 pm
ತುಮಕೂರು

ಎಸ್‌ಎಸ್‌ಐಟಿಐಯಲ್ಲಿ ನೇಮಕಾತಿ ಡ್ರೆöÊವ್: ೬೯ವಿದ್ಯಾರ್ಥಿಗಳು ಆಯ್ಕೆ

July 04, 2025 3:05 pm
ತುಮಕೂರು

ಇಸಿ-೨೦ ಹೆದ್ದಾರಿ ಕಾಮಗಾರಿಗೆ ಶೀಘ್ರ ಪರಿಹಾರ: ಸಂಸದ

July 04, 2025 3:03 pm
ತುಮಕೂರು

ಜು.೦೮ ರಿಂದ ಪ್ರಿಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ

July 04, 2025 3:02 pm
ತುಮಕೂರು

ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಗಮಕ ಕಲೆ ಪರಿಚಯ ಅತ್ಯಗತ್ಯ: ಚಿಕ್ಕಬೆಳ್ಳಾವಿ ಶಿವಕುಮಾರ್ ಹೇಳಿಕೆ

July 04, 2025 3:00 pm
Our Youtube Channel
Our Picks

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm

ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ

June 28, 2025 3:38 pm

ಡಾ. ಶ್ರೀ ಶ್ರೀ ಶ್ರೀಶಿವಕುಮಾರ ಶ್ರೀಗಳ ಗ್ರಂಥ ಲೋಕಾರ್ಪಣೆ

June 28, 2025 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಇನ್ನರ್ ವಿಲ್ ಸಂಸ್ಥೆ ಸಮಾಜದಲ್ಲಿ ಪರಸ್ಪರ ಸೇವಾ ಸಹಕಾರ ನೀಡುತ್ತಿದೆ: ಭವಾನಿ ಜಯರಾಮ್

By News Desk BenkiyabaleJuly 04, 2025 3:19 pm

ಚಿಕ್ಕನಾಯಕನಹಳ್ಳಿ: ಸಹಕಾರ ನಾಯಕತ್ವದ ಹೆಜ್ಜೆಯ ನಡೆಯನ್ನು ಇನ್ನರ್ ವಿಲ್ ಸಂಸ್ಥೆ ನೀಡಿತು ಈ ಮೂಲಕ ಪರಸ್ಪರ ಸೇವಾ ಸಹಕಾರ ನೀಡುವ…

ಹಿರಿಯ ನಾಗರೀಕರಿಗಾಗಿ ವಯಾ ವಿಕಾಸ್ ಸಂಸ್ಥೆ ಪ್ರಾರಂಭ

July 04, 2025 3:08 pm

ಎಸ್‌ಎಸ್‌ಐಟಿಐಯಲ್ಲಿ ನೇಮಕಾತಿ ಡ್ರೆöÊವ್: ೬೯ವಿದ್ಯಾರ್ಥಿಗಳು ಆಯ್ಕೆ

July 04, 2025 3:05 pm

ಇಸಿ-೨೦ ಹೆದ್ದಾರಿ ಕಾಮಗಾರಿಗೆ ಶೀಘ್ರ ಪರಿಹಾರ: ಸಂಸದ

July 04, 2025 3:03 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.