ಮಧುಗಿರಿ :
ತಾಲೂಕಿನ ಪುರವಾರ ಹೋಬಳಿಯ ತಿಮಲಾಪುರಕ್ಕೆ ಇಂದು ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು, ಆದ ಡಾ. ಜಿ .ಪರಮೇಶ್ವರ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ಪುರವರ ಹೋಬಳಿಯ ತಿಮ್ಮಲಾಪುರ ಅಂಜನೇಯ ದೇವಸ್ಥಾನದ ಧ್ವಜ ಕಂಬ ಪೂಜಾ ಕಾರ್ಯಕ್ರಮ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ನಂತರ ಪುರವರ ಗ್ರಾಮದಲ್ಲಿ ಸಂತೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ ಮತ್ತು ಸರ್ಕಲ್ ಅಭಿವೃದ್ಧಿ ಕಾಮಗಾರಿ ಮಾಡಿ ಮಾತನಾಡಿದವರು ಪುರುವಾರ ಹೋಬಳಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಹಮ್ಮಿಕೊಂಡಿದ್ದೇವೆ. ಹಾಗೂ ರಸ್ತೆಗಳು ಹೈ ಮಾಸ್ಟ್ ಲ್ಯಾಂಪುಗಳು ಹಾಗೆ ಇಲ್ಲಿ ಕೃಷಿ ಮಾರುಕಟ್ಟೆ ಆಗಬೇಕೆಂದು ತುಂಬಾ ದಿನಗಳ ಬೇಡಿಕೆಯಾಗಿತ್ತು ಅದು ಕೂಡ ನೆರವೇರಿದ್ದು ಇಲ್ಲಿಯ ರೈತರು ತಾವು ಬೆಳೆದ ಬೆಳೆಗಳನ್ನು ಅವರೇ ಸ್ವತಹ ಮಾರುಕಟ್ಟೆಗೆ ತಂದು ಅವರೇ ಮಾರಿಕೊಂಡು ಹೋಗಬಹುದು ಎಂಬ ಬೇಡಿಕೆ ಇದ್ದು ಆದ್ದರಿಂದ ಅದು ಕೂಡ ಪೂರ್ಣಗೊಂಡಿದೆ.
ಸಂಕಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ,
ದೊಡ್ಡ ಹೊಸಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ಲ್ಯಾಂಪ್ ಕಂಬದ ಉದ್ಘಾಟನಾ ಕಾರ್ಯಕ್ರಮ ಜೊತೆಗೆ
ವಡ್ಡರಹಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.
ಹೊಳವನಹಳ್ಳಿ ಹೋಬಳಿಯ ಭೈರೇನಹಳ್ಳಿ ಗ್ರಾಮದಲ್ಲಿ ಹೈ ಮಾಸ್ಟ್ ಲೈಟ್ ಕಂಬದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಮಧುಗಿರಿ ತಾ.ಪಂ.ಅಧ್ಯಕ್ಷೆ ಇಂದಿರಾದೇನಾನಾಯ್ಕ,,ಇಓ ದೊಡ್ಡಸಿದ್ದಪ್ಪ,ತಹಶಿಲ್ದಾರ ಡಾ.ಜಿ.ವಿಶ್ವನಾಥ್, ಜಿಪಂ ಸದಸ್ಯ ಕೊಂಡವಾಡಿ ತಿಮ್ಮಯ್ಯ,ತುಮುಲ್ ನಿರ್ಧೆಶಕ ಕೊಂಡವಾಡಿ ಚಂದ್ರಶೇಖರ ಜಿ. .ಪಂ.ಎಇಇ ಸುರೇಶ್ ರೆಡ್ಡಿ,ಗ್ರಾಮಂತರ ನೀರು ಸರಬರಾಜು ಇಲಾಖೆಯ ರಾಮದಾಸ್,ಪಿಕಾರ್ಡ ಬ್ಯಾಂಕ್ ನ ಉಪಾಧ್ಯಕ್ಷ ಭ್ಯೆರಪ್ಪ,ಗುತ್ತಿಗೆದಾರ ಚಂದ್ರಶೇಖರ, ಎಪಿಎಂಸಿ ಸದಸ್ಯೆರಮಾಬಾಯಿ,ಕೊರಟಗೆರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗುಂಡಿನಪಾಳ್ಯ ಜಯಮ್ಮ,ಸಿಡಿಪಿಒ ಅನಿತಾ–, ಮುಂತಾದವರು ಇದ್ದರು.