BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು
  • ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ
  • ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು
  • ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್
  • ನ.೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ
  • ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ
  • ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷರ ಆಯ್ಕೆ
  • ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ: ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸ್ವಯಂ ಆತ್ಮಾವಲೋಕನದಿಂದ ದುಷ್ಚಟಗಳಿಂದ ದೂರವಿರಲು ಸಾಧ್ಯ
Trending

ಸ್ವಯಂ ಆತ್ಮಾವಲೋಕನದಿಂದ ದುಷ್ಚಟಗಳಿಂದ ದೂರವಿರಲು ಸಾಧ್ಯ

By News Desk BenkiyabaleUpdated:February 15, 2020 6:48 pm

ತುಮಕೂರು :

      ಒಂದು ಕುಟುಂಬ ನಿರ್ವಹಿಸುವಲ್ಲಿ ಸ್ತ್ರೀ-ಪುರುಷರ ಪಾತ್ರ ಬಹಳ ಮಹತ್ವದ್ದಾಗಿದ್ದು, ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಬ್ಬರೂ ಸಂಸ್ಕಾರಯುತ ಜೀವನ ಸಾಗಿಸಿ, ಆತ್ಮಾವಲೋಕನದ ಮೂಲಕ ತಮ್ಮ ದುಷ್ಚಟಗಳಿಂದ ದೂರವಿರಲು ಸಾಧ್ಯವಿದೆ ಎಂದು ಮಹಾಪೌರರಾದ ಫರಿದಾ ಬೇಗಂ ತಿಳಿಸಿದರು.

       ಅವರು ಇಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ, ನೆಹರು ಯುವಕೇಂದ್ರ, ತುಮಕೂರು ಇವರ ಸಹಯೋಗದಲ್ಲಿ ತುಮಕೂರು ಬಾಲಭವನ ಸಭಾಂಗಣದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

      ವಿಭಿನ್ನ ಸಂಸ್ಕøತಿ, ಸಂಪ್ರದಾಯಗಳ ದೇಶವಾಗಿರುವ ಭಾರತದಲ್ಲಿ ಏಕಸ್ವಾಮ್ಯತೆಯಿಂದ ಬದುಕಿರುವ ನಾವು ಪಾಶ್ಚತ್ಯ ದೇಶದ ಅನುಕರಣೆಯಿಂದ ಧೂಮಪಾನ, ಮದ್ಯಪಾನದಂತಹ ದುಷ್ಚಟಗಳ ದಾಸರಾಗಿದ್ದೇವೆ. ಸಂತೋಷ ಮತ್ತು ದುಃಖಗಳ ಸಂದರ್ಭಗಳಲ್ಲಿಯೂ ಸಹ ಮದ್ಯಪಾನ ಮಾಡಿ ಸಂಭ್ರಮಿಸುವುದು ಪಾಶ್ಚತ್ಯ ದೇಶದ ಸಂ‍ಸ್ಕೃತಿಯಾಗಿದೆ. ಈ ಸಂ‍ಸ್ಕೃತಿ ನಮ್ಮದಲ್ಲ. ಇದನ್ನು ಯುವ ಶಕ್ತಿ ಅರಿತು ನೈತಿಕ ಬದುಕಿನ ದಾರಿ ಕಂಡುಕೊಳ್ಳಬೇಕೆಂದು ಅವರು ಹೇಳಿದರು.

      ಮದ್ಯಪಾನ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಕ್ರಾಂತಿಕಾರಿ ಬದಲಾವಣೆ ಮೂಲಕ ಶುದ್ಧ ಜೀವನದ ಹಾದಿಯನ್ನು ನಾವೆಲ್ಲರೂ ರೂಡಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

      ಸಮಾರಂಭದ ಸಾನಿಧ್ಯ ವಹಿಸಿದ್ದ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾಗಿರುವ ವೀರೇಶಾನಂದ ಸರಸ್ವತೀ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಜೀವನದ ಏಳ್ಗೆಯ ಶಿಲ್ಪಿಗಳು ನಾವೇ ಆಗಿರುವುದರಿಂದ ನಮ್ಮ ಶರೀರ, ಮನಸ್ಸು ಮತ್ತು ಭೌದ್ಧಿಕ ಆರೋಗ್ಯಕ್ಕೆ ನಾವೇ ರೂವಾರಿಗಳಾಗಿದ್ದೇವೆ. ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಬದುಕಿದಾಗ ಉನ್ನತ ಸಮಾಜವನ್ನು ನಿರ್ಮಿಸಲು ಸಾಧ್ಯ. ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತಾಗಬೇಕು. ಬಲಹೀನ ದೌರ್ಬಲ್ಯಗಳಿಂದ ಕೂಡಿದ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಪವಿತ್ರ ಜೀವನ ನೆಮ್ಮದಿಯ ಬದುಕಿಗೆ ಬಹಳ ಮುಖ್ಯವಾಗಿದ್ದು, ಧೂಮಪಾನ, ಮದ್ಯಪಾನ ಹಾಗೂ ಡ್ರಗ್ಸ್‍ನಂತಹ ದುಷ್ಚಟಗಳಿಂದ ದೂರವಿದ್ದು, ಯುವಶಕ್ತಿ ನೈತಿಕತೆಯ ಬದುಕನ್ನು ಆಯ್ದುಕೊಳ್ಳಬೇಕೆಂದು ಸಲಹೆ ಮಾಡಿದರು.

      ದುಷ್ಚಟಗಳ ಬಗ್ಗೆ ವಿವರವಾಗಿ ಮನಮುಟ್ಟುವಂತೆ ಉದಾಹರಣೆಗಳ ಸಮೇತ ವಿವರಣೆ ನೀಡಿದರು. ಅವರು ಆರೋಗ್ಯಯುತ ಬದುಕಿಗೆ ಯೋಗ, ಧ್ಯಾನ ಮತ್ತು ನಿರ್ಮಲವಾದ ಪರಿಸರ ಬಹಳಮುಖ್ಯವಾದುದು. ಎಲ್ಲಾ ಕುಟುಂಬಗಳಲ್ಲಿ ಪ್ರೀತಿಯ ಮಾತುಗಳಿಂದ ತಪ್ಪು ಮಾಡಿದವರಿಗೆ ಅರಿವು ಮೂಡಿಸಿದಾಗ ಒಳ್ಳೆಯವರಾಗಲು ಸಾಧ್ಯವಿದೆ. ಇದನ್ನು ಸ್ವಾಮಿ ವಿವೇಕಾನಂದರು ಲವ್ ಇಸ್ ಲಾ ಎಂಬ ನಾಣ್ನುಡಿಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.

      ದುಡಿದಿದ್ದನ್ನು ಕುಡಿತಕ್ಕೆ ಹಾಕಿ ದೇಹ, ಮನಸ್ಸು ಮತ್ತು ಮನೆಯನ್ನು ಹಾಳು ಮಾಡಿಕೊಂಡು ಬೀದಿಪಾಲಾಗಿರುವ ಎಷ್ಟೋ ಕುಟುಂಬಗಳನ್ನು ದಿನಂಪ್ರತಿ ನಾವು ಪ್ರಾಯೋಗಿಕವಾಗಿ ನೋಡುತ್ತಿದ್ದೇವೆ. ಇದನ್ನು ತಿಳಿದು ದುಷ್ಚಟಗಳಿಗೆ ಬಲಿಯಾಗುತ್ತೇವೆ ಎನ್ನುವುದು ಮೂರ್ಖತನದ ಪರಮಾವಧಿಯಾದೀತು. ಇದನ್ನು ಅರಿತು ಪ್ರತಿಯೊಬ್ಬರೂ ಅವರವರ ಜೀವನವನ್ನು ಸುಂದರವಾಗಿಸಿಕೊಳ್ಳುವುದು ಅಥವಾ ವಿಕೃತಗೊಳಿಸಿಕೊಳ್ಳುವುದು ಅವರ ಕೈಯಲ್ಲಿದೆ ಎಂದರು.

      ಸಮಾರಂಭವನ್ನುದ್ದೇಶಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ಮಾತನಾಡಿದರು. ಅಚರ್ಡ್ ಸಂಸ್ಥೆಯ ಡಾ: ಹೆಚ್.ಜಿ. ಸದಾಶಿವಯ್ಯನವರು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.

    ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಗಳಾದ ರೋಹಿಣಿ ಕೆ. ಸರ್ವರನ್ನೂ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಉದ್ದೇಶ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾತನಾಡಿದರು.

      ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಯಿಂದ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಅಧಿಕಾರಿ/ ಸಿಬ್ಬಂದಿಯವರು ಉಪಸ್ಥಿತರಿದ್ದರು.

(Visited 14 times, 1 visits today)
Previous Articleಭರಪೂರ ಮಾಹಿತಿಯ ಕಣಜ ಸಿದ್ಧಗಂಗಾ ಜಾತ್ರೆ
Next Article ಜಿಲ್ಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
News Desk Benkiyabale

Related Posts

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು

ರೈತರ ಹೋರಾಟಕ್ಕೆ ಹೆಚ್ಚೆತ್ತುಕೊಳ್ಳದ ಸರ್ಕಾರ

November 06, 2025 3:01 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm
ಇತರೆ ಸುದ್ಧಿಗಳು

ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು

November 13, 2025 2:29 pm
ಇತರೆ ಸುದ್ಧಿಗಳು

ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್

November 13, 2025 2:27 pm
ಇತರೆ ಸುದ್ಧಿಗಳು

ನ.೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ

November 13, 2025 2:03 pm
ಇತರೆ ಸುದ್ಧಿಗಳು

ಕನ್ನಡ ಭಾಷಾಪ್ರೇಮ, ನಾಡಪ್ರೇಮ ಮಾತಿನಲ್ಲಿ ತಿಳಿಸುವಂತದಲ್ಲ

November 13, 2025 1:54 pm
Our Youtube Channel
Our Picks

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

November 13, 2025 2:43 pm

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm

ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು

November 13, 2025 2:29 pm

ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್

November 13, 2025 2:27 pm

ನ.೧೬ರಿಂದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ

November 13, 2025 2:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ನರೇಗಾ ಯೋಜನೆಯ ಬಿಲ್ ನೀಡಲು ಅಧ್ಯಕ್ಷನ ವಿರೋಧ ಗ್ರಾಮ ಪಂಚಾಯ್ತಿಗೆ ಬೀಗ ಜಡಿದ ಸದಸ್ಯರು ಮತ್ತು ರೈತರು

By News Desk BenkiyabaleNovember 13, 2025 2:43 pm

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷ ಮತ್ತು ಪಿಡಿಒ ಕಾರಣದಿಂದ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು…

ವಾರದ ಸಂತೆ ಎಪಿಎಂಸಿಗೆ ಬದಲಾಗೋದು ಅನುಮಾನ

November 13, 2025 2:33 pm

ವಿಶೇಷ ಚೇತನರ, ವೃದ್ದರ, ಮಕ್ಕಳ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಿ: ಶಾಸಕ ಸಿ.ಬಿ.ಸುರೇಶ್ಬಾಬು

November 13, 2025 2:29 pm

ಬಡವರ್ಗದವರ ಏಳ್ಗೆಗಾಗಿ ಶ್ರಮಿಸುತ್ತೆನೆ: ಕೆಎನ್‌ಆರ್

November 13, 2025 2:27 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.