BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ
  • ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು
  • ‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’
  • ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ
  • ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು
  • ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ
  • ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ
  • ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನಿರಂತರ ಪರಿಶ್ರಮದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ
ತುಮಕೂರು

ನಿರಂತರ ಪರಿಶ್ರಮದಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯ

By News Desk BenkiyabaleUpdated:May 17, 2022 7:20 pm

ತುಮಕೂರು:
ಶಿಕ್ಷಣದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಇವುಗಳಲ್ಲಿ ಯಾವುದು ಕೀಳಲ್ಲ. ನಿರಂತರ ಪರಿಶ್ರಮದಿಂದ ನಿಗಧಿತ ಗುರಿಯನ್ನು ತಲುಪಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕಲಾ ವಿಭಾಗದಲ್ಲಿ ಓದುವವರು ದಡ್ಡರು, ಬಡವರು ಎಂಬ ಕೀಳಿರಿಮೆ ಬೇಡ. ಆರ್ಟ್ ವಿಷಯ ಓದಿಯೇ ಇಂದು ನ್ಯಾಯಾಧೀಶನಾಗಿದ್ದೇನೆ. ಹಾಗಾಗಿ ಯಾವುದು ಕೀಳಲ್ಲ. ಮೇಲಲ್ಲ. ಗುರಿ ತಲುಪಲು ನಾವು ಅಡ್ಡದಾರಿ ಹಿಡಿಯದೆ ಸರಿಯಾದ ದಾರಿಯಲ್ಲಿ ಮುನ್ನೆಡೆದರೆ ಮಾತ್ರ ಸಾಧನೆಯ ಶಿಖರ ಹೇರಲು ಸಾಧ್ಯ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಇಂದು ಸರಕಾರದ ಜೊತೆಗೆ, ಶ್ರೀರಾಮ್ ಫೈನಾನ್ಸ್ ನಂತಹ ಹಲವಾರು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಉತ್ತೇಜನ ನೀಡಲು ಕೈಜೋಡಿವೆ. ನಾವುಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನೆಡೆಯಬೇಕು.ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ರಾಘವೇಂದ್ರಶೆಟ್ಟಿಗಾರ್ ಸಲಹೆ ನೀಡಿದರು.
ಚಾಲನ ಹುದ್ದೆ ನಾನು ಹೆಚ್ಚು ಗೌರವ ಕೊಡುವಂತಹ ಕೆಲಸ. ನನ್ನಂತಹ ಹತ್ತಾರು ಜನರು ಅವರ ಮೇಲೆ ನಂಬಿಕೆ ಇಟ್ಟು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ವಾಹನ ಹತ್ತಿರುತ್ತೇವೆ. ಚಾಲಕ ತನ್ನ ಕರ್ತವ್ಯವನ್ನು ನಿರ್ವಹಿಸಿದರೆ ಸಾಕು. ಹಾಗೆಯೇ ಬೇರೆಯವರು ಸಹ ತಮ್ಮ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ಮಾಡಿದರೆ, ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಹಾಗಾಗಿ ಯುವಜನರು ಹಕ್ಕುಗಳ ಜೊತೆಗೆ, ಕರ್ತವ್ಯದ ಜವಾಬ್ದಾರಿಯನ್ನು ಅರಿತು ದೇಶ ಮುನ್ನೆಡೆಸುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.
ನಗರಠಾಣೆಯ ಪಿ.ಎಸ್.ಐ ನವೀನ್ ಹೆಚ್.ಎಸ್.ಮಾತನಾಡಿ,ವಿದ್ಯಾರ್ಥಿ ಜೀವನವೆಂಬುದು ಒಂದು ಅಮೂಲ್ಯ. ಸಾಧನೆಗೆ ಅಡ್ಡದಾರಿ ಹಿಡಿಯುವ ಬದಲು ಯಾವುದರಲ್ಲಿಯೂ ಕೀಳಿರಿಮೆ ಬೆಳೆಸಿಕೊಳ್ಳದೆ ಮುನ್ನೆಡೆದರೆ ಒಂದಿಲೊಂದು ಗೌರವಾನ್ವಿತ ಹುದ್ದೆಗಳನ್ನು ಪಡೆಯಬಹುದು.ನಾವು ಮಾಡುವ ತಪ್ಪುಗಳನ್ನು ಹಣೆಬರಹದ ಮೇಲೆ ಹಾಕದೆ,ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುವಂಹತ ಸ್ಥಿತಿಗೆ ತಲುಪುವಂತಾಗಬೇಕು.ಪ್ರತಿಷ್ಠಿತ ಶಾಲೆಯಲ್ಲಿ ಓದಿದರೆ ಮಾತ್ರ ಬುದ್ದಿವಂತರು ಎಂಬುದು ತಪ್ಪು ಅಭಿಪ್ರಾಯ.ಶಿಕ್ಷಣಕ್ಕಾಗಿ ಸರಕಾರವು ಹಲವಾರು ಸವಲತ್ತುಗಳನ್ನು ನೀಡಿದೆ.ಅದೇ ರೀತಿ ಶ್ರೀರಾಮ ಫೈನಾನ್ಸ್‍ನಂತಹ ಹಲವಾರು ಸಂಸ್ಥೆಗಳು ಸಹ ಸಹಾಯ ಹಸ್ತ ಚಾಚಿವೆ.ಇವುಗಳ ಸದುಪಯೋಗ ಪಡಿಸಿಕೊಳ್ಳಿ, ವಿದ್ಯಾರ್ಥಿ ಜೀವನದಲ್ಲಿ ಎಂದಿಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬೇಡಿ.ಇದು ನಿಮ್ಮ ಜೀವನವನ್ನೇ ನಾಶಗೊಳಿಸುತ್ತದೆ. ಜೀವನ ಪರ್ಯಂತ ನಿಮ್ಮ ತಂದೆತಾಯಿಗಳಿಗೆ ಹೊರೆಯಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಇಓ ಹನುಮಾನಾಯ್ಕ್ ಮಾತನಾಡಿ,ವಿದ್ಯಾಭ್ಯಾಸಕ್ಕೆ ಬಡತನ ಎಂದಿಗೂ ಅಡ್ಡಿಬರುವುದಿಲ್ಲ. ಸರಕಾರ ಹಲವು ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದೆ.ಇವುಗಳನ್ನು ಬಳಸಿಕೊಂಡು ಉನ್ನತವಾದುದ್ದನ್ನು ಸಾಧಿಸಲು ಮುಂದಾಗಬೇಕು.ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸೊಣ ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ದೇವರಾಜು ಮಾತನಾಡಿ,ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಿಕ್ಕವಯಸ್ಸಿನ ಮಕ್ಕಳ ಕೈಗೆ ವಾಹನಗಳನ್ನು ನೀಡುತ್ತಾರೆ.ಇದು ಅಪರಾಧ ಒಂದು ವೇಳೆ ಅಪಘಾತವಾದರೆ ಪೋಷಕರ ವಿರುದ್ದ ಕೇಸು ಮತ್ತು ದಂಡ ಹಾಕಲಾಗುತ್ತದೆ.ಶಾಲೆಗೆ ಹೋಗುವ ಮಕ್ಕಳು ನಿಗಧಿತ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಮನೆ ಬಿಡಿ, ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗೀಯ ಬಿಸಿನೆಸ್ ಹೆಡ್ ಶ್ರೀಧರ್ ಮಠಮ್, 1974 ಆರಂಭವಾದ ಶ್ರೀರಾಮ್ ಫೈನಾನ್ಸ್ ಕಂಪನಿ ಇಂದು 2.10 ಕೋಟಿ ಗ್ರಾಹಕರನ್ನು ಹೊಂದಿದೆ.ಲಾರಿ ಚಾಲಕರು, ಮಾಲೀಕರಾಗಬೇಕೆಂಬ ಉದ್ದೇಶ ಕಂಪನಿಯದ್ದು,ಟ್ರಕ್ ಚಾಲಕರು ಹತ್ತಾರು ದಿನಗಳ ಕಾಲ ಮನೆ ಬಿಟ್ಟು ಹೊರಗಡೆಯೇ ಇರುವುದರಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂಬ ಆಸೆಯಿಂದ 2013ರಲ್ಲಿ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಗೆ ತರಲಾಯಿತು.ಪ್ರತಿವರ್ಷ ದೇಶದಲ್ಲಿ 25-30 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.ಇದರ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಶ್ರೀರಾಮ ಟ್ರಾನ್ಸ್‍ಪೋರ್ಟ್‍ನ ರಾಜ್ಯ ಬಿಸಿನೆಸ್ ಹೆಡ್ ಹೆಚ್.ಚನ್ನೇಗೌಡ, ಡಿಫಾಸಿಟ್ ಹೆಡ್ ವಿಜಯ ಕುಮಾರ್,ರೀಜಿನಲ್ ಬಿಸಿನೆಸ್ ಹೆಡ್ ರಾಘವೇಂದ್ರ, ಸ್ಥಳೀಯ ಮ್ಯಾನೇಜರ್ ಪ್ರಸನ್ನಕುಮಾರ್, ಯಧುಕುಮಾರ್, ಹುಸೇನಪ್ಪ, ಶಿವಕುಮಾರ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

(Visited 2 times, 1 visits today)
tumkur
Previous Articleಗರಿಷ್ಠ ಪ್ರಮಾಣದಲ್ಲಿ ಆಯುಷ್ಮಾನ್ ಕಾರ್ಡ್ ನೀಡಲು ಜಿಲ್ಲಾಧಿಕಾರಿ ಸೂಚನೆ
Next Article ಮಕ್ಕಳ ಸಹಾಯವಾಣಿ 1098 ದಿನಾಚರಣೆ: ಜಾಗೃತಿ ಜಾಥಾ
News Desk Benkiyabale

Related Posts

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

September 12, 2025 4:13 pm ಕಲೆ-ಸಾಹಿತ್ಯ

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿ ಪ್ರಕಟ

September 12, 2025 3:50 pm ತುಮಕೂರು

ಅಂಗವಿಕಲತೆ ಶಾಪವೂ ಅಲ್ಲ-ವರವೂ ಅಲ್ಲ: ಡಾ: ಸಿದ್ದರಾಮಣ್ಣ

September 12, 2025 3:49 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm
ಇತರೆ ಸುದ್ಧಿಗಳು

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm
ಇತರೆ ಸುದ್ಧಿಗಳು

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm
ಇತರೆ ಸುದ್ಧಿಗಳು

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm
ಇತರೆ ಸುದ್ಧಿಗಳು

ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು

September 20, 2025 2:45 pm
ಕಲೆ-ಸಾಹಿತ್ಯ

ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ

September 12, 2025 4:13 pm
Our Youtube Channel
Our Picks

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm

ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು

September 20, 2025 2:45 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

By News Desk BenkiyabaleSeptember 26, 2025 3:30 pm

ತುಮಕೂರು: ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿ ಗಣೇಶೋತ್ಸವ ಆಚರಿಸಿಕೊಂಡು ಹಿಂದೂ ಸಮಾಜ ಪೋಷಣೆ ಮಾಡುತ್ತಾ, ಧಾರ್ಮಿಕ…

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm

ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ

September 20, 2025 2:55 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.