ತುರುವೇಕೆರೆ: ಜೆಡಿಎಸ್ ಕಾರ್ಯಕರ್ತರು ಪಕ್ಷದ ಮೇಲೆ ಇಟ್ಟಿರುವ ನಂಬಕೆ ಆಶೀರ್ವಾದ ಇರುವರೆವಿಗೂ ಜೆಡಿಎಸ್ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೇಷನ್ ಹಾಲ್ ನಲ್ಲಿ ತಾಲೂಕು ಜೆಡೆಎಸ್ ಪಕ್ಷದಿಂದ ಆಯೋಜಿಸಿದ್ದ ಜನರೊಂದಿಗೆ ಜನತಾಧಳ ಹಾಗೂ ಸದಸ್ಯತ್ವ ನೊಂದಣಿ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಿಷ್ಟಾವಂತ ಕಾರ್ಯಕರ್ತರ ಪಕ್ಷ ಜೆಡಿಎಸ್ ಪಕ್ಷ, ಗ್ರಾಮೀಣ ಭಾಗದಲ್ಲಿ ಇರುವ ಪಕ್ಷಕ್ಕೆ ಜೆಡಿಎಸ್ ಕಾರ್ಯಕರ್ತರೇ ಆದಾರ ಸ್ಥಂಬ, ನಿಮ್ಮಗಳ ಬೆಂಬಲ ಪ್ರೋತ್ಸಾಹದಿಂದ ಇನ್ನು ಸಹ ಗಟ್ಟಿಯಾಗಿ ನಿಂತಿದೆ. ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ಸೂಚನೆಯಂತೆ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ನಿಮ್ಮಗಳ ಜೊತೆ ಬಂದಿದ್ದೇನೆ. ನಾನು ಜೆಡಿಎಸ್ ಪಕ್ಷ ರಾಜ್ಯಾದ್ಯಕ್ಷರಾಗಿ ಅದಿಕಾರ ಸ್ವೀಕರಿಸಲು ರಾಜ್ಯ ಸುತ್ತುತ್ತಿದ್ದಾರೆ ಎಂಬ ಆರೋಪಗಳನ್ನು ಕಾಂಗ್ರೇಸ್ ನವರು ಮಾಡುತ್ತಿದ್ದಾರೆ. ನಾನು ರಾಜ್ಯಾದ್ಯಕ್ಷ ಹುದ್ದೆ ಅಕಾಂಕ್ಷಿ ಅಲ್ಲ ಸಮಾನ್ಯ ಕಾರ್ಯಕರ್ತನಾಗಿ ರಾಜ್ಯ ಸುತ್ತಿ ಸಂಘಟನೆ ಮಾಡಿ ಪಕ್ಷ ಅದಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿ. ಅದ್ದರಿಂದ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಬೇಕು ಜೊತಗೆ ಸುಮಾರು ೫೦ ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ ಎಲ್ಲ ಕಾರ್ಯಕರ್ತರು ಮುಖಂಡರು ಕೈಜೋಡಿಸಿ ಎಂದು ಮನವಿ ಮಾಡಿದರು.
ಮುಂದಿನ ಸಲ ಸಚಿವರನ್ನಾಗಿ ಮಾಡಿ ಮನವಿ: ಶಾಸಕ ಎಂ.ಟಿ.ಕೃಷ್ಣಪ್ಪ ಹುಟ್ಟು ಹೋರಾಟಗಾಗರರು ಸದಾ ರೈತರ ಪರ ಹೋರಾಟ ಮಾಡುತ್ತಾ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದ್ದಿರಾ, ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆಶೀರ್ವಾದ ಮಾಡಿ ಗೆಲ್ಲಿಸಿ ಮಂತ್ರಿ ಮಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಜೆಡಿಎಸ್ ಮುಳುತ್ತಿರುವ ಪಕ್ಷ ಎಂದು ಹೇಳುವ ಕಾಂಗ್ರೆಸ್ ಪಕ್ಷದ ನಾಯಕರೇ ಜಿಲ್ಲೆ ಹಾಗೂ ತುರುವೇಕೆರೆಗೆ ಬಂದು ನೋಡಿ ಜೆಡೆಎಸ್ ಪಕ್ಷ ಎಷ್ಟು ಬಲಿಷ್ಟವಾಗಿದೆ. ಜಿಲ್ಲೆಯಲ್ಲಿ ೮ ಸ್ತಾನಗಳನ್ನು ಗೆಲವು ಸಾದಿಸದ್ದ ಪಕ್ಷ ಜೆಡೆಎಸ್. ಈ ಇಡೀ ರಾಜ್ಯದ ಗ್ರಾಮೀಣ ಬಾಗದ ಜನರ ಜನರ ಮನಸ್ಸಿನಲ್ಲಿದೆ. ಪಕ್ಷ ಮುಳಿಗಿಸಲು ಸಿದ್ದರಾಮಯ್ಯನಿಂದಲೂ ಸಾದ್ಯವಿಲ್ಲ ಎಂದು ಸವಾಲು ಹಾಕಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ೩೫ ಸೀಟ್ ಮಾತ್ರ ಬರಲಿವೆ. ಎನ್.ಡಿ.ಎ ಪಕ್ಷ ೧೫೫ ಸ್ಥಾನದಲ್ಲಿ ಗೆಲವು ಸಾದಿಸಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಬದಲ್ಲಿ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಗೆ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಗಾತ್ರದ ಹಾರ ಹಾಕಿ ಅಭಿನಂದಿಸಿದರು. ಜೆಡಿಎಸ್ ಪಕ್ಷದ ಯುವ ಸಮೂಹ ನಿಖಿಲ್ ಜೊತೆ ಸೆಲ್ಪಿ ಪೋಟೋಗಾಗಿ ಮುಗಿ ಬಿದ್ದರು. ೩ ಗಂಟೆಗೆ ಪ್ರಾರಂಬವಾಗಬೇಕಿದ್ದ ಕಾರ್ಯಕ್ರಮ ತಡವಾಗಿದ್ದರಿಂದ ಶಾಸಕ ಎಂ.ಟಿ.ಕೃಷ್ಣಪ್ಪ ಹಾಡು ಹಾಡಿ ಕಾರ್ಯಕರ್ತರನ್ನು ರಂಚಿಸಿದರು.
ವೇದಿಕೆಯಲ್ಲಿ ಸಿ.ಎನ್.ಹಳ್ಳಿ ಶಾಸಕ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ದೊಡ್ಡೇಗೌಡ, ರಾಜ್ಯ ಮುಖಂಡ ತಿಪ್ಪೇಸ್ವಾಮಿ, ತಾಲೂಕು ಮುಖಂಡರಾದ ರಮೇಶ್ ಗೌಡ, ಎ.ಬಿ.ಜಗದೀಶ್, ರಾಜೀವ್, ವೆಂಕಟೇಶ್, ಲೀಲಾವತಿ ಗಿಡ್ಡಯ್ಯ, ಪಿ.ಎಚ್.ಧನಪಾಲ್, ಶಂಕರೇಗೌಡ, ಯಡಗಿಹಳ್ಳಿವಿಶ್ವನಾಥ್, ಚಂದ್ರೇಶ್, ತ್ಯಾಗರಾಜು, ವೆಂಕಾಟಪುರ ಯೋಗೀಶ್, ವಿಜಯಕುಮಾರ್, ಬಸವರಾಜು, ರಾಘು ಸೇರಿದಂತೆ ಮುಖಂಡರು ಅಪಾರ ಕಾರ್ಯಕರ್ತರು ಇದ್ದರು.
೧೯ಪೋಟೋ ಶರ್ಷಿಕೆ ೦೧ ಪಟ್ಟಣದ ಚೌದ್ರಿ ಕನ್ವೇಷನ್ ಹಾಲ್ ನಲ್ಲಿ ತಾಲೂಕು ಜೆಡೆಎಸ್ ಪಕ್ಷದಿಂದ ಆಯೋಜಿಸಿದ್ದ ಜನರೊಂದಿಗೆ ಜನತಾಧಳ ಹಾಗೂ ಸದಸ್ಯತ್ವ ನೊಂದಣಿ ಹಾಗೂ ಕಾರ್ಯಕರ್ತರ ಸಭೆಯನ್ನು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಉದ್ಗಾಟಿಸಿದರು.
(Visited 1 times, 1 visits today)