BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ
  • ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್
  • ತಪ್ಪು ಮಾಹಿತಿ ನಮೂದು ಮರು ಸಮೀಕ್ಷೆಗೆ ಆಗ್ರಹ
  • ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ
  • ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು
  • ‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’
  • ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ
  • ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್
ಇತರೆ ಸುದ್ಧಿಗಳು

ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್

ಭ್ರಷ್ಟಾಚಾರ ರಹಿತ ಚುನಾವಣೆ: ಜೆಡಿಯು ಅಭ್ಯರ್ಥಿ ಡಾ.ನಾಗರಾಜ್ ವಿಶ್ವಾಸ
By News Desk BenkiyabaleUpdated:October 06, 2025 3:06 pm

ತುಮಕೂರು: ಇಂದಿನ ರಾಜಕೀಯ, ಆಡಳಿತ ವ್ಯವಸ್ಥೆ ಸರಿಯಿದೆಯೆ? ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ.ವ್ಯವಸ್ಥೆ ಸುಧಾರಣೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು.ಜೆಡಿಯು ಅಭ್ಯರ್ಥಿಯೊಂದಿಗೆ ಈ ಬಾರಿಯ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಭ್ರಷ್ಟಾಚಾರ ರಹಿತವಾಗೇ ನಡೆಸುತ್ತೇವೆ ಎಂದು ಮಾಜಿ ಶಾಸಕ, ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕೆ. ನಾಗರಾಜು ಅವರು ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯುನ ಅಧಿಕೃತ ಅಭ್ಯರ್ಥಿ. ಇವರು ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಪಾರದರ್ಶಕವಾದ ಮಾದರಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಎನ್‌ಡಿಎ ಜೊತೆಜೆಡಿಯು ಮೈತ್ರಿ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಿಮಾ ಪಟೇಲ್, ಮೈತ್ರಿ ಇಲ್ಲ, ಅವರ ಬೆಂಬಲ ಕೋರುತ್ತೇವೆ, ಕೊಟ್ಟರೆ ಬೆಂಬಲ ಪಡೆಯುತ್ತೇವೆ. ಇಲ್ಲವಾದರೆ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತದೆ ಎಂದರು. ಈಗಿನ ಚುನಾ ವಣೆ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಬೇಸರವಾಗಿದೆ. ಆ ದರೆ ಸರಿಮಾಡುವವರು ಯಾರು? ನಾವೆಲ್ಲರೂ ಸರಿಮಾಡಬೇಕು.ಮಾಡಬೇಕು ಎಂಬ ಆಲೋಚನೆ ಮಾಡಿ ಮುಂದುವರೆದರೆ ಸಾಧ್ಯವಾಗುತ್ತದೆ. ನಮಗೆ ಎಂತಹ ಭವಿಷ್ಯ ಬೇಕು ಎಂದು ನಾವು ಚಿಂತನೆ ಮಾಡದೆ ಇನ್ಯಾರು ಮಾಡಬೇಕು? ಪ್ರಸ್ತುತರೀತಿಯ ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಎಲ್ಲರಲ್ಲಿಯೂ ಆಲೋಚನೆ ಬರಬೇಕುಎಂದುಆಶಿಸಿದರು.
ನಮ್ಮತ0ದೆ ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್.ಪಟೇಲ್ ಅವರ ಜನ್ಮದಿನ ಅಕ್ಟೋಬರ ೧, ಮೃತಪಟ್ಟ ದಿನ ಡಿಸೆಂಬರ್ ೧೨. ಹೀಗಾಗಿ ಜನ್ಮದಿನ ಆಚರಣೆ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಈ ತಿಂಗಳ ೧೨ರಂದು ನಗರದ ಕನ್ನಡ ಭವನದಲ್ಲಿ ಚಿಂತನ-ಮAಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರೆ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ವಿವಿಧ ಕ್ಷೇತ್ರಗಳ ಸಾಧಕರು, ರಾಜಕೀಯ ನಾಯಕರು ಭಾಗವಹಿಸುವರು. ವ್ಯವಸ್ಥೆ ಸುಧಾರಣೆಗೆ ತಾವೇನು ಕೊಡುಗೆ ಕೊಡುತ್ತೇವೆ ಎನ್ನುವ ಬಗ್ಗೆ ಅತಿಥಿಗಳು ಮಾತನಾಡುವರು ಎಂದು ಮಹಿಮಾ ಪಟೇಲ್ ಹೇಳಿದರು.
ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಮಾತನಾಡಿ, ಈಗಾಗಲೇ ಸಾಕಷ್ಟು ಬಾರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದೇವೆ. ಯಾವುದೇ ಪಕ್ಷದ ಬೆಂಬಲದ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮತದಾರರ ನೋಂದಣಿ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿದ್ದೇವೆ. ಹಿಂದಿನ ಚುನಾವ ಣೆಗಳಲ್ಲಿ ಮತ ಚಲಾಯಿಸಿರುವ ಪದವಿಧರ ಮತದಾರರೂ ಈ ಬಾರಿಯೂ ಮತ್ತೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು.ಅದಕ್ಕಾಗಿ ಕ್ಷೇತ್ರದಾದ್ಯಂತ ಪ್ರಚಾರ ಮಾಡಿ ನೋಂದಣಿ ಮಾಡಿಸಲು ಪದವಿಧರರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದ ಅವರು, ಈ ಬಾರಿ ಕ್ಷೇತ್ರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತದಾರರನ್ನು ನೋಂದಾವಣೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ಬೇಕಾಗಿರುವ ದಾಖಲಾತಿ, ನೋಂದಣಿ ಪ್ರಕ್ರಿಯೆ ಬಗ್ಗೆ ಕ್ಷೇತ್ರದೆಲ್ಲೆಡೆ ಅರಿವು, ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪಡೆದವರು ನಮೂನೆ ೧೮ರ ಅರ್ಜಿ ಭರ್ತಿ ಮಾಡಿ, ಚುನಾವಣೆ ಗುರುತಿನ ಚೀಟಿ, ಆಧಾರ್‌ಕಾರ್ಡ್, ಪದವಿ ಪ್ರಮಾಣ ಪತ್ರದೊಂದಿಗೆಆಯಾ ತಾಲ್ಲೂಕಿನ ಚುನಾವಣಾ ಶಾಖೆಗೆ ನೀಡಿ ಮತದಾರರ ಪಟ್ಟಿಯಲ್ಲಿ ನೋಂದಾಗಿಸಿಕೊಳ್ಳಲು ಡಾ.ನಾಗರಾಜುಕೋರಿದರು.
ಜೆಡಿಯುರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್.ರಂಗನಾಥ್, ಹೆಚ್.ಸಿ.ಸುರೇಶ್, ಯುವಘಟಕ ಕಾರ್ಯಾಧ್ಯಕ್ಷ ಡಿ.ಜೆ.ಪ್ರಭು, ವಕ್ತಾರ ಮೋಹನ್, ನಗರಅಧ್ಯಕ್ಷ ಪರಮೇಶ್ ಸಿಂಧಗಿ, ಮುಖಂಡರಾದ ಮಂಜುನಾಥ್, ಮೈನಾವತಿ, ಶಾಂತಕುಮಾರಿ ಮೊದಲಾದವರು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿ ನಂತರ ಮಹಿಮಾ ಪಟೇಲ್‌ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಡಾ. ತಿಪ್ಪೇಸ್ವಾಮಿಯವರನ್ನು ಭೇಟಿ ಮಾಡಿ, ಈ ಬಾರಿಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಿದರು.ಮತದಾರರ ಪಟ್ಟಿಗೆ ನೋಂದಣಿ ಪ್ರಕ್ರಿಯೆಯಲ್ಲಿ ಪದವಿಧರರಿಗೆ ಸ್ಪಂದಿಸಲು ಸಂಬ0ಧಿಸಿದವರಿಗೆ ಸೂಚನೆ ನೀಡುವಂತೆಕೋರಿದರು. ಈ ವೇಳೆ ಜೆಡಿಯು ಅಭ್ಯರ್ಥಿ ಡಾ.ನಾಗರಾಜು ಹಾಗೂ ಮುಖಂಡರು ಹಾಜರಿದ್ದರು.

(Visited 1 times, 1 visits today)
Previous Articleತಪ್ಪು ಮಾಹಿತಿ ನಮೂದು ಮರು ಸಮೀಕ್ಷೆಗೆ ಆಗ್ರಹ
Next Article ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ
News Desk Benkiyabale

Related Posts

ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ

October 06, 2025 3:19 pm ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm ಇತರೆ ಸುದ್ಧಿಗಳು

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ

October 06, 2025 3:19 pm
ಇತರೆ ಸುದ್ಧಿಗಳು

ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್

October 06, 2025 3:06 pm
ತುಮಕೂರು

ತಪ್ಪು ಮಾಹಿತಿ ನಮೂದು ಮರು ಸಮೀಕ್ಷೆಗೆ ಆಗ್ರಹ

October 06, 2025 3:04 pm
ಇತರೆ ಸುದ್ಧಿಗಳು

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm
ಇತರೆ ಸುದ್ಧಿಗಳು

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm
ಇತರೆ ಸುದ್ಧಿಗಳು

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm
Our Youtube Channel
Our Picks

ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ

October 06, 2025 3:19 pm

ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್

October 06, 2025 3:06 pm

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm

ನಾವು ಮಾಡುವ ಸೇವೆ ನಿಸ್ವಾರ್ಥತೆಯಿಂದ ಕೂಡಿರಬೇಕು

September 26, 2025 3:29 pm

‘ಯುವ ಕಾಂಗ್ರೆಸ್ ಮುಖಂಡರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ’

September 26, 2025 3:27 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಅಕ್ಟೋಬರ್ ೧೨ ರಂದು ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣ

By News Desk BenkiyabaleOctober 06, 2025 3:19 pm

ತುಮಕೂರು: ಜೆಡಿಯು ಪಕ್ಷದ ವತಿಯಿಂದ ನಗರದಲ್ಲಿ ಅಕ್ಟೋಬರ್ ೧೨ ರಂದು ನಡೆಯುವ ರಾಷ್ಟçಪಿತ ಮಹಾತ್ಮಗಾಂಧಿ,ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಹಾಗೂ ಜೆಡಿಯು…

ವ್ಯವಸ್ಥೆಯ ಸುಧಾರಣೆ ಎಲ್ಲರ ಹೊಣೆ: ಮಹಿಮಾ ಪಟೇಲ್

October 06, 2025 3:06 pm

ತಪ್ಪು ಮಾಹಿತಿ ನಮೂದು ಮರು ಸಮೀಕ್ಷೆಗೆ ಆಗ್ರಹ

October 06, 2025 3:04 pm

ಗಣೇಶೋತ್ಸವ ಮಂಡಳಿಗಳಿಗೆ ದಸರಾ ಸಮಿತಿ ಗೌರವಾರ್ಪಣೆ

September 26, 2025 3:30 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.