
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು ಮೂರು ದಿನಗಳ ಕಾಲ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದಲ್ಲಿ ಹತ್ತು ಹಲವು ವಿಶೇಷತೆಗಳು ಗಮನ ಸೆಳೆದವು ದೇವಿಯ ಉತ್ಸವ ಪ್ರಾರಂಭವಾಗುತ್ತಿದ್ದAತೆಯೇ ಗ್ರಾಮದ ಸುತ್ತ ಗುರ್ಜು ರಥವನ್ನು ಎಳೆದು ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ಗ್ರಾಮಸ್ಥರು ಆರತಿ ಸೇವೆ ಹಾಗೂ ವಿಶೇಷ ಪೂಜೆಗಳನ್ನು ನಡೆಸಿದರು.
ಇದೇ ಸಂದರ್ಭದಲ್ಲಿ ಊರವರೆಗಿನ ಮುತ್ಯಾಲಮ್ಮ, ತೊರೆ ಮಾರಮ್ಮ, ಸಪ್ಲಮ್ಮ, ಮಾವತ್ತೊರಮ್ಮ ಸೇರಿದಂತೆ ಸಪ್ತ ಮಾತೃಕೇಯ ದೇವರುಗಳಿಗೆ ಗ್ರಾಮಸ್ಥರು ಆರತಿ ಸೇವೆ ಪೂಜೆಯನ್ನು ನಡೆಸಿದರು. ಅನೇಕ ಭಕ್ತರು ಮಳೆ ಬೆಳೆಗಾಗಿ ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಅರಕೆಯ ಪೂಜೆಗಳನ್ನು ಸಲ್ಲಿಸಿದರು.
ಜಾತ್ರೆ ಎಂದರೆ ನಾನ್ ವೆಜ್ ಊಟದ ವ್ಯವಸ್ಥೆ ಕಡ್ಡಾಯವಾಗಿರುತ್ತದೆ ಅದೇ ರೀತಿಯಲ್ಲಿ ಚಿಂಪುಗಾನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಗ್ರಾಮಸ್ಥರು ಜಾತ್ರೆಗೆ ಆಗಮಿಸಿದ ನೆಂಟರು, ರಾಜಕೀಯ ಮುಖಂಡರು, ಅಧಿಕಾರಿಗಳು, ಸ್ನೇಹಿತರು, ಬಂಧುಗಳಿಗಾಗಿ ಗ್ರಾಮಸ್ಥರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮರಿಗಳನ್ನ ಒಡೆದು ವಿಶೇಷ ಬಾಡೂಟದ ವ್ಯವಸ್ಥೆಗಳನ್ನು ಮಾಡಿದ್ದರು ಮನೆಯ ಮುಂದೆ ರಸ್ತೆಯ ಹಿಕ್ಕಲಗಳಲ್ಲಿ ಶಾಮಿಯಾನ ಹಾಕಿ ಬಾಡೂಟದ ವ್ಯವಸ್ಥೆಯನ್ನು ಮಾಡಿದ್ದು ವಿಶೇಷವಾಗಿತ್ತು.
ಚಿಂಪುಗಾನಹಳ್ಳಿ ಮಾರಮ್ಮ ಗ್ರಾಮದೇವತೆಯ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಬಂಧುಗಳು ನೆಂಟರುಗಳು ಆಗಮಿಸಿದ ಹಿನ್ನೆಲೆಯಲ್ಲಿ ರಸ್ತೆ ತುಂಬಾ ವಾಹನಗಳ ದಟ್ಟಣೆ ಸೇರಿ ನಗರ ಪಟ್ಟಣದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಮೊದಲ ಬಾರಿಗೆ ಹಳ್ಳಿಯಲ್ಲಿ ನಡೆದಿದ್ದು ವಿಶೇಷವಾಗಿತ್ತು ಊಟಕ್ಕಾಗಿ ಆಗಮಿಸಿದ್ದ ಬಂಧುಗಳು ಊರ ಹೊರಗೆ ವಾಹನ ನಿಲ್ಲಿಸಿ ಮನೆಗಳನ್ನು ಹುಡುಕಿ ಹೊಗುತ್ತಿದ್ದ ದೃಶ್ಯ ಕಂಡು ಬಂತು.
ಮೂರು ದಿನಗಳ ಜಾತ್ರೆಯು ಮಾರಮ್ಮ ದೇವಿಯ ಅದ್ದೂರಿ ಮೆರವಣಿಗೆಯೊಂದಿಗೆ ಸಂಪನ್ನಗೊAಡಿತ್ತು ಈ ಸಂದರ್ಭದಲ್ಲಿ ಚಿಂಪುಗಾನಹಳ್ಳಿ ಯುವ ಮಿತ್ರರಿಂದ ಕುರುಕ್ಷೇತ್ರ ಪೌರಾಣಿಕ ಪ್ರದರ್ಶಿಸಲಾಯಿತು. ಊರಿನ ಯಜಮಾನರು, ಕೈವಾಡದವರು, ಗೌಡರುಗಳು, ಸೇರಿದಂತೆ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.

