ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಮದರ್ ಥೆರೆಸಾ ರವರ ಜನ್ಮದಿನಾಚರಣೆಯನ್ನು ಇಂದು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಮೇಣದ ದೀಪವನ್ನು ಹಚ್ಚುವುದರ ಮೂಲಕ ವಿಶೇಷವಾಗಿ ಆಚರಣೆಯನ್ನು ಮಾಡಲಾಯಿತು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್. ಕೆ ನಿಧಿ ಕುಮಾರ್ ಮದರ್ ಥೆರೆಸಾ ರವರು ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಕಲ್ಕತ್ತ ಮಹಾನಗರದಲ್ಲಿ ಜಾತಿ, ಧರ್ಮ ಎಂಬ ತಾರತಮ್ಯ, ಬೇಧ ಭಾವವಿಲ್ಲದೆ ಪ್ಲೇಗ್ ಮತ್ತು ಕುಷ್ಠರೋಗ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಸಮಾಜವನ್ನು ತಮ್ಮ ಸ್ವ-ಹಸ್ತದಿಂದಲೇ ಅವರುಗಳನ್ನು ಶುಶ್ರೂಷೆ ಮಾಡಲು ಮುಂದಾಗಿ, ವಿಶೇಷ ಸೇವೆಯನ್ನು ಅರ್ಪಿಸಿದ ಮಹಾಮಾತೆ ಅವರಾಗಿದ್ದರು, ಅವರ ನಿಸ್ವಾರ್ಥ ಸೇವೆಯನ್ನು ಭಾರತೀಯರಾದ ನಾವುಗಳು ಹೃದಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಸ್ಪöÈಶ್ಯತೆ ಎಂಬ ಘನಘೋರ ಆಚರಣೆಯಿದ್ದಂತಹ ಕಾಲಘಟ್ಟದಲ್ಲಿ ನಮ್ಮ ದೇಶಕ್ಕೆ ಅವರ ಧರ್ಮ ಪ್ರಚಾರಕ್ಕೆಂದು ಆಗಮಿಸಿದ್ದ ಅವರು, ಅದನ್ನು ಬದಿಗೊತ್ತಿ, ದೇಶದಲ್ಲಿ ತಾಂಡವವಾಡುತ್ತಿದ್ದ ಕುಷ್ಠ ರೋಗ ಎಂಬ ಮಹಾಮಾರಿಯ ಜೊತೆ ಹೋರಾಟ ಮಾಡಿ ಸಾವಿರಾರು ಜನರನ್ನು ರಕ್ಷಿಸಿದವರು ಥೆರೆಸಾ, ನಾವುಗಳು ಇತ್ತೀಚಿನ ಆಧುನಿಕ ದಿನದಲ್ಲಿ ಕೋವಿಡ್ ಎಂಬ ಮಹಾಮಾರಿಯನ್ನು ಎದುರಿಸಿದ್ದೆವು, ಈ ಸಂದರ್ಭದಲ್ಲಿ ಕೋವಿಡ್ ರೋಗಕ್ಕೆ ಒಳಗಾದವರನ್ನು ಹೇಗೆ ನೋಡುತ್ತಿದ್ದೆವು ಎಂದು ಎಲ್ಲರ ಕಣ್ಣ ಮುಂದೆ ಇದ್ದೇ ಇದೆ, ಅದಕ್ಕಿಂತ ಘೋರವಾದ ಪರಿಸ್ಥಿತಿಯನ್ನು ಅಂದಿನ ಸಂದರ್ಭದಲ್ಲಿ ಅವರು ಎದುರಿಸಿದ್ದು ಇದೀಗ ಇತಿಹಾಸ ಎಂದು ತಿಳಿಸಿದರು.
ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ.ರವರು ಮಾತನಾಡುತ್ತಾ ಮಾನವೀಯತೆ ಮತ್ತು ಕಾರುಣ್ಯದ ಸಾಕಾರ ಮೂರ್ತಿ. ಮದರ್ ಥೆರೇಸಾ ಅವರು ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯನ್ನು ಸ್ಥಾಪಿಸಿ ಸಮಾಜದಿಂದ ತ್ಯಜಿಸಲ್ಪಟ್ಟ ಅನಾಥರಿಗೆ, ಬಡ ರೋಗಿಗಳಿಗೆ ಹಾಗೂ ದೀನದಲಿತರಿಗೆ ತಾಯಿಯಂತೆ ಆಸರೆಯಾದ ಕರುಣಾಮಯಿ ಅವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗದ ಬದುಕನ್ನು ಗೌರವಿಸಿ ಜಗತ್ತು ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಿದೆ ಮತ್ತು ಭಾರತ ಸರ್ಕಾರ ಅವರ ನಿಸ್ವಾರ್ಥ ಸೇವೆಗೆ ಭಾರತರತ್ನ ನೀಡಿದೆ. ನಾವು ದೊಡ್ಡ ಕಾರ್ಯಗಳನ್ನು ಮಾಡಲಾಗದಿರಬಹುದು ಆದರೆ ಸಣ್ಣ ಕಾರ್ಯಗಳನ್ನು ಅಪಾರ ಪ್ರೀತಿಯಿಂದ ಮಾಡಬಹುದು ಎಂಬ ಅವರ ದಿವ್ಯ ನುಡಿ ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿ ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತನ್ನೇ ಗೆದ್ದ ಜಗನ್ಮಾತೆಗೆ ಪ್ರಣಾಮಗಳು ಎಂದು ಭಾವುಕರಾಗಿ ನುಡಿದರು.
ನಂತರ ಸಂವಿಧಾನ ರಕ್ಷಣಾ ಕ್ರಾಂತಿ ವೇದಿಕೆ ರಾಜ್ಯ ಅಧ್ಯಕ್ಷರ ಪ್ರಕಾಶ್ ಎಚ್. ಪಿ ಮಾತನಾಡುತ್ತ ನಮ್ಮ ದೇಶದಲ್ಲಿ ಗಲ್ಲಿಗೊಂದರAತೆ ಪವಾಡ ಪುರುಷರು ಸಿಗುತ್ತಾರೆ ಆದುದರಿಂದ ಮದರ್ ತೆರೇಸಾ ಅವರ ಪವಾಡಗಳ ಕುರಿತಂತೆ ನನಗೆ ಆಸಕ್ತಿ ಇಲ್ಲ ಆದರೆ ನಮ್ಮ ನಿಮ್ಮಂತಹ ಸಾಮಾನ್ಯ ಮನುಷ್ಯಳಾಗಿ ಸೇವೆಯ ಮೂಲಕ ಏರಿದ ಎತ್ತರ ಸದಾ ಆದರ್ಶನೀಯವಾದುದು. ಕುಷ್ಠ ರೋಗದಿಂದ ಕೊಳೆತು ಸಮಾಜದಿಂದ ಬಹಿಷ್ಕöÈತರಾದ ಜನರನ್ನು ತನ್ನ ಬಾಹುಗಳಲ್ಲಿ ತೆಗೆದು ಕೊಂಡು, ಅವರನ್ನು ಆರೈಕೆ ಮಾಡಿ, ಅವರನ್ನು ರೋಗ ಮುಕ್ತರನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಮಹಾನ್ ಮಾತೆ ಇಂದು ಅವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ, ಆದರೆ ಅವರು ಮಾಡಿರುವ ನಿಸ್ವಾರ್ಥ ಸೇವೆ ಎಷ್ಟೋ ಜನರಿಗೆ ತಿಳಿದಿಲ್ಲ, ಆ ಒಂದು ಮಹತ್ಕಾರ್ಯವನ್ನು ನಾವುಗಳು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆ ರಾಜ್ಯ ಅಧ್ಯಕ್ಷ ಪ್ರಕಾಶ್ ಎಚ್.ಪಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಲ್ಲಸ್ ಅಹ್ಮದ್, ಜಿಲ್ಲಾ ಕಾರ್ಯಾಧ್ಯಕ್ಷ ಕೆಸ್ತೂರು ನರಸಿಂಹಮೂರ್ತಿ, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾ ಅಧ್ಯಕ್ಷ ಮೋಯಿನ್ ಅಹ್ಮದ್, ಸಂವಿಧಾನ ರಕ್ಷಣಾ ಸೇನೆ ವೇದಿಕೆ ಜಿಲ್ಲಾ ಅಧ್ಯಕ್ಷ ಶಂಕರ್ ಸೇರುದಂತೆ ಮುಖಂಡರುಗಳಾದ ಜೆ.ಬಿ.ನೇಶನ್, ಇಮ್ರಾನ್ ಅಹಮದ್, ಶಫಿ ಉಲ್ಲಾ, ಮೂರ್ತಿ, ರಂಗಸ್ವಾಮಿಯ ಕೆ ಎಸ್ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)





