BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡ
  • ಶ್ರೀ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮರ‍್ಷಿ ವಾಲ್ಮೀಕಿ : ಕೋಟಗುಡ್ಡದಲ್ಲಿ ಅದ್ದೂರಿ ಜಯಂತಿ ಆಚರಣೆ
  • ವಿಜೃಂಭಣೆಯಿಂದ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ
  • ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ
  • ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದು ಸಂವಿಧಾನಕ್ಕೆ ಮಾಡಿದಂತ ಅಪಚಾರ: ಕೃಷ್ಣಸ್ವಾಮಿ ಆಕ್ರೋಶ
  • ಅ.೨೪, ೨೫ರಂದು ಜಿಲ್ಲಾ ಯುವಜನೋತ್ಸವ
  • ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರಿನ ಹೊನ್ನೇನಹಳ್ಳಿಯಲ್ಲಿ ವಿಜಯನಗರಕ್ಕೆ ಸೇರಿದ ಶಾಸನ ಪತ್ತೆ
Trending

ತುಮಕೂರಿನ ಹೊನ್ನೇನಹಳ್ಳಿಯಲ್ಲಿ ವಿಜಯನಗರಕ್ಕೆ ಸೇರಿದ ಶಾಸನ ಪತ್ತೆ

By News Desk BenkiyabaleUpdated:February 26, 2021 7:35 pm

ತುಮಕೂರು:

     ತುಮಕೂರು ನಗರಕ್ಕೆ ಸಮೀಪದ ಹೊನ್ನೇನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೃಷ್ಣದೇವರಾಯ ಕಾಲಮಾನವಾದ ನಿಖರವಾದ ದಿನಾಂಕವನ್ನು ಸ್ಪಷ್ಟಪಡಿಸುವ ಶಾಸನವೊಂದು ಪತ್ತೆಯಾಗಿದೆ.

       ಕ್ರಿಸ್ತಶಕ 1336ರಲ್ಲಿ ಹಕ್ಕ,ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ ನಿಖರತೆ ಇದುವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ.ಹೊನ್ನೇನಹಳ್ಳಿಯಲ್ಲಿ ದೊರೆತ್ತಿರುವ ಈ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ ಕ್ರಿಸ್ತಶಕ 1529ರ ಅಕ್ಟೋಬರ್ 17 ರಂದು ಶ್ರೀಕೃಷದೇವರಾಯರು ಆಸ್ತಮರಾಗಿರುತ್ತಾರೆ ಎಂದು ನಮೂದಿಸಿದ್ದು,ಈ ಸಂಬಂಧ ತುಮಕೂರು ಸೀಮೆಯ ತಿಮ್ಮಣ್ಣ ನಾಯಕರಿಗೆ ತುಮಕೂರು ವೀರಪ್ರಸನ್ನ ಹನುಮಂತ ದೇವರ ಪೂಜೆಗಾಗಿ ಧಾರೆ ಎರೆದು ಕೊಟ್ಟಿರುವುದಾಗಿದೆ.

       15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿರುವ ಅಂಶವೆನೆಂದರೆ, ಶುಭಮಸ್ತು, ಸ್ವಸ್ತಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರುಷ 1452ನೇ ವಿರೋಧಿ ಸಂವತ್ಸರದ ಕಾರ್ತೀಕ ಶು 15ಲೂ ಶ್ರೀ ಶ್ರೀ ಶ್ರೀಮಂನ್ಮಹಾರಾಜಾಧಿರಾಜ, ರಾಜಪರಮೇಶ್ವರ ಶ್ರೀವೀರಪ್ರತಾಪ ಶ್ರೀ ವೀರಕೃಷ್ಣ ಮಹಾರಾಯರು ಯೀ ತಥಾ ತಿಥಿಯಲು ಅಸ್ತಮಯರಾಗಿ(ರ)ಲಾಗಿ, ಪೆನುಗುಂಡೆ ರಾಜ್ಯದ ಆನೆಬಿದ್ದಸರಿಯಸ್ತಳದ ಮರುಗಲು ನಾಡೊಳಗಣ ತುಮಕೂರು ಸೀಮೆಯಳಗಣ ಹೊಂನೇನಹಳ್ಳಿ ಗ್ರಾಮವನ್ನು ತುಮಕೂರು ಸೀಮೆ ಗೌಡ ಪ್ರಜೆಗಳು(ತಿಮ್ಮಣ್ಣ) ನಾಯಕರೂ, ಅವರ ಕಾರ್ಯಕೆ ಕರ್ತರಾದ ತುಮಕೂರು ವೀರ ಪ್ರಸಂನ ಹನುಮಂತವರ ಪೂಜೆಗೆ ಧಾರೆ ಎರೆದು ಎಂಬುದಾಗಿದೆ.15 ಸಾಲುಗಳಲ್ಲಿ 12 ಸಾಲುಗಳು ಮಾತ್ರ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಉಳಿದ ಮೂರು ಸಾಲುಗಳು ಭೂಮಿಯಲ್ಲಿ ಹೂತು ಹೋಗಿದ್ದು, ಹೊರೆ ತೆಗೆದು ಓದಬೇಕಾಗಿದೆ.

      ಶಾಸನದ ಮೇಲ್ಬಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು ಚಿತ್ರವಿದ್ದು,ಸೂರ್ಯ ಚಂದ್ರರ ಗುರುತುಗಳು ಇವೆ.ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದ್ದು, ಬಾಲದಲ್ಲಿ ಗಂಟೆಯಿದೆ. ಇದುವರೆಗಿನ ವಿಜಯನಗರ ಇತಿಹಾಸವನ್ನು ಕೆದಕಿದಾಗ ಶ್ರೀಕೃಷ್ಣದೇವರಾಯ ಮರಣ ಕಾಲವನ್ನು 1529ರ ಅಕ್ಟೋಬರ್ ಅಥವಾ ನವೆಂಬರ್ ಎಂದು ಅಂದಾಜಿಸಲಾಗಿತ್ತು.ತುಮಕೂರು ನಗರ ಸಮೀಪದ ಹೊನ್ನೇನಹಳ್ಳಿಯ ಶಾಸಕ ಶ್ರೀಕೃಷ್ಣದೇವರಾಯ ಕಾಲವಾದ ದಿನವನ್ನು 1529 ಅಕ್ಟೋಬರ್ 17 ರಂದು ಸ್ಪಷ್ಟಪಡಿಸಿದಂತಾಗುತ್ತದೆ.  

      ಈ ಕುರಿತು ಮಾತನಾಡಿದ ಹಿರಿಯ ಇತಿಹಾಸ ವಿದ್ವಾಂಸ ಡಾ.ಕೆ.ಆರ್.ನರಸಿಂಹನ್,ಬಿ.ಎಂ.ಟಿ.ಸಿಯಲ್ಲಿ ವೃತ್ತಿಯಲ್ಲಿ ಚಾಲಕರಾಗಿರುವ ಕೆ.ಧನಪಾಲ್ ಎಂಬುವವರಿಂದ ನನಗೆ ಈ ಶಾಸನ ಇರುವ ಬಗ್ಗೆ ಮಾಹಿತಿ ದೊರೆತ್ತಿದ್ದು, ಕಳೆದ ಒಂದು ವಾರದಿಂದ ಅದನ್ನು ಅಧ್ಯಯನ ಮಾಡಿದಾಗ ಮೇಲಿನ ಅಂಶ ಕಂಡುಬಂದಿದೆ.ಶಾಸನ ಸುಸ್ಥಿತಿಯಲ್ಲಿದೆ.ಹನುಮಂತ ದೇವರ ಚಿತ್ರವಿರುವ ಕಾರಣ, ಬಯಲು ಹನುಮಂತರಾಯ ಎಂಬ ಹೆಸರಿನಲ್ಲಿ ಈ ಶಾಸನಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಇದು ಕ್ರಿಸ್ತಶಕ 1450ರ ಅಸುಪಾಸಿನಲ್ಲಿ ನಿರ್ಮಾಣಗೊಂಡಿರುವ ಗೋಪಾಲ ಕೃಷ್ಣ,ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿದೆ.ಇದರ ಮೇಲೆ ಹೆಚ್ಚಿನ ಅಧ್ಯಯನಗಳು ನಡೆದರೆ,ವಿಜಯನಗರದ ಅರಸರ ಕುರಿತ ಇನಷ್ಟು ನಿಖರ ಮಾಹಿತಿ ದೊರೆಯಬಹುದಾಗಿದೆ ಎಂದರು.

      ಬಿ.ಎಂ.ಟಿ.ಸಿ ಚಾಲಕರಾದ ಕೆ.ಧನಪಾಲ್ ಮಾತನಾಡಿ, ನನಗೆ ಶಾಸನಗಳು,ಗಣ್ಯರ ಸಮಾಧಿಗಳನ್ನು ವೀಕ್ಷಿಸುವುದು ಹವ್ಯಾಸ. ಕಳೆದ ಒಂದು ವರ್ಷದ ಹಿಂದೆ ತುಮಕೂರಿನ ಹೊನ್ನೇನಹಳ್ಳಿಯಲ್ಲಿ ಹಿರಿಯ ನಟಿ ದಿವಂಗತ ಮಂಜುಳ ಅವರ ಸಮಾಧಿ ವೀಕ್ಷಿಸಲು ಬಂದಾಗ ಗ್ರಾಮದ ಹಿರಿಯರಾದ ಪರಮೇಶ್ ಎಂಬುವವರು ಈ ಶಾಸನದ ಬಗ್ಗೆ ತಿಳಿಸಿದ್ದರು. ಆದರೆ ಕೋರೋನದಿಂದ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಈಗ ಡಾ.ಆರ್.ಕೆ.ನರಸಿಂಹನ್ ಅವರನ್ನು ಕರೆತಂದು ಅದನ್ನು ಓದಿ, ಜನತೆ ತಿಳಿಸಲು ಶ್ರಮವಹಿಸಿದ್ದೇನೆ ಎಂದರು.

(Visited 13 times, 1 visits today)
Previous Articleಆರ್.ಟಿ.ಇ. ಕಾಯ್ದೆಯಡಿ ದಾಖಲಾದ ಮಕ್ಕಳನ್ನು ಬೇಧ-ಭಾವದಿಂದ ಕಾಣುತ್ತಿರುವುದು ಆತಂಕಕಾರಿ
Next Article ಎಲ್ಲಾ ಶಾಲೆ-ಅಂಗನವಾಡಿ ಕೇಂದ್ರಗಳಿಗೆ ಕಡ್ಡಾಯ ಕುಡಿಯುವ ನೀರಿನ ವ್ಯವಸ್ಥೆಗೆ ಸೂಚನೆ
News Desk Benkiyabale

Related Posts

October 10, 2025 1:18 pm ತುಮಕೂರು

ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದು ಸಂವಿಧಾನಕ್ಕೆ ಮಾಡಿದಂತ ಅಪಚಾರ: ಕೃಷ್ಣಸ್ವಾಮಿ ಆಕ್ರೋಶ

October 10, 2025 1:15 pm ತುಮಕೂರು

ಅ.೨೪, ೨೫ರಂದು ಜಿಲ್ಲಾ ಯುವಜನೋತ್ಸವ

October 10, 2025 1:13 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡ

October 13, 2025 3:11 pm
ಇತರೆ ಸುದ್ಧಿಗಳು

ಶ್ರೀ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮರ‍್ಷಿ ವಾಲ್ಮೀಕಿ : ಕೋಟಗುಡ್ಡದಲ್ಲಿ ಅದ್ದೂರಿ ಜಯಂತಿ ಆಚರಣೆ

October 13, 2025 2:56 pm
ಇತರೆ ಸುದ್ಧಿಗಳು

ವಿಜೃಂಭಣೆಯಿಂದ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ

October 13, 2025 2:47 pm
ಇತರೆ ಸುದ್ಧಿಗಳು

ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ

October 13, 2025 2:36 pm
ತುಮಕೂರು

October 10, 2025 1:18 pm
ತುಮಕೂರು

ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದು ಸಂವಿಧಾನಕ್ಕೆ ಮಾಡಿದಂತ ಅಪಚಾರ: ಕೃಷ್ಣಸ್ವಾಮಿ ಆಕ್ರೋಶ

October 10, 2025 1:15 pm
Our Youtube Channel
Our Picks

ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡ

October 13, 2025 3:11 pm

ಶ್ರೀ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮರ‍್ಷಿ ವಾಲ್ಮೀಕಿ : ಕೋಟಗುಡ್ಡದಲ್ಲಿ ಅದ್ದೂರಿ ಜಯಂತಿ ಆಚರಣೆ

October 13, 2025 2:56 pm

ವಿಜೃಂಭಣೆಯಿಂದ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ

October 13, 2025 2:47 pm

ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ

October 13, 2025 2:36 pm

ನಗರದಲ್ಲಿ ಇಂದಿನಿ0ದ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ: ಹೆಚ್.ಡಿ.ಕುಮಾರ್

October 09, 2025 3:44 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡ

By News Desk BenkiyabaleOctober 13, 2025 3:11 pm

ಚಿಕ್ಕನಾಯಕನಹಳ್ಳಿ: ಕಳಪೆ ಕಾಮಗಾರಿಯಡಿ ಅರೆಬರೆ ಕಟ್ಟಿದ ಸರ್ಕಾರಿ ಶಾಲಾ ಕಟ್ಟಡವನ್ನು ಕೆಆರ್‌ಎಸ್‌ಪಕ್ಷದ ಹೋರಾಟದ ಫಲವೆಂಬ0ತೆ ಜೆಸಿಬಿ ಮೂಲಕ ಕಟ್ಟಡವನ್ನು ಕೆಡವಿ…

ಶ್ರೀ ರಾಮನನ್ನು ಜಗತ್ತಿಗೆ ಪರಿಚಯಿಸಿದ ಮರ‍್ಷಿ ವಾಲ್ಮೀಕಿ : ಕೋಟಗುಡ್ಡದಲ್ಲಿ ಅದ್ದೂರಿ ಜಯಂತಿ ಆಚರಣೆ

October 13, 2025 2:56 pm

ವಿಜೃಂಭಣೆಯಿಂದ ನಡೆದ ಶ್ರೀ ಮರ‍್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ

October 13, 2025 2:47 pm

ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ

October 13, 2025 2:36 pm
News by Date
October 2025
M T W T F S S
 12345
6789101112
13141516171819
20212223242526
2728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.