BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ
  • ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ
  • ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ
  • ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?
  • ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ
  • ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ
  • ನ್ಯಾಯಾಲಯ ಕಲಾಪದಿಂದ ಹೊರಗುಳಿದ ವಕೀಲರು
  • ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಿಲ್ಲೆ ಪೌರಾಣಿಕ ನಾಟಕಗಳ ತವರೂರು: ಶಿವಾನಂದಶ್ರೀ
ತುಮಕೂರು ಜಿಲ್ಲಾ ಸುದ್ಧಿಗಳು

ಜಿಲ್ಲೆ ಪೌರಾಣಿಕ ನಾಟಕಗಳ ತವರೂರು: ಶಿವಾನಂದಶ್ರೀ

By News Desk BenkiyabaleUpdated:December 20, 2018 5:22 pm

 ತುಮಕೂರು:

      ಪೌರಾಣಿಕ ನಾಟಕಗಳ ತವರೂರಾಗಿರುವ ತುಮಕೂರು ಜಿಲ್ಲೆಯಲ್ಲಿ ಕಲಾವಿದರಿಗೆ ಜನರು ಗೌರವ ನೀಡುತ್ತಾರೆ, ಸುದೀರ್ಘವಾಗಿ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

      ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮಜಯಂತಿ ಅಂಗವಾಗಿ ಕೋಟೇ ಆಂಜನೇಯಸ್ವಾಮಿ ಸೇವಾ ಸಮಿತಿ, ಕೆಂಪೇಗೌಡ ಕಲಾಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕದಲ್ಲಿ ಹಿರಿಯ ಕಲಾವಿದ ್ಲ ಕೆ.ಎಚ್.ನಾಗರಾಜ್ À ಪತ್ನಿ ಹೇಮಾವತಿ, ಅವರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡಿ ಅವರು ಮಾತನಾಡಿದರು.

      ಕಲಾವಿದರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡುವುದೆಂದರೆ, ಗೌರವ ಡಾಕ್ಟರೇಟ್ ಪಡೆದಂತೆ, ಗೌರವ ಡಾಕ್ಟರೇಟ್ ಪಡೆಯಲು ಲಾಬಿ ನಡೆಸಬೇಕು ಆದರೆ, ನಾಟಕಗಳಲ್ಲಿ ಅವರು ಪೋಷಿಸಿರುವ ಪಾತ್ರಗಳು ಹಾಗೂ ಅವರ ಸುಧೀರ್ಘ ಸೇವೆಯನ್ನು ಗುರುತಿಸಿ, ಕಲಾವಿದರೆ ನೀಡುವ ಬೆಳ್ಳಿ ಕಿರೀಟ, ಗೌರವ ಡಾಕ್ಟರೇಟ್‍ಗೆ ಸಮವಾಗಿದೆ. ಪ್ರವೃತಿಯಲ್ಲಿ ರಂಗಭೂಮಿ ಸೇವೆಯನ್ನು ಸಲ್ಲಿಸಿರುವ ಕೆ.ಎಚ್.ನಾಗರಾಜ್ ಅವರ ಸೇವೆ ಗುರುತಿಸಿ ಬೆಳ್ಳಿಕಿರೀಟ ಪ್ರದಾನ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

      ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ಇತಿಹಾಸವಿದ್ದು, ಪೌರಾಣಿಕ ನಾಟಕಗಳು ಪ್ರವೃತ್ತಿಯಾಗಿ ಬೆಳೆದಿದೆ, ಪ್ರತಿ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಾಗಿದೆ. ರಾಮಾಯಣ, ಮಹಾಭಾರತದ ದೇಶದ ಸಂಪನ್ಮೂಲ, ದೇಶವನ್ನು ಸುತ್ತಿ ಕೋಶವನ್ನು ಓದುವ ಬದಲಾಗಿ, ರಾಮಾಯಣ, ಮಹಾಭಾರತವನ್ನು ಓದಿದರೆ ಸಾಕು ಎಂದು ಹೇಳಿದರು.

      ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ಎಲ್ಲೆಡೆ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ನಾಗರಾಜು ಅವರ ಕಲಾಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸ ಎಂದ ಅವರು, ಪುರಾತನ ಇತಿಹಾಸವಿರು ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಮುಂದುವರೆಸಬೇಕಾದ ಜವಾಬ್ದಾರಿ ಯುವ ಜನರ ಮೇಲಿದೆ, ನಾಟಕ ಜೀವಂತ ಕಲೆ ಎಂದು ಅಭಿಪ್ರಾಯಪಟ್ಟರು.

      ಬೆಳ್ಳಿಕಿರೀಟ ಸ್ವೀಕರಿಸಿ ಮಾತನಾಡಿದ ಕೆ.ಎಚ್.ನಾಗರಾಜು ಅವರು, ಧಾರವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ಮೋಜಿನಲ್ಲಿ ಯುವ ಜನರು ಸಾಂಪ್ರದಾಯಿಕ ಕಲೆಗಳನ್ನು ಕಡೆಗಣನೆ ಮಾಡುತ್ತಿದ್ದು, ಪೌರಾಣಿಕ ನಾಟಕಗಳನ್ನು ಕಲೆ ಪ್ರೋತ್ಸಾಹಿಸುವ ಮೂಲಕ ಬೆಳೆಸಬೇಕಾದ ಹೊಣೆಗಾರಿಕೆ ಯುವ ಜನರ ಮೇಲಿದೆ ಎಂದರು.

      ಕೋಟೆ ಆಂಜನೇಯಸ್ವಾಮಿ ಸೇವ ಸಮಿತಿ ಅಧ್ಯಕ್ಷ ಸಿವಿ ಮಹಾದೇವಯ್ಯ ಮಾತನಾಡಿ, ಜಿಲ್ಲೆಗೆ ಪೌರಾಣಿಕ ನಾಟಕಗಳ ಇತಿಹಾಸವಿದೆ, ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ ಗುಬ್ಬಿ ವೀರಣ್ಣ, ಹಿರಣಯ್ಯ, ಬೆಳ್ಳಾವೆ ನರಹರಿಶಾಸ್ತ್ರಿ ಅವರಂತ ಘಟಾನುಘಟಿ ದಿಗ್ಗಜರು ಜಿಲ್ಲೆಯ ರಂಗಭೂಮಿ ಚರಿತ್ರೆಯನ್ನು ಬೆಳೆಸಿದವರು ಎಂದು ಹೇಳಿದರು.

      ಕಾರ್ಯಕ್ರಮದಲಿ ಕೆಂಪೇಗೌಡ ಕಲಾಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಿ.ಶಿವಮಹದೇವಯ್ಯ, ಪಾಲಿಕೆ ಸದಸ್ಯ ಟಿ.ಎಂ.ಮಹೇಶ್, ತು.ಬಿ.ಮಲ್ಲೇಶ್, ಯೋಗಾನಂದ್, ಸಂಗೀತ ನಿರ್ದೇಶಕ ತಿಮ್ಮಗಿರಿ ಗೌಡಯ್ಯ, ಡಿ.ಕಲ್ಕೆರೆ ನರಸಿಂಹಮೂರ್ತಿ, ಮಲ್ಲಿಕಣ್ಣ, ರಂಗಪ್ಪ, ನಂಜಪ್ಪಶೆಟ್ಟಿ, ಎಂ.ವಿ.ನಾಗಣ್ಣ, ಮೋಹನ್, ರಾಮಣ್ಣ ಇತರರು ಉಪಸ್ಥಿತರಿದ್ದರು.

(Visited 63 times, 1 visits today)
Previous Articleಗದ್ದುಗೆಯಿಂದ ಮೋದಿ ಸರ್ಕಾರವನ್ನು ಉರುಳಿಸಿ : ಮಾಜಿ ಸಚಿವ ಟಿ.ಬಿ.ಜಯಚಂದ್ರ
Next Article ವಿದ್ಯಾರ್ಥಿಗಳಿಂದ ವಿಜ್ಞಾನ-ತಂತ್ರಜ್ಞಾನ ಅನಾವರಣ
News Desk Benkiyabale

Related Posts

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm news

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm news

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm news
ತಾಜಾ ಸುದ್ಧಿಗಳು

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm

ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ

July 08, 2026 5:58 pm

ಸರ್ವೆ ನೆಪದಲ್ಲಿ ಬಂದು ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ

July 07, 2026 5:18 pm
Our Youtube Channel
Our Picks

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

July 08, 2026 6:07 pm

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm

ಸಿಲ್ಕು, ಮಿಲ್ಕು ಮಾತ್ರವೇ ಜಿಲ್ಲೆಯ ರೈತರ ಕೈಹಿಡಿಯುವ ಬೆಳೆ: ಉಪ ಮುಖ್ಯಮಂತ್ರಿ

July 08, 2026 5:58 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಂಘಟನೆ ಸಾಗಲಿ

By News Desk BenkiyabaleJuly 08, 2026 6:07 pm

ಶಿರಾ: ರಾಜ್ಯದ ೩,೮೦೦ಕ್ಕೂ ಅಧಿಕ ಸ್ಲಂಗಳಲ್ಲಿ ಸ್ಲಂ ಜನರ ಸಂಘಟನೆಯು ವಿಸ್ತಾರಗೊಳ್ಳಬೇಕು. ಈ ಸಂಘಟನೆಯು ಬುದ್ಧ, ಬಸವ, ಅಂಬೇಡ್ಕರ್ ಅವರ…

ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ: ಆರೋಪಿ ಬಂಧನ

July 08, 2026 6:05 pm

ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಲು ಡಿಹೆಚ್‌ಓ ಮನವಿ

July 08, 2026 6:04 pm

ಸಂಪೂರ್ಣ ದುರಸ್ತಿಗೆ ಇನ್ನೂ ಏಕೀ ಉದಾಸೀನತೆ?

July 08, 2026 5:59 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.