BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು
  • ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ
  • ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ
  • ಜಮೀನುಗಳಿಗೆ ಓಡಾಡಲು ಅಡ್ಡಿ
  • ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ
  • ೩೬,೦೦೦ ಕನಿಷ್ಟ ವೇತನ, ಶಾಸನ ಗಳ ಜಾರಿಗೆ ಒತ್ತಾಯ
  • ಸಾಹೇ ವಿವಿ ಅಂತರ್‌ಕಾಲೇಜು ವಾಲಿಬಾಲ್ ಪಂದ್ಯವಳಿ: ಎಸ್‌ಎಸ್‌ಐಟಿ ತಂಡಕ್ಕೆ ಟ್ರೋಫಿ
  • ಭಕ್ತರು ಕಾಲಬೈರೆವೇಶ್ವರ ಸ್ವಾಮಿಯನ್ನು ಶ್ರದ್ದಾಭಕ್ತಯಿಂದ ಪೂಜಿಸಿದರೆ ಇಷ್ಠಾರ್ಥ ನೆರವೇರುವುದು: ಮಹಾಸ್ವಾಮೀಜಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತ್ಯಾಗ ಮತ್ತು ಸತ್ಯದ ಮನೋಭಾವನೆ ಬೆಳೆಸಿಕೊಳ್ಳಿ
ತುಮಕೂರು

ತ್ಯಾಗ ಮತ್ತು ಸತ್ಯದ ಮನೋಭಾವನೆ ಬೆಳೆಸಿಕೊಳ್ಳಿ

By News Desk BenkiyabaleUpdated:November 15, 2024 6:38 pm

ತುಮಕೂರು; ವಿದ್ಯಾರ್ಥಿಗಳು ತ್ಯಾಗ ಮತ್ತು ಸತ್ಯದ ಮನೋಭಾವನೆ ಬೆಳೆಸಿಕೊಂಡರೆ, ಸಾಧನೆಯ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ನಿವೃತ್ತಿ ಐಜಿಪಿ ಶಂಕರ ಬಿದರಿ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ವಿದ್ಯಾರ್ಥಿ ಸಂಘ, ಸನಿವಾಸ ವಿದ್ಯಾಸಂಸ್ಥೆಗಳು ಹಾಗೂ ಶ್ರೀಸಿದ್ದಗಂಗಾ ಮಠವತಿಯಿಂದ ಅಯೋಜಿಸಿದ್ದ ಹಿರಿಯ ಚಲನಚಿತ್ರನಟ ದೊಡ್ಡಣ್ಣ ಅವರ ಹುಟ್ಟು ಹಬ್ಬ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇಂದು ನೇರವಾದ, ಸತ್ಯದ ಹಾಗೂ ಪ್ರಾಮಾಣಿಕ ಮಾರ್ಗದಲ್ಲಿ ನಡೆಯುವವರ ಸಂಖ್ಯೆ ಕಡಿಮೆಯಾಗಿದೆ.ಪ್ರತಿಯೊಬ್ಬರು ಬೇರೆಯವರಿಂದ ಪ್ರಾಮಾಣಿಕತೆ, ಸತ್ಯ,ನೇರವಾದ ಮಾರ್ಗಗಳನ್ನು ಬಯಸುತ್ತಾರೆ. ಅದು ತಮ್ಮಿಂದಲೇ ಆರಂಭವಾಗಬೇಕು.ಆಗಲೇ ದೇಶದಲ್ಲಿ ಪರಿವರ್ತನೆ ಸಾಧ್ಯ ಎಂದರು.

ನೀವು ಗಳಿಸುವ ಅಂಕಗಳು ಉದ್ಯೋಗ ಪಡೆಯಲು ಮಾತ್ರ.ಉದ್ಯೋಗಕ್ಕೆ ಸೇರಿದ ನಂತರ ನಿಮ್ಮ ಪ್ರಾಮಾಣಿಕತೆ, ಸಹದ್ಯೊಗಿಗಳೊಂದಿಗಿನ ನಡವಳಿಕೆ,ಇತರರ ಕಷ್ಟ,ಸುಖಃಗಳಿಗೆ ಸ್ಪಂದಿಸುವ ಗುಣ ಎಲ್ಲವೂ ನಿಮ್ಮನ್ನು ಮೇಲ್ಮಟ್ಟಕ್ಕೆ ತೆಗೆದು ಕೊಂಡು ಹೋಗುತ್ತದೆ.ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ ಎಲ್ಲಾ ಧರ್ಮ,ಜಾತಿ,ಭಾಷೆಗಳ ಜನರು ಒಗ್ಗೂಡಿ ಭಾರತಾಂಭೆಯ ಮಕ್ಕಳಂತೆ ಬದುಕುಬೇಕಾಗಿದೆ.ಬಸಣ್ಣನವರ ವಚನದಂತೆ ಇವ ನಮ್ಮವ ಎಂದು ಕೊಂಡು ಶಾಂತಿ, ಸೌಹಾರ್ಧತೆಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.ಪರಸ್ವರ ಗೌರವದೊಂದಿಗೆ ಬದುಕು ವಂತಹ ವಾತಾವರಣ ಸೃಷ್ಟಿಯಾಗಬೇಕೆಂದರು.

ಚಿತ್ರನಟ ದೊಡ್ಡಣ್ಣ ಮಾತನಾಡಿ, ಪ್ರತಿವರ್ಷ ನನ್ನ ಹುಟ್ಟು ಹಬ್ಬವನ್ನು ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆಚರಿಸಿಕೊಂಡು ಬರುತ್ತಿದ್ದೇನೆ. ಈ ಬಾರಿಯೂ ಸಿದ್ದಗಂಗಾ ಆಸ್ಪತ್ರೆಯ ಜೊತೆಗೆ, ಶಂಕರ್ ಕಣ್ಣಿನ ಆಸ್ಪತ್ರೆ, ಡಾ.ರಾಜ್‌ಕುಮಾರ ಟ್ರಸ್ಟ್(ರಿ),ಎ.ಮಂಜು ಚಾರಿಟಬಲ್ ಟ್ರಸ್ಟ್,ಮೈಕ್ರೋ ಲ್ಯಾಬ್ ಪ್ರ.ಲಿ, ಎನ್.ಪಿ.ಸಿ.ಬಿ. ಡಿವಿಷ್ಹನ್ ಕರ್ನಾಟಕ, ಡಿ.ಎಸ್.ಸಿ.ಡಿ.ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಕ್ಕಳಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಈ ಮಠದಲ್ಲಿ ಕಲಿಯುತ್ತಿರುವ ನೀವುಗಳೇ ಪುಣ್ಯವಂತರು.ಇಲ್ಲಿ ವಿದ್ಯೆಯ ಜೊತೆಗೆ, ಸಂಸ್ಕಾರ, ಸಂಸ್ಕೃತಿಗಳ ಪರಿಚಯ ಮಕ್ಕಳಿಗೆ ಆಗುತ್ತದೆ.ಸಿದ್ದಗಂಗಾ ಮಠ ರಾಜ್ಯದಲ್ಲಿರುವ ಜಾತ್ಯಾತೀತ ಮಠಗಳಲ್ಲಿ ಒಂದು.ಇಲ್ಲಿ ಎಲ್ಲ ಜಾತಿಯ ಮಕ್ಕಳು ಕಲಿಯುತ್ತಿ ದ್ದಾರೆ.ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ ಇಲ್ಲಿ ನೆಲೆಯೂರಿದೆ, 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನ,ಅಕ್ಷರ, ಆಶ್ರಯ ನೀಡುವ ಮೂಲಕ ಸಿದ್ದಗಂಗಾ ತ್ರಿವಿಧ ದಾಸೋಹ ಕೇಂದ್ರವಾಗಿದೆ ಎಂದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ,ಇಂದು ದೇಶದ ಮೊದಲ ಪ್ರಧಾನಿ ನೆಹರು ಅವರ ಜನ್ಮ ದಿನ. ಅವರ ಕೋರಿಕೆಯಂತಯೇ ನೆಹರು ಅವರು ಹುಟ್ಟಿದ ದಿನವನ್ನು ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.ಅವರು ದೇಶಕ್ಕೆ ನೀಡಿದ ಅನೇಕ ಯೋಜನೆಗಳ ಫಲವಾಗಿ ಭಾರತ ಇಂದು ವಿಶ್ವ ಭೂಪಟದಲ್ಲಿ ರಾರಾಜಿಸುವಂತಾಗಿದೆ.ನೀರಾವರಿ,ಕೃಷಿ ಮತ್ತು ಕೈಗಾರಿಕೆಗಳಿಗೆ ನೀಡಿದ ಕೊಡುಗೆ ಅಪಾರ.ಅವರ ಬಗ್ಗೆ ಮಕ್ಕಳು ಹೆಚ್ಚು ತಿಳಿಯುವಂತಾಗಲಿ ಎಂದರು.

ಹಿರಿಯ ಚಲನಚಿತ್ರ ನಟ ದೊಡ್ಡಣ್ಣ, ಹೆಸರಿಗಷ್ಟೇ ದೊಡ್ಡಣ್ಣನಲ್ಲ.ಹೃದಯ ಶ್ರೀಮಂತಿಕೆ ಹೊಂದಿರುವ ವ್ಯಕ್ತಿ. ತಮ್ಮ ಹುಟ್ಟು ಹಬ್ಬದ ದಿನದಂದು ಶ್ರೀಮಠಕ್ಕೆ ಬಂದು ಮಕ್ಕಳೊಂದಿಗೆ ಕಾಲ ಕಳೆದು, ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಈ ಸೇವೆ ನಿರಂತರವಾಗಿ ಮುಂದುವರೆಯಲಿ, ಇನ್ನೂ ಹತ್ತಾರು ವರ್ಷ ಬಾಳಿ, ಬದುಕಲಿ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಂ.ಪಿ.ಮAಜುನಾಥ್,ಡಾ.ರಾಜಕುಮಾರ್ ಟ್ರಸ್ಟ್ನ ಟ್ರಸ್ಟಿ ಟಿ.ವಾಸನ್, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಶ್ರೀಮತಿ ಮಮತ, ಸಾಗರನಹಳ್ಳಿ ನಟರಾಜು,ಶಂಕರ್ ಕಣ್ಣಿನ ಆಸ್ಪತ್ರೆಯ ಯೂನಿಟ್ ಹೆಡ್ ಲೆ.ಕರ್ನಲ್ ಎಸ್.ಗುರುಪ್ರಸಾದ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷಷ ಎಸ್.ಮಂಜುನಾಥ್ ಭಾಗವಹಿಸಿದ್ದರು.

ಆರೋಗ್ಯ ಶಿಬಿರಕ್ಕೆ ಮೈಕ್ರೋ ಲ್ಯಾಬ್ ಬೆಂಗಳೂರು, ಮೋಹನ್ ಮತ್ತು ಕೋ ಬೆಂಗಳೂರು,ಮಿನೋವ ಲೈಫ್ ಬೆಂಗಳೂರು, ಎಸ್ಸಾರ್ ಫಾರ್ಮ್ ಬೆಂಗಳೂರು, ಬಯೋ ಫಾರ್ಮು ಬೆಂಗಳೂರು ಸೇರಿದಂತೆ ವಿವಿಧ ಔಷಧ ಕಂಪನಿಗಳು ಪ್ರಯೋಜಕತ್ವ ವಹಿಸಿದ್ದವು.

(Visited 1 times, 1 visits today)
ತುಮಕೂರು: ಶಂಕರ ಬಿದರಿ ಶ್ರೀಸಿದ್ದಗಂಗಾ ಮಠ
Previous Articleಅಧ್ಯಯನ ಮಾಡುವಾಗಲೇ ಉದ್ಯಮಿಯಾಗಲು ಗುರಿಯಿಟ್ಟುಕೊಳ್ಳಿ
Next Article ಭಾಷಾ ಕೌಶಲ್ಯ, ಬರವಣಿಗೆ, ಸಂವಹನ ಕಲೆ ವಕೀಲಿ ವೃತ್ತಿಯಲ್ಲಿ ಕೈ ಹಿಡಿಯುತ್ತದೆ
News Desk Benkiyabale

Related Posts

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

December 19, 2025 4:59 pm
ಇತರೆ ಸುದ್ಧಿಗಳು

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm
ಇತರೆ ಸುದ್ಧಿಗಳು

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm
ಇತರೆ ಸುದ್ಧಿಗಳು

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm
ಇತರೆ ಸುದ್ಧಿಗಳು

ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ

December 19, 2025 4:46 pm
ಇತರೆ ಸುದ್ಧಿಗಳು

೩೬,೦೦೦ ಕನಿಷ್ಟ ವೇತನ, ಶಾಸನ ಗಳ ಜಾರಿಗೆ ಒತ್ತಾಯ

December 19, 2025 4:44 pm
Our Youtube Channel
Our Picks

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

December 19, 2025 4:59 pm

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm

ರಾಜಗಾಲುವೆಯಲ್ಲಿನ ಕೆಮಿಕಲ್ ವಾಸನೆ ತಡೆಗೆ ಡಿಸಿ ಸೂಚನೆ

December 19, 2025 4:46 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಹೊಸ ತಂತ್ರಜ್ಞಾನಗಳು ಸುರಕ್ಷಿತವೂ, ನೈತಿಕವು ಆಗಿರಬೇಕು

By News Desk BenkiyabaleDecember 19, 2025 4:59 pm

ತುಮಕೂರು: ತಂತ್ರಜ್ಞಾನವು ಮಾನವೀಯತೆಗೆ ಸೇವೆ ಸಲ್ಲಿಸಿದಾಗ ಮಾತ್ರ ಅದರ ಅತ್ಯುನ್ನತ ಮೌಲ್ಯವನ್ನು ಸಾಧಿಸುತ್ತದೆ. ಹೊಸ ತಂತ್ರಜ್ಞಾನಗಳು ಸುರಕ್ಷಿತವೂ,ನೈತಿಕವು ಆಗಿರಬೇಕು.ಆಗ…

ನಶೆ ಮುಕ್ತ ಕರ್ನಾಟಕ ಅಭಿಯಾನ: ಯುವಕರಿಗೆ ಎಚ್ಚರಿಕೆ ಕರೆ

December 19, 2025 4:57 pm

ಹಾಲಪ್ಪ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆ ಅಭಿಯಾನ

December 19, 2025 4:56 pm

ಜಮೀನುಗಳಿಗೆ ಓಡಾಡಲು ಅಡ್ಡಿ

December 19, 2025 4:48 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.