ತುರುವೇಕೆರೆ: ಜಿಲ್ಲೆಯ ರೈತರಿಗೆ ಮರಣ ಶಾಸನದಂತಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಅವೈಜ್ಞಾನಿಕ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಲಿಂಕ್ ಕೆನಾಲ್ ಕಾಮಗಾರಿಯಿಂದ ಜಿಲ್ಲೆಯ ಏಳೆಂಟು ತಾಲ್ಲೂಕಿಗೆ ದೊಡ್ಡ ಅಪಾಯವಾಗಲಿದೆ. ಕುಣಿಗಲ್ ತಾಲ್ಲೂಕಿಗೆ ನೀರು ಹರಿಸಬೇಕೆಂದರೆ ಮೂಲ ನಾಲೆಯ ಮೂಲಕ ತೆಗೆದುಕೊಂಡು ಹೋಗಲಿ ನಮ್ಮದ್ದು ಯಾವುದೇ ಅಭ್ಯಂತರವೇನಿಲ್ಲ. ಆದರೆ ನೀವು ಲಿಂಕ್ ಕೆನಾಲ್ ಮಾಡಿ ಪೈಪ್ ಗಳನ್ನು ಮೂಲಕ ನೀರನ್ನು ತೆಗೆದುಕೊಂಡು ಹೋದಲ್ಲಿ ಜಿಲ್ಲೆಯ ಏಳೆಂಟು ತಾಲ್ಲೂಕುಗಳಿಗೆ ಮರಣ ಶಾಸನವಾಗಲಿದೆ. ಕೂಡಲೇ ಈ ಕಾಮಗಾರಿಯನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ನಾವುಗಳು ಒತ್ತಾಯ ಮಾಡುತ್ತೇವೆ ಎಂದರು.
ಸುಮಾರು ಒಂದೂವರೆ ವರ್ಷದಿಂದಲೂ ನಾವುಗಳು ಹೋರಾಟವನ್ನು ಮಾಡಿಕೊಂಡು ಬಂದಿದ್ದೇವೆ. ನೀವು ೭೦ನೇ ಕಿ.ಮೀ.ನಲ್ಲಿ ೫೦೦ ಕ್ಯೂಸೆಕ್ಸ್ ನೀರನ್ನು ಕುಣಿಗಲ್ ಭಾಗಕ್ಕೆ ಹರಿಸಿದರೆ ಇನ್ನು ಏಳು ತಾಲ್ಲೂಕಿಗೆ ೬೦೦ ಕ್ಯುಸೆಕ್ಸ್ ನೀರು ಹರಿಸಲಿಕ್ಕೆ ಹೋದಲ್ಲಿ ಬಹಳ ವೇಗವಾಗಿ ಎತ್ತರಕ್ಕೆ ಹರಿಯಲು ಉಪನಾಲೆಗಳಿಗೆ ಅವಕಾಶವಿಲ್ಲದಂತಾಗುತ್ತದೆ. ಸರ್ಕಾರ ಹತ್ತಾರು ಕೋಟಿ ಖರ್ಚು ಮಾಡಿ ಮಾಡಿದಂತ ನಾಲೆಗಳು ಅನುಕೂಲವಿಲ್ಲದಂತಾಗುತ್ತವೆ. ಹಾಗಾಗಿ ಈ ಕಾಮಗಾರಿಯನ್ನು ಕೈಬಿಡಬೇಕು. ಕೆಲವೇ ಮಂದಿ ರಾಜಕಾರಣಿಗಳು ಹಾಗೂ ಗುತ್ತಿಗೆದಾರರಿಗೆ ಅನುಕೂಲ ಮಾಡುವ ಸಲುವಾಗಿ ತೆರಿಗೆಯ ಸಾರ್ವಜನಿಕರ ೧೧೦೦ಕೋಟಿ ಹಣವನ್ನು ವ್ಯಯ ಮಾಡದೆ ಕುಣಿಗಲ್ ತಾಲ್ಲೂಕಿನಲ್ಲಿ ಅಗತ್ಯವಿರುವಂತ ಬೇರೆ ಕಾಮಗಾರಿಗಳಿಗೆ ಬಳಸಿ ಈಗಿರುವ ಮೂಲ ನಾಲೆಯ ಮೂಲಕವೇ ಕುಣಿಗಲ್ ಹಾಗೂ ಮಾಗಡಿಗೆ ನೀರನ್ನು ಹರಿಸಿ ಎಂದು ಮನವಿ ಮಾಡುತ್ತೇವೆ. ರಾಜ್ಯ ಸರ್ಕಾರ ಇಂದು ಯಾವುದೇ ಒಂದು ನಾಲೆಯನ್ನು ತೆಗೆದುಕೊಂಡು ಹೋಗಬೇಕಾದಲ್ಲಿ ಭೂಸ್ವಾಧೀನ ಪ್ರಕ್ರಿಯೆಗಳಾಗಬೇಕು. ಆದರೆ ಈ ಯಾವುದೇ ಭೂಸ್ವಾಧೀನ ಪ್ರಕ್ರಿಯೆಗಳಿಲ್ಲದೆ ಅಕ್ರಮವಾಗಿ ಇಂದು ಸುಂಕಾಪುರದ ಬಳಿ ಕಾಮಗಾರಿ ಪ್ರಾರಂಬಿಸಿದ್ದೀರಿ. ಇದನ್ನ ವಿರೋದಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರನ್ನು ತಾವು ಬಂದಿಸಿದ್ದೀರಿ. ಅಕ್ರಮವಾಗಿ ಭೂಸ್ವಾಧೀನ ಪ್ರಕ್ರಿಯೆಯಿಲ್ಲದೆ ಕೆಲಸ ಮಾಡುತ್ತಿರುವಂತ ಗುತ್ತಿಗೆದಾರರಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಸರ್ಕಾರ ಅವರಿಗೆ ರಕ್ಷಣೆ ಕೊಡುತ್ತಿದೆ. ಈ ನೀತಿಯನ್ನು ವಿರೋಧ ಮಾಡದೆ ಅನೇಕ ಮೌನ ಶಾಸಕರ ನಡೆಯನ್ನು ಖಂಡಿಸಿ ಎಲ್ಲ ಪಕ್ಷಗಳ ಮುಖಂಡರು, ಹಲವಾರು ಸಂಘ ಸಂಸ್ಥೆಗಳ ಮಠಾಧೀಶರು, ಮಹಿಳಾ ಸಂಘಟನೆಗಳು ಒಗ್ಗೂಡಿ ಒಂದು ಹೋರಾಟ ಸಮಿತಿಯನ್ನು ಮಾಡಿದ್ದು ಆ ವೇದಿಕೆ ಮುಖಾಂತರ ಸರ್ಕಾರದ ಈ ನಡೆಯನ್ನು ಖಂಡಿಸಿ ಗುಬ್ಬಿ ತಾಲ್ಲೂಕು ೭೦ನೇ ಕಿ.ಮೀ.ನ ಸುಂಕಾಪುರದ ಬಳಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಎಚ್ಚರಿಸಲು ಮೇ.೩೧ರಂದು ಬೆಳಿಗ್ಗೆ ೧೦ಗಂಟೆಗೆ ಬೃಹತ್ ಮಟ್ಟದಲ್ಲಿ ಪ್ರತಿಭಟನಾ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಆ ಸಭೆಗೆ ಪಕ್ಷಾತೀತವಾಗಿ ಶಾಸಕರು, ಮಾಜಿ ಶಾಸಕರು, ಮಠಾಧೀಶರು ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಅಂದು ಸಭೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಂಡರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ಲಿಂಕ್ ಕೆನಾಲ್ ನಿಂದ ರೈತರಿಗೆ ಯಾವುದೇ ರೀತಿಯಿಂದಲು ಅನುಕೂಲವಾಗುವುದಿಲ್ಲ. ಇದರ ಸಾದಕ ಬಾದಕಗಳನ್ನು ನೋಡುವುದಾದರೆ ಗುಬ್ಬಿ, ತುಮಕೂರು, ಶಿರಾ, ತುಮಕೂರು ಗ್ರಾಮಾಂತರ, ಚಿಕ್ಕನಾಯಕನಹಳ್ಳಿ , ತುರುವೇಕೆರೆ ತಾಲ್ಲೋಕಿನ ರೈತರಿಗೆಮರಣ ಶಾಸನ ಬರೆದಂತಿದೆ. ನೀರನ್ನು ತೆಗೆದುಕೊಂಡು ಹೋಗುವ ಬಗ್ಗೆ ಯಾವ ರೈತರ ತಕರಾರು ಇರುವುದಿಲ್ಲ. ಆದೇ ನೀರನ್ನು ಈಗೀರುವ ಕೆನಾಲ್ ನಲ್ಲಿ ತೆಗೆದುಕೊಂಡು ಹೋಗಿ ಎನ್ನುವುದಷ್ಟೆ ನಮ್ಮಗಳ ಒತ್ತಾಯ. ಆದರೆ ಕೆಲವು ಲಂಚ ಬಾಕ ರಾಜಕಾರಣಿಗಳು ತಮಗೆ ಬರುವ ಲಂಚದ ಹಣಕ್ಕೆ ಬೇಕಿಲ್ಲದ ಕಾಮಗಾರಿಗಳನ್ನು ಮಾಡುತ್ತಾ. ಅವರ ಮನಸೋ ಇಚ್ಚೆ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ೩೧ರ ಹೋರಾಟಕ್ಕೆ ನಮ್ಮ ತಾಲ್ಲೂಕಿನಿಂದಲೂ ಸಾವಿರಾರು ರೈತರು ಬಾಗವಹಿಸುವುದಾಗಿ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ರೈತಸಂಘದ ತಾಲೂಕು ಪದಾಧಿಕಾರಿಗಳಾದ ರಹಮತ್, ಪುರುಶೋತ್ತಮ್, ರಾಜಶೇಖರ್, ರಾಜಣ್ಣ, ತಂಡಗ ಅಶೋಕ್, ಲಕ್ಕಸಂದ್ರ ಗೋವಿಂದರಾಜ್, ರವಿಕೀರ್ತೀ, ಜಯರಾಮಯ್ಯ, ರಂಗಸ್ವಾಮಿ, ಗುರುದತ್, ನಾಗರಾಜು, ಸಿಐಟಿಯು ಸಂಘದ ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ ಸೇರಿದಂತೆ ಇತರರು ಇದ್ದರು.
(Visited 1 times, 1 visits today)