ಚಿಕ್ಕನಾಯಕನಹಳ್ಳಿ: ಪುರಸಭಾ ಅನುದಾನದಲ್ಲಿ ಬೆಸ್ಕಾಂ ನಡೆಸಿದ ವಿದ್ಯುತ್ ಕಂಬದ ಬದಲಾವಣೆ ಕಾಮಾಗಾರಿ, ಸರಕಾರಿ ಬಸ್ಗಳ ಕೊರತೆ, ಡಿಪೋ ಸಮಸ್ಯೆ ಹಾಗು ಬೆಸ್ಕಾಂ ಅಕ್ರಮ ಸಕ್ರಮ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿ ಬುಧವಾರ ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿದವು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕ್ರಮ ಮತ್ತು ತಾಲ್ಲೂಕಿನ ಅಭಿವೃದ್ದಿಗೆ ಅಗತ್ಯವಿರುವ ಕಾರ್ಯಗಳ ಕುರಿತು ಚರ್ಚೆಗಳು ನಡೆದವು. ಸಭೆಯಲ್ಲಿ ಭಾಗವಹಿದ್ದ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿದ್ದು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕತೆಯಿಂದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗು ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸುವುದು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸುವAತೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಅಧ್ಯಕ್ಷ ಚಂದ್ರಶೇಖರ್ ಸೂಚಿಸಿದರು.
ಶಕ್ತಿ ಯೋಜನೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದೆ. ಮೊದಲು ಘಟಕಕ್ಕೆ ಪ್ರತಿ ಕಿ.ಮೀ ಗೆ ೨೫ ರೂಗಳು ಆದಾಯ ಬರುತ್ತಿತ್ತು. ಯೋಜನೆ ಪ್ರಾರಂಭದಿAದ ಪ್ರತಿ ಕಿ.ಮೀ ಗೆ ೪೩ ರೂ ಆದಾಯ ಬರುತ್ತಿದೆ. ಇದೇ ವೇಳೆ ಹೆಚ್ಚಿನ ಸೇವೆ ನೀಡಲು ಬಸ್ ಗಳ ಅವಶ್ಯಕತೆ ಇದೆ ಎಂದು ತುರುವೇಕೆರೆ ಘಟಕಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳನ್ನು ಹೊಂದಣಿಕೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಚಂದ್ರಶೇಖರ್ ಸೂಚಿಸಿದರು.
ಪಡಿತರವನ್ನು ಉಚಿತವಾಗಿ ಹಾಗು ಗ್ರಾಮಗಳಲ್ಲಿ ಸರಕಾರ ತಿಳಿಸಿರುವ ಸಮಯದಲ್ಲಿ ವಿತರಿಸುವ ಕ್ರಮ ಕೈಗೊಳ್ಳಬೇಕು. ಆಹಾರ ಧಾನ್ಯ ವಿತರಿಸುವಾಗ ತೂಕದ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಗ್ಯಾರಂಟಿ ಸಮಿತಿ ಸದಸ್ಯ ಚೌಳಕಟ್ಟೆ ನಟರಾಜ್ ಒತ್ತಾಯಿಸಿದರು. ೧೦೦೦ ಕಾರ್ಡಿಗೆ ಹತ್ತಿರ ೪೦ ಸಾವಿರ ರೂ ಅಂಗಡಿಕಾರರಿಗೆ ಕಮಿಷನ್ ಸಿಗಲಿದ್ದು ಪ್ರಮಾಣಿಕವಾಗಿ ವಿತರಿಸಲು ಸಂಬAಧಿಸಿದ ನ್ಯಾಯಬೆಲೆ ಅಂಗಡಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲು ಆಹಾರ ಇಲಾಖೆಯ ಪ್ರಜ್ವಲ್ ಅವರಿಗೆ ಚಂದ್ರಶೇಖರ್ ತಿಳಿಸಿದರು.ತಿಳುವಳಿಕೆ ನೋಟೀಸ್ ನೀಡಲಾಗಿದೆ
ಗೃಹ ಜ್ಯೋತಿ ಯೋಜನೆಯಡಿ ೨೦೦ ಯುನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ಯೋಜನೆಯಿಂದ ಹೊರಗಿರುವ ಸುಮಾರು ೫೨೬ ಫಲಾನುಭವಿಗಳಿಗೆ ತಿಳುವಳಿಕೆ ನೋಟೀಸ್ ಕಳುಹಿಸಲಾಗಿದೆ. ಅವರಿಗೆ ಅರಿವು ಮೂಡಿಸಿ ಯೋಜನೆಗೆ ಒಳಪಡಲು ತಿಳಿಸಲಾಗುವುದು ಎಂದು ಬೆಸ್ಕಾಂ ಎಇಇ ಗವಿರಂಗಯ್ಯ ಸಭೆಗೆ ಮಾಹಿತಿ ನೀಡಿದರು.
ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಉದ್ಯೋಗ ವಿನಿಮಯ ಕೇಂದ್ರದ ಅರುಣ್, ಉಪಾಧ್ಯಕ್ಷ ಪಾಂಡುರAಗಯ್ಯ, ಸಮಿತಿ ಸದಸ್ಯರುಗಳಾದ ಮಂಜುನಾಥ್, ಚಂದ್ರಶೇಖರ್, ಓಕಾಂರಮೂರ್ತಿ, ನಿರಂಜನಮೂರ್ತಿ, ರಾಜಣ್ಣ, ರೇಣುಕಾ, ಚಿಕ್ಕತಿಮ್ಮಯ್ಯ ಸಭೆಯಲ್ಲಿ ಹಾಜರಿದ್ದರು.
(Visited 1 times, 1 visits today)