ತುಮಕೂರು: ದಲಿತರ ಮೇಲೆ ಹೆಚ್ಚಾಗುತ್ತಿರುವ ಕೊಲೆ,ದೌರ್ಜನ್ಯ,ಅಸ್ಪೃಶ್ಯತಾಚರಣೆ, ಕೌಂಟರ್ ಕೇಸ್, ಮರ್ಯಾದೆ ಹತ್ಯೆ ತಡೆಯಲು ರಾಜ್ಯ ಸರ್ಕಾರ ಕ್ರಮ ವಹಿಸಲು ಒತ್ತಾಯಿಸಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆಯ ಭಾಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಿ ಸ್ಥಾನಿಕ ಅಧಿಕಾರಿಗಳಾದ ಶ್ರೀ ಮೋಹನ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷರಾದ ಗೋಪಾ ಲಕೃಷ್ಣ ಹರಳಹಳ್ಳಿ ಮಾತನಾಡಿ ಮಂಡ್ಯದ ಕೆ.ಆರ್ ಪೇಟೆ ದಲಿತ ಜಯಕುಮಾರ್ ಎಂಬ ದಲಿತನನ್ನು ಸಜೀವವಾಗಿ ದಹನ ಮಾಡಿ ಕೊಲೆ ಮಾಡಲಾಗಿದೆ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕವಣಗಾಲದಲ್ಲಿ ದಲಿತ ಯುವಕ ಸ್ವಾಮಿನಾಥ ದೇವಲಾಯ ಪ್ರವೇಶ ಮಾಡಿದ ಎಂಬ ಕಾರಣಕ್ಕಾಗಿ ಇಡೀ ಗ್ರಾಮದ ಮೇಲ್ಜಾತಿಯವರು ಬಹಿಷ್ಕಾರ ಹಾಕಿದ ಘಟನೆ, ತುಮಕೂರಿನ ಪಂಚಾಯತ್ ರಾಜ್ ಇಲಾ ಖೆಯಲ್ಲಿ ಓಂಕಾರ್ ಮೂರ್ತಿ ಎಂಬ ದಲಿತ ಸಮುದಾಯದ ಸಿಬ್ಬಂದಿಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಿ ದರ್ಜನ್ಯವೆಸಗಲಾಗಿದೆ ಆ ದರೆ ಇದೂವರೆಗೂ ದೂರು ದಾಖಲಿಸಿಲ್ಲ, ದಲಿತ ಸಮುದಾಯದ ವರದಿಗಾರನ ಮೇಲೆ ಜಾತಿ ದರ್ಜನ್ಯವಾಗಿದೆ, ಅದೇ ರೀತಿ ರಾಮನಗರ ಜಿಲ್ಲೆ ಕನಕಪುರದ ಬನವಾಸಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕÀಲಾಗಿದೆ, ಬಿಡದಿ ಹೋಬಳಿ ಭದ್ರಾಪುರದಲ್ಲಿ ದಲಿತ ಬಾಲಕಿಮೇಲೆ ಅತ್ಯಾಚಾರ ವೆಸಗಿ ಹತ್ಯೆಮಾಡಲಾಗಿದೆ. ಈ ರೀತಿ ಬೆಳಕಿಗೆ ಬಂದಿರುವ ಪ್ರಕರಣಗಳನ್ನು ಮಾತ್ರ ಹೆಸರಿಸಲಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರದ ಎಷ್ಟೋ ದಲಿತರ ಮೇಲಿನ ದರ್ಜನ್ಯ ಪ್ರಕರಣಗಳು ಮುಚ್ಚಿಹೋಗಿವೆ ಪೋಲೀಸ್ ಠಾಣೆಗಳು ರಾಜಿ ಕೇಂದ್ರಗಳಾಗಿವೆ ಮತು ಕೌಂಟರ್ ಕೇಸ್ ಸಮಾನ್ಯವಾಗಿದೆ. ಒಟ್ಟಾರೆ ದಲಿತರ ಪರವಾಗಿದ್ದೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರದಲ್ಲೂ ಕೂಡ ದಲಿತರ ಮೇಲಿನ ದರ್ಜನ್ಯ ಹೆಚ್ಚಾಗಿ ದಲಿತರಿಗೆ ರಕ್ಷಣೆ ನೀಡ ಲಾಗದೆ ಬಂಡವಾಳಶಾಹಿಗಳ ಪರವಾದ ರ್ಕಾರವಾಗಿದೆ, ದಲಿತರ ಮೇಲಿನ ದೌರಜ್ಯ ಇದೇ ರೀತಿ ಮುಂದುವರೆದೆರೆ ಮುಂದೆ ರಾಜ್ಯಾದ್ಯಂತ ಹೋರಾಟ ಮತ್ತು ಚಳುವಳಿ ರೂಪಿಸಲಾಗುವುದು ಎಂದು ಹೇಳಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ರವರು, ಜನವಾದಿ ಮಹಿಳಾ ಸಂಘಟನಾ ಕಾರ್ಯದರ್ಶಿ ಕಲ್ಪನಾ ಮತ್ತು ತುಮಕೂರು ಡಿ.ಹೆಚ್.ಎಸ್ ಜಿಲ್ಲಾಧ್ಯಕ್ಷರಾದ ರಾಜು ವೆಂಕಟಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸತೀಶ್ ಬೆಳ್ಳಿಗೆರೆ, ನಾಗರಾಜು ತುಮಕೂರು, ಗೋವಿಂದಪ್ಪ ಯಲಿಯೂರು, ಜಗದೀಶ್ ಕೊರಟಗೆರೆ,
ಲಕ್ಷಿö್ಮÃಕಾಂತ್ ಸಿಐಟಿಯು, ಆನಂದ್ ಊರ್ಡಿಗೆರೆ, ಮಲೆ ರಂಗಪ್ಪ ಮಧುಗಿರಿ, ಪ್ರಾಂತ ರೈತ ಸಂಘದ ಅಜ್ಜಪ್ಪ, ವಿಜಯ್ಕುಮಾರ್, ಮಾರುತಿ ಮುಂತಾದವರು ಭಾಗವಹಿಸಿದ್ದರು.
(Visited 1 times, 1 visits today)