ಕೊರಟಗೆರೆ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ್ ಕರೆಗೆ ಇಲ್ಲಿನ ಪ.ಪಂ ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ದಿನನಿತ್ಯ ಕೆಲಸ ವನ್ನು ಮೂರನೇ ದಿನದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪ.ಪಂ ಸದಸ್ಯರು, ಅಧಿಕಾರಿಗಳು ಮತ್ತು ತಾಲ್ಲೂಕು ಕಾರ್ಯ ನಿರತ ಪರ್ತಕರ್ತರ ಸಂಘ ಬೆಂಬಲ ಸೂಚಿಸಿ ಬೇಡಿಕೆ ಈಡೇರಿಕೆಗೆ ಸರ್ಕಾ ರವನ್ನು ಒತ್ತಾಯ ಮಾಡಿದರು.
ಪ.ಪಂ ಅಧ್ಯಕ್ಷೆ ಅನಿತಾ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ನೌಕರರ ಕಠಿಣ ಪರಶ್ರಮವನ್ನು ಸರ್ಕಾರ ಗಮನಹರಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇವರುಗಳ ಪಾತ್ರ ಅತಿಮುಖ್ಯವಾಗಿದೆ. ಆದ್ದರಿಂದ ಸರ್ಕಾರ ಮಲತಾಯಿ ದೋರಣೆ ಮಾಡದೆ ಸರ್ಕಾರಿ ನೌಕರರ ಸೌಲಭ್ಯಗಳನ್ನು ಪೌರ ನೌಕರರಿಗೂ ಸಹ ನೀಡಿ ಸೇವಾ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಪ.ಪಂ ಮುಖ್ಯಾಧಿಕಾರಿ ಉಮೇಶ್ ಕೆ.ಎಸ್ ಮಾತನಾಡಿ, ಪೌರ ನೌಕರರ ಬೇಡಿಕೆಗಳು ರಾಜ್ಯ ಸರ್ಕಾರ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯ ಸಮ್ಮತವಾಗಿದೆ. ಸರ್ಕಾರಿ ನೌಕರರಂತೆ ಮುನ್ಸಿಪಾಲ್ ಪೌರ ನೌಕರರನ್ನು ಪರಿಗಣಿಸಬೇಕೆಂದು ರಾಜ್ಯಾ ದ್ಯಾಂತ ಪೌರ ನೌಕರರು ಅನಿರ್ದಿಷ್ಠಾವಧಿ ಮುಷ್ಕರ ಕೈಗೊಂಡಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ಪಾವತಿಸುವ ವೇತನ ನಿಲ್ಲಿಸಿ ನೇರ ಪಾವತಿ ಮತ್ತು ಸೇವಾ ಭಧ್ರತೆ ಒದಗಿಸಿ ಎಸ್ಎಫ್ಸಿ ಅನುದಾನದಲ್ಲಿ ವೇತನ ನೀಡಬೇಕೆಂದು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದರು.
ಪಟ್ಟಣದ ತೆರಿಗೆ ಹಣ ಏಕಾಏಕಿ ವೇತನ ಪಾವತಿಗೆ ಬಳಸಿದರೆ ಪಟ್ಟಣದ ಅಭಿವೃದ್ಧಿಗೆ ಕುಂಠಿ ತದ ಬಗ್ಗೆ ಇಂದಿನ ಸಾಮಾನ್ಯ ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಅನಿತಾ ಮತ್ತು ಸದಸ್ಯರ ನೇತೃತ್ವದಲ್ಲಿ ಚರ್ಚಿಸ ಲಾಗಿದೆ. ಘನ ಸರ್ಕಾರ ನೌಕರರ ಬೇಡಿಕೆ ಈಡೇರಿಸಿ ಸೇವಾ ಭದ್ರತೆ ಒದಗಿಸಲಿ ಎಂದು ಜನಪ್ರತಿನಿಧಿಗಳ ಜೊತೆ ಪ.ಪಂ ಅಧಿಕಾರಿ ವರ್ಗ ಬೆಂಬಲ ಸೂಚಿಸಿದೆ ಎಂದರು.
ಕೆಯುಡಬ್ಲೂö್ಯಜೆ ತಾ.ಅಧ್ಯಕ್ಷ ಕೆ.ವಿ ಪುರುಷೋ ತ್ತಮ್ ಮಾತನಾಡಿ, ಪೌರ ನೌಕರರು ಸರ್ಕಾರದಿಂದ ವಿಶೇಷ ಭತ್ಯೆ ಕೇಳುತ್ತಿಲ್ಲಾ, ಸಾಮಾನ್ಯ ಸರ್ಕಾರಿ ನೌಕರರ ಸೌಲಭ್ಯ ನೀಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ರಜೆ ಪಡೆಯದೆ ವರ್ಷದ ೩೬೫ದಿನವೂ ಪಟ್ಟಣದ ಆರೋಗ್ಯಕರ ಸಮಾಜಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಪೌರ ನೌಕರರ ಕೆಲಸ ವೈದ್ಯರ ಕರ್ತವ್ಯದಷ್ಟೇ ಸಮಾನ. ಜೀವನ ನಿರ್ವಹಣೆಗೆ ಸರ್ಕಾರ ಭದ್ರತೆ ನೀಡಿ ಪೌರ ನೌಕರರ ಕುಟುಂಬವನ್ನು ರಕ್ಷಿಸಬೇಕಿದೆ ಎಂದರು.
ಪ.ಪA ಸದಸ್ಯ ಕೆ.ಆರ್ ಓಬಳರಾಜು ಮಾತ ನಾಡಿ, ಪಟ್ಟಣದ ಪಂಚಾಯಿತಿ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಪ.ಪಂ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ, ಸದಸ್ಯರು, ಮುಖ್ಯಾಧಿಕಾರಿಗಳು, ಕಾರ್ಯನಿರತ ಪರ್ತಕರ್ತರ ಸಂಘ ಇಂದು ಬೆಂಬಲ ಸೂಚಿಸಿದೆ.
ಈ ವೇಳೆ ಉಪಾಧ್ಯಕ್ಷೆ ಉಸ್ನಾಫಾರಿಯಾ, ಪ.ಪಂ ಸದಸ್ಯರಾದ ಲಕ್ಷಿö್ಮÃನಾರಾಯಣ್, ಭಾಗ್ಯಮ್ಮ ಗಣೇಶ್, ಭಾರತಿ ಸಿದ್ದಮಲ್ಲಪ್ಪ, ನಂದೀಶ್, ಮಂಜುಳಾ, ನಂದೀಶ್, ಪೌರ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹ, ಕೆಯುಡಬ್ಲೂö್ಯಜೆ ಗೌರವಾ ಧ್ಯಕ್ಷ ಎನ್.ಪದ್ಮನಾಬ್, ರಂಗಧಾಮಯ್ಯ, ಉಪಾ ಧ್ಯಕ್ಷ ಹೆಚ್ಎನ್ ನಾಗರಾಜು, ಹರೀಶ್ಬಾಬು, ಲೋಕೇಶ್, ನರಸಿಂಹಮೂರ್ತಿ, ಮಂಜುಸ್ವಾಮಿ, ಮುತ್ತುರಾಜು, ತಿಮ್ಮರಾಜು, ಅರ್.ಐ ವೇಣುಗೋ ಪಾಲ್, ಹೆಲ್ತ್ ಇನ್ಸ್ಪೆಕ್ಟರ್ ಹುಸೇನ್ ಸೇರಿದಂತೆ ಪೌರ ನೌಕರರು ಹಾಜರಿದ್ದರು.
(Visited 1 times, 1 visits today)