ತುರುವೇಕೆರೆ: ವೀರಶೈವ ಲಿಂಗಾಯತ ಸಮಾಜ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಮನ ಮಾಡುತ್ತಿದ್ದಾರೆ ವೀರಶೈವ ಲಿಂಗಾಯಿತರು ನಿಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ, ಮಹಿಳಾ ಯುವ ಘಟಕ ಹಾಗೂ ವೀರಶೈವ ಲಿಂಗಾಯಿತ ಸಂಘ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವಜಯಂತಿ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ (ವೀರಯೋದರಿಗೆ ಬಲ ನೀಡಲು) ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ೨೦೧೧ರ ಜನಗಣತಿ ಯ ಪ್ರಕಾರ ಸುಮಾರು ೯೩ ಲಕ್ಷ ಜನಸಂಖ್ಯೆ ಹೊಂದಿ ರಾಜ್ಯದ ದೊಡ್ಡ ಸಮಾಜ ವಾಗಿದ್ದ ವೀರಶೈವ ಲಿಂಗಾಯಿತರು ಸಿದ್ದರಾಮಯ್ಯರ ಜಾತಿಗಣತಿಯಲ್ಲಿ ೭೫ ಲಕ್ಷಕ್ಕೆ ಇಳಿಸಿದ್ದಾರೆ. ದೊಡ್ಡ ಸಮಾಜಗಳಲ್ಲಿ ಸಣ್ಣ ಉಪ ಪಂಗಡಗಳನ್ನು ಎತ್ತಿ ಕಟ್ಟಿ ಹೊಡೆದು ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಜಾತಿ ಆದಾರದಲ್ಲಿ ಬಜೆಟ್ ಮಂಡಿಸಲು ಸಿದ್ದತೆ ದೊಡ್ಡ ಜಾತಿಗಳಿಗೆ ಬಹಳ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಸಿದರು.
ಬಸವಣ್ಣನವರು ಇನ್ನು ೧೦ ವರ್ಷ ಹೆಚ್ಚು ಬದುಕಿದ್ದರೆ ಇಡೀ ರಾಷ್ಟçವನ್ನು ಧರ್ಮ, ಜಾತಿ ಮುಕ್ತ ಮಾಡಿ ಜಾತಿ ವ್ಯವಸ್ಥೆಯನ್ನೇ ನಿರ್ಣಾಮ ಮಾಡು ತ್ತಿದ್ದರು. ೮ ವರ್ಷದಲ್ಲಿಯೇ ತನ್ನ ಮನೆಯಿಂದಲೇ ಸಮಾನತೆಗಾಗಿ ಹೋರಾಟ ಮಾಡಿದವರು. ಇಡೀ ಜೀವನವನ್ನೇ ಸಮಾಜ ಸುದಾರಣೆಗೆ ಜಾತಿ ಪದ್ದತಿ, ತಾರತಮ್ಯ, ಮೇಲಿ ಕೀಳು ವಿರುದ್ದ ಹೋರಾಟಕ್ಕೆ ಮೀಸಲಿಟ್ಟಿದ್ದರು. ಅನುಭವ ಮಂಟಪದ ಮೂಲಕ ಬಸವಣ್ಣನವರು ರಾಷ್ಟçಕ್ಕೆ ಅಲ್ಲ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರದಾನಿ ಮೋದಿಯವರು ಬಸವ ಣ್ಣನವರ ಅನುಯಾಯಿಗಳಾಗಿದ್ದು ಅನುಭವ ಮಂಟ ಪದಂತೆ ನೂತನ ಪಾರ್ಲಿಮೆಂಟ್ ಭವನ ನಿರ್ಮಿಸಿ ಬಸವಣ್ಣನ ಅದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂದ ಅವರು ಸಿದ್ದರಾಮೇಶ್ವರ ಸಮುದಾಯ ಭವನ ಆವರಣದಲ್ಲಿ ದೇವಾಲಯ ನಿರ್ಮಾಣಕ್ಕೆ ೧೦ ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಹೇಮಾವತಿ ಲಿಂಕ್ ಕೇನಾಲ್ ನಿಂದ ತಾಲೂಕಿನ ದಂಡಿನಶಿವರ ಹೋಬಳಿ ಗುಬ್ಬಿ ತಾಲೂಕಿಗೆ ಬಹಳ ಹೊಡೆತ ಬೀಳುತ್ತದೆ ಲಿಂಕ್ ಕೆನಾಲ್ ವಿರುದ್ದ ೩೧ ಶನಿವಾರ ಹೋರಾಟ ಹಮ್ಮಿಕೊಂಡಿದ್ದು ತಾಲೂಕಿನ ಎಲ್ಲ ರೈತರು ಸಂಘ ಸಂಸ್ಥೆ ಮುಖಂಡರು ಭಾಗವ ಹಿಸಬೇಕು ಕರೆ ನೀಡಿದರು. ಈಗಾಗಲೇ ಹೋರಾಟ ಕೈ ಬಿಡಿ ನಿಮಗೆ ಅನುದಾನ ನೀಡುತ್ತೇವೆ ಎಂದು ಕೆಲವು ರಾಜ್ಯ ಸಚಿವರು ಕರೆ ಮಾಡುತ್ತಿದ್ದಾರೆ. ನಾನು ಹೋರಾಟ ಮಾಡುತ್ತಾ ಬಂದಿದ್ದೇನೆ ಹೋರಾ ಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ರೈತರ ಹಿತಕ್ಕಾಗಿ ಜೈಲಿನಲ್ಲಿಯೇ ಮುದ್ದೆ ಮುರಿಯಲು ಸಿದ್ದ ರಾಗಿದ್ದೇನೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ವೀರ ಯೋದರಿಗೆ ಬಲ ನೀಡಲು ಬೆಳಿಗ್ಗೆಯಿಂದ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ವಿಭವ ವಿದ್ಯಾ ಶಂಕರ ದೇಶಿ ಕೇಂದ್ರ ಮಹಾ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಹಲವಾರು ಜನರು ಭಾಗವಹಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಯುವ ಘಟಕದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಭಿರದಲ್ಲಿ ಯುವಕರು ರಕ್ತದಾನ ಮಾಡಿದರು. ಅಕ್ಕನ ಬಳಗದವರಿಂದ ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ನೆಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಹಿರೇಡೊಂಕಿಹಳ್ಳಿ ಕೃಷಿ ವಿಜ್ಞಾನ ವಿದ್ಯಾರ್ಥಿ ತೇಜಸ್ಸ್ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿ ಕೇಂದ್ರ ಶಿವ ಯೋಗಿಶ್ವರ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಬಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ವಿಭವ ವಿದ್ಯಾ ಶಂಕರ ದೇಶಿ ಕೇಂದ್ರ ಮಹಾ ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಅದ್ಯಕ್ಷ ತೆಯನ್ನು ವೀರಶೈವ ಲಿಂಗಾಯಿತ ತಾಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ ವಹಿಸಿದ್ದರು. ಪಟ್ಟ ಣ ಪಂಚಾಯತಿ ಅಧ್ಯಕ್ಷೆ ಸ್ವಪ್ನ ನಟೇಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ವಿಶ್ವನಾಥ ಅಪ್ಪಾಜಪ್ಪ, ಕೋಶಾಧ್ಯಕ್ಷ ಆರ್.ಬಿ.ಜಯ ಣ್ಣ, ಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ನೊಳಂಬ ಲಿಂಗಾಯತ ಸಂಘದ ನಿರ್ದೇಶಕ ಎಂ. ದೇವರಾಜು, ಯುವಘಟಕದ ಜಿಲ್ಲಾಧ್ಯಕ್ಷ ಕೆ.ಎಲ್.ದರ್ಶನ್, ರಾಜ್ಯ ಕಾರ್ಯದರ್ಶಿ ಹೆಚ್.ಎಸ್.ಶ್ರೀಧರ್, ಕೋಳಘಟ್ಟಯೋಗೀಶ್, ಮಹಿಳಾ ಘಟಕದ ಜಿಲ್ಲಾ ಧ್ಯಕ್ಷೆ ಮಮತಾ ದಿವಾಕರ್, ತಾ ಲೂಕು ಅಧ್ಯಕ್ಷೆ ಪುಷ್ಪಾ ವತಿ, ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ಶಿವಾನಂದಯ್ಯ, ಕೋಶಾಧ್ಯಕ್ಷ ಡಿ.ಎಂ.ಸುರೇಶ್, ಉಪನ್ಯಾಸಕ ದಿಬ್ಬದಹಳ್ಳಿಶ್ಯಾಮಸುಂದರ್, ಯಡಗಿ ಹಳ್ಳಿವಿಶ್ವನಾಥ್, ಶರಣೆ ರೂಪಶ್ರೀ ಪದಾದಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ಇದ್ದರು.
(Visited 1 times, 1 visits today)