ಹುಳಿಯಾರು: ಹುಳಿಯಾರಿನ ಸ್ವಾತಂತ್ರö್ಯ ಹೋರಾಟಗಾರ ಜಿ.ಎಸ್.ವೆಂಕಟಚಲಪತಿ ಶ್ರೇಷ್ಠಿ (೯೬) ಯವರು ಮಂಗಳವಾರ ಮುಂಜಾನೆ ತುಮಕೂರಿನ ತಮ್ಮ ಮಗನ ನಿವಾಸದಲ್ಲಿ ನಿಧನರಾದರು.
ಹುಳಿಯಾರು ಟೌನ್ ಪಂಚಾಯಿತಿ ಅಧ್ಯಕ್ಷರಾಗಿ, ಹುಳಿಯಾರಿನ ಗಾಂಧಿ ಭವನ ಸ್ಥಾಪಕರಾಗಿ, ತೊರೆಸೂರಗೊಂಡನಹಳ್ಳಿ ರಸ್ತೆಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ, ಹುಳಿಯಾರು ಗ್ರಾಮ ದೇವತೆ ಶ್ರೀ ಹುಳಿಯಾರಮ್ಮ ದೇವಾಲಯದ ಗೌರವಾಧ್ಯಕ್ಷರಾಗಿ, ಹುಳಿಯಾರು ಆರ್ಯವೈಶ್ಯ ಸಮಾಜ, ಥಿಯಾಸಫಿ ಸೊಸೈಟಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಹುಳಿಯಾರು ಎಸ್ಎಲ್ಆರ್ ಬಸ್ ಮಾಲೀಕರಾದ ಗೋವಿಂದರಾಜ ಶೆಟ್ರು ಇವರ ಪುತ್ರರಾಗಿದ್ದು, ಎಸ್ ಎಲ್ ಆರ್ ಬಸ್/ ಲಾರಿ ಮಾಲೀಕರಾದ ಪ್ರದೀಪ್- ಪ್ರವೀಣ್ ಇವರ ಮೊಮ್ಮಕ್ಕಳಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ತುಮಕೂರಿನಲ್ಲಿ ನೆರವೇರಿತು.
(Visited 1 times, 1 visits today)