ಗುಬ್ಬಿ: ದನದ ಕೊಟ್ಟಿಗೆ ಗೊಬ್ಬರ ಬಳಸಿ ರಾಗಿ ಬೆಳೆದು ಯಶಸ್ವಿಯಾದ ಮಾಜಿ ಶಾಸಕ ಮಸಾಲೆ ಜಯರಾಮ್. ಸಾವಯುವ ಗೊಬ್ಬರವನ್ನು ಬಳಸಿ ರಾಗಿ.ಭತ್ತ. ಹಾಗೂ ಬಾಳೆ ತೆಂಗಿನ ಗಿಡಗಳು ಮತ್ತು ಸಿದ್ದು ಹಲಸಿನ ಗಿಡಗಳನ್ನು ಬೆಳೆಸಿ ಉತ್ತಮ ರೀತಿಯಲ್ಲಿ ರುಚಿಕರವಾದ ಆಹಾರವನ್ನು ಸೇವನೆ ಮಾಡಬಹುದು ಹಾಗಾಗಿ ರೈತರು ದನದ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಬೆಳೆಯುವ ಬೆಳೆಯಲ್ಲಿ ಉತ್ತಮ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ.
ರಾಸಾಯನಿಕ ಗೊಬ್ಬರವನ್ನು ಬಳಸುವುದಕ್ಕಿಂತ ದನದ ಕೊಟ್ಟಿಗೆ ಗೊಬ್ಬರವನ್ನು ಬಳಸಿ ರಾಗಿ ಬೆಳೆಯುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು ಹಾಗೆ ರಾಗಿ ತೆನೆಯಲ್ಲಿ ಹೆಚ್ಚು ಇಳುವರಿ ಸಹ ಬೀಳುತ್ತದೆ. ತುರುವೇಕೆರೆ ಕ್ಷೇತ್ರದ ಮಾ.ಶಾಸಕ ಮಸಾಲೆ ಜಯರಾಮ್ ಅವರು ತಮ್ಮ ಫಾರಂ ಹೌಸ್ ನಲ್ಲಿ ವಿವಿಧ ತಳಿಯ, ಹಳ್ಳಿಕಾರ್ ,ಅಮೃತ್ ಮಹಲ್ ,ಮಲೆನಾಡ ಗಿಡ್ಡ ,ಪುಂಗನೂರು,ಗಿರ್ ತಳಿಯ ನಾಟಿ ಹಸು ಮತ್ತು ಎತ್ತುಗಳನ್ನು ಸಾಕಿದ್ದು ಇವುಗಳ ಸಗಣಿ ಯಿಂದ ಕೊಟ್ಟಿಗೆ ಗೊಬ್ಬರ ಶೇಖರಿಸಿ ರಾಗಿ ಬೆಳೆಯನ್ನು ಬೆಳೆದು ಉತ್ತಮ ರೀತಿಯಲ್ಲಿ ಇಳುವರಿ ಬಂದಿರುವುದು ಸಂತಸ ತಂದಿದೆ ಎನ್ನುತ್ತಾರೆ.
ಅದೇ ರೀತಿ ತಮ್ಮ ಫಾರಂ ಹೌಸ್ ನಲ್ಲಿ ವಿವಿಧ ರೀತಿಯ ಬಾಳೆ ಸಸಿಗಳು ಹಾಗೂ ಸಿದ್ದು ಹಲಸಿನ ಗಿಡಗಳನ್ನು ಹಾಕಿದ್ದಾರೆ. ವಿವಿಧ ರೀತಿಯ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾಕುವಂತಹ ಪ್ರಾಣಿಗಳನ್ನು ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಿದ್ದಾರೆ. ಅದೇ ರೀತಿ ಸಾವಿರಾರು ಜನ ಕಾರ್ಮಿಕರಿಗೆ ಉದ್ಯೋಗ ನೀಡಿ ಅನ್ನದಾತ ಎಂಬ ಬಿರುದು ಪಡೆದಿದ್ದಾರೆ. ತುರುವೇಕೆರೆ ಕ್ಷೇತ್ರದ ಶಾಸಕರಾಗಿ ಜನ ಮನ್ನಣೆ ಪಡೆದು ರೈತರಿಗೆ ಮಾದರಿಯಾಗಿ ಹಾಗೂ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗವನ್ನು ಕಲ್ಪಿಸಿ ಯಶಸ್ವಿಯಾಗಿದ್ದಾರೆ. ಅದರ ಜೊತೆಯಲ್ಲಿ ತಾಲೂಕಿನ ಸುತ್ತಮುತ್ತ ಕೆರೆ-ಕಟ್ಟೆಗಳಿಗೆ ನೀರುಹರಿಸಿ ನೀರಾವರಿ ಹೋರಾಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಸಾಲೆ ಜಯರಾಮ್ ರವರನ್ನು ನೋಡಲು ಫಾರಂ ಹೌಸ್ಗೆ ಬಂದ ಜನಗಳಿಗೆ ಪ್ರತಿದಿನ ಅನ್ನೋ ದಾಸೋಹ ಮಾಡಿ ಅನ್ನದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರತಿ ದಿನ ನೂರಾರು ನಾಗರಿಕರು ಫಾರಂ ಹೌಸ್ ಗೆ ಆಗಮಿಸಲಿದ್ದಾರೆ ಎಂದು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
(Visited 1 times, 1 visits today)