ತುಮಕೂರು: ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು. ಈಲ್ಲೆಯಲ್ಲಿ ೧೦ ಸಾವಿರ ಗಿಡಗಳನ್ನು ನೆಡಬೇಕೆಂಬ ಆದೇಶವಿದ್ದು, ಎಲ್ಲಾತಾಲೂಕು ನ್ಯಾಯಾಲಯಗಳ ಸಹಕಾರದೊಂದಿಗೆ ಈ ಗುರಿಯನ್ನುತಲುಪಲು ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದೆ ಎಂದುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ.
ನಗರದ ಸಪ್ತಗಿರಿ ಬಡಾವಣೆಯಗಾರೆನರಸಯ್ಯಕಟ್ಟೆ ಸಮೀಪ ಮಹಾನಗರಪಾಲಿಕೆವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದಗಿಡ ನೆಡುವಕಾರ್ಯಕ್ರಮಕ್ಕೆ ಪರಿಸರ ದಿನಾಚರಣೆಯ ಪ್ರತಿಜ್ಞಾವಧಿ ಭೋಧಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದಅವರು, ಜೂನ್ ೦೫ ರಿಂದಲೇ ಈ ಗುರಿತಲುಪಲುಕಾರ್ಯೋನ್ಮುಖವಾಗಿದ್ದೇವೆಎಂದರು.
ಅಭಿವೃದ್ದಿ ಹೆಸರಿನಲ್ಲಿಕಾಂಕ್ರಿಟ್ ಕಾಡುಗಳು ನಿರ್ಮಾಣವಾಗಿ, ಹಸಿರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನುಕಾಣಬಹುದು.ಇದರಿAದ ಮುಕ್ತಿ ಹೊಂದಲುಇರುವ ಏಕೈಕ ಮಾರ್ಗವೆಂದರೆ ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸುವುದು.ಹಾಗಾಗಿ ಅನಿವಾರ್ಯವಾಗಿಒಂದು ಮರಕಡಿದರೆ,ಅದಕ್ಕೆ ಬದಲಾಗಿ ಮತ್ತೊಂದುಗಿಡವನ್ನು ನೆಟ್ಟು ಮರವಾಗಿ ಬೆಳೆಸುವ ಗುರುತರಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಒಂದುಗಿಡ ಮರವಾಗಲು ಹತ್ತಾರು ವರ್ಷಗಳು ಬೇಕು.ಇದನ್ನು ನಾವೆಲ್ಲರೂ ಮನಗಾಣಬೇಕಿದೆ. ಈ ವರ್ಷದ ಪರಿಸರ ದಿನಾಚರಣೆಯ ಮುಖ್ಯಉದ್ದೇಶ ಪ್ಲಾಸ್ಟಿಕ್ ಮುಕ್ತ ಪರಿಸರ.ಪ್ಲಾಸ್ಟಿಕ್ ಅವಲಂಬನೆಯಿAದ ನಾವು ಹೊರಬರದಿದ್ದರೆಇಂತಹ ಅನಾಹುತಗಳಿಗೆ ಕೊನೆಯಿಲ್ಲ.ಹಾಗೆಯೇಅಂತರಜಲ ಕುಸಿತವನ್ನು ತಪ್ಪಿಸಬೇಕಿದೆ.ಸರಕಾರ ಬಹಳ ವರ್ಷಗಳ ಹಿಂದೆಯೇ ಮನೆಗಳ ನಿರ್ಮಾಣಕ್ಕೆಅನುಮತಿ ನೀಡುವ ಮುನ್ನ ಮಳೆಕೊಯ್ಲು ನಿರ್ಮಾಣಕಡ್ಡಾಯ ಮಾಡಿದೆ.ಆದರೆಇದನ್ನುಯಾರುಅನುಸರಿ ಸುತ್ತಿಲ್ಲ.ಅಂತರ ಜಲ ಬರಿದಾದ ಪರಿಣಾಮ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿಯೇ ನೀರಿನಕೊರತೆಉಂಟಾಲಿದೆ.ಹಾಗಾಗಿ ಅಂತರ ಜಲ ವೃದ್ದಿಗೆ ನಾವುಗಳು ಹೆಚ್ಚು ಒತ್ತು ನೀಡಬೇಕಾಗಿದೆಎಂದು ನ್ಯಾ.ನೂರುನ್ನಿಸಾ ತಿಳಿಸಿದರು.
ನೀರಿನ ಸೆಲೆಗಳಾದ ಕೆರೆ ಕಟ್ಟೆಗಳನ್ನು ರಕ್ಷಿಸಬೇಕಿದೆ. ಕೆಲವರ ಸ್ವಾರ್ಥಕ್ಕೆ ಕೆರೆಗಳು ಒತ್ತುವರಿ ತೆರವುಗೊಳಿಸದಿದ್ದರೆ, ಕೆರೆಯ ನೀರು ಸರಾಗವಾಗಿ ಹರಿಯದೆ ನಾಗರಿಕರಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ.ಇದನ್ನು ನಾಗರಿಕರುಅರ್ಥ ಮಾಡಿಕೊಂಡುಕೆರೆ, ಕುಂಟೆಗಳನ್ನು ಸಂರಕ್ಷಿಸಲು ಮುಂದಾಗಬೇಕು.ಸರಕಾರದಿAದಲೇಎಲ್ಲವನ್ನು ನಿರೀಕ್ಷೆ ಮಾಡದೆ, ಇಂತಹ ಗಿಡಗಳು ಮರವಾಗಲುಇಲ್ಲಿನ ನಾಗರಿಕರು ಅವುಗಳಿಗೆ ನೀರು ನೀಡಿ, ತಮ್ಮಜವಾಬ್ದಾರಿಯನ್ನು ಮೆರೆಯಬೇಕು. ಆಗ ಮಾತ್ರ ಪರಿಸರ ದಿನಕ್ಕೆ ಅರ್ಥ ಬರುತ್ತದೆ. ನಾಗರಿಕ ಸಮಿತಿಗಳು ಪ್ರತಿ ದಿನಗಳ ಗಿಡಗಳಿಗೆ ತಮ್ಮಕೈಲಾದಷ್ಟು ನೀರುಣಿಸಿ, ಪರಿಸರಕಾಪಾಡಲು ನೆರವಾಗಬೇಕು.ಈ ಬಾರಿಕೇಂದ್ರ ಸರಕಾರ ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯನ್ನು ಒಳಗೊಳ್ಳಲು ತಾಯೊಂದಿರಿಗೆಒAದುಗಿಡ ಎಂಬ ಪರಿಕಲ್ಪನೆತಂದಿದೆ. ಅವರು ಸಹ ಈ ಮಹಾನ್ಕಾರ್ಯದಲ್ಲಿಕೈಜೋಡಿಸಬೇಕೆಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಪಾಲಿಕೆ ಆಯುಕ್ತರಾದ ಆಶ್ವಿಜ ಮಾತನಾಡಿ,ಇಂದುಕೇAದ್ರ ಸರಕಾರದಎರಡು ಯೋಜನೆಗಳ ಅಡಿಯಲ್ಲಿ ಪರಿಸರ ದಿನವನ್ನುಆಚರಿಸುತಿದ್ದೇವೆ.ತಾಯಿಯ ಹೆಸರಿನಲ್ಲಿಒಂದುಗಿಡ,ಇಡೀ ಭಾರತದಲ್ಲಿ ನಡೆಯುತ್ತಿದೆ. ವುಮೆನ್ ಫಾರ್ಟ್ರೀಸ್ಎಂಬುದು ಮಹತ್ವದಘೋಷಣೆಯಾಗಿದೆ.ಎಲ್ಲೆಲ್ಲಿ ಖಾಲಿ ಜಾಗವಿದೆಯೋಅಲ್ಲಿ ಗಿಡಗಳನ್ನು ನೆಟ್ಟು,ಅವುಗಳ ನಿರ್ವಹಣೆಯನ್ನು ಸ್ವ ಸಹಾಯ ಸಂಘಗಳಿಗೆ ನೀಡುವ ಈ ಯೋಜನೆ ಚಾಲ್ತಿಗೆ ಬಂದಿದೆ.ಪ್ರತಿ ೧೦೦ ಗಿಡಗಳ ನಿರ್ವಹಣೆಯನ್ನುಒಂದು ಸ್ವ ಸಹಾಯ ಗುಂಪುಗಳಿಗೆ ನೀಡಲು ನಿರ್ಧರಿಸಲಾಗಿದೆ. ಈ ಬಾರಿತುಮಕೂರು ಮಹಾನಗರಪಾಲಿಕೆಯಿಂದಅಮೃತಯೋಜನೆಯಡಿ ಸುಮಾರು ೬೦ ಪಾರ್ಕುಗಳ ಆಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಪಾರ್ಕುಗಳಲ್ಲಿ ಗಿಡಗಳ ಜೊತೆಗೆ, ಮಕ್ಕಳ ಆಟಿಕೆ, ವಾರ್ಕಿಂಗ್ ಪಾಥ್ ಸೇರಿದಂತೆ ಹಲವು ಮನರಂಜನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಹಾಲಿ ಇರುವ ೨೫೦ ಪಾರ್ಕುಗಳ ನಿರ್ವಹಣೆ ಸಹ ಕೈಗೆತ್ತಿಕೊಳ್ಳಲಾಗಿದೆ.ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಆ ಮೂಲಕ ನಗರ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆಎಂದರು.
ನಗರದ ಪ್ರದೇಶದಲ್ಲಿ ರಸ್ತೆಗಳಲ್ಲಿ ಹೆಚ್ಚು ವಾಹನಗಳ ಓಡಾಟದಿಂದ ಶಾಖೆ ಹೆಚ್ಚಾಗಿ ಹಲವಾರುರೀತಿಯ ತೊಂದರೆಗಳು ಉಂಟಾಗುತ್ತಿವೆ. ಇದನ್ನುತಪ್ಪಿಸಲುರಸ್ತೆ ಬದಿಯಲ್ಲಿಯೂಗಿಡ, ಮರಗಳನ್ನು ನೆಡಲುಅಗತ್ಯಕ್ರಮ ಕೈಗೊಳ್ಳಲಾಗಿದೆ.ಕೆರೆಗಳ ಸಂರಕ್ಷಣೆಗೆಒತ್ತು ನೀಡಿ, ಅಮೃತಯೋಜನೆಯಡಿ ೫ ಕೆರೆಗಳನ್ನು ಅಭಿವೃದ್ದಿಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗಾರೆ ನರಸಯ್ಯನಕಟ್ಟೆಯಅಭಿವೃದ್ದಿಯನ್ನು ಸಹ ಚನೈ ಮೂಲದ ಸಂಸ್ಥೆಯೊAದಕ್ಕೆಗುತ್ತಿಗೆ ನೀಡಲಾಗಿದೆ. ಅವರು ಮೊದಲುಕೆರೆಯ ಬೌಂಡರಿ ಫಿಕ್ಸ್ ಮಾಡಿ, ನೀರಿನ ಹರಿವುಗಳನ್ನು ಸರಿ ಮಾಡಿ, ಒತ್ತುವರಿಯಾಗಿದ್ದರೆತೆರವು ಮಾಡಿ, ಕೊಳಕಿಉ ನೀರು ಸೇರದಂತೆ ಮಾಡಿ,ಕೆರೆಯನ್ನುಅಭಿವೃದ್ದಿ ಪಡಿಸಲಿದ್ದಾರೆ.ಪರಿಸರ ಸಂರಕ್ಷಣೆ ಕೇವಲ ಮಹಾನಗರಪಾಲಿಕೆಜವಾಬ್ದಾರಿಯಷ್ಟೇಅಲ್ಲ. ಎಲ್ಲ ನಾಗರಿಕರದ್ದುಆಗಿದೆ.ನಮ್ಮತಾತ, ಮುತ್ತಾತ ಹಾಕಿದ ಮರಗಳು ಇನ್ನೂ ಇವೆ.ಹಾಗಾಗಿ ನಾವು ಇಲ್ಲದಿದ್ದರೂ ಮರಗಳ ನಮ್ಮ ಹೆಸರು ಹೇಳುತ್ತವೆ. ಈ ನಿಟ್ಟಿನಲ್ಲಿ ನಾಗರಿಕರು ಮಹಾನಗರಪಾಲಿಕೆಯೊಂದಿಗೆಕೈಜೋಡಿಸಬೇಕೆAದುಆಯುಕ್ತರಾದ ಆಶ್ವಿಜ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯಆರೋಗ್ಯಾಧಿಕಾರಿಯೋಗೀಶ್,ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿರವಿಚಂದ್ರ, ಉಪಪರಿಸರಅಧಿಕಾರಿ ಪನ್ನಗ,ಪಾಲಿಕೆಯ ವ್ಯವಸ್ಥಾಪಕರಾದ ಸುನೀತ,ಪಾಲಿಕೆ ಪರಿಸರಇಂಜಿನಿಯರ್ ಪೂರ್ಣೀಮ, ಟೌನ್ ಪ್ಲಾನ್ಅಧಿಕಾರಿ ಸಂಗಪ್ಪ, ರುದ್ರಮುನಿ, ಪಾಲಿಕೆಯಆರೋಗ ನಿರೀಕ್ಷಕರಾದರುದ್ರೇಶ್, ಆನಂದ್, ಜಯಣ್ಣ, ರಂಗಪ್ಪ,ವಿವಿಧಸ್ವ ಸಹಾಯ ಸಂಘಗಳ ಮಹಿಳೆಯರು,ಸಪ್ತಗಿರಿ ಬಡಾವಣೆಯ ನಾಗರಿಕರು,ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.