ತುಮಕೂರು: ಹೇಮಾವತಿ ನೀರಾವರಿ ಹೋರಾಟದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾ ಗಿದ್ದ ರೈತರನ್ನು ಬಿಡುಗಡೆಗೊಳಿಸಿ ಸ್ವಾಗತಿಸಿ ಕರೆ ತಂದ ಶಾಸಕ ಬಿ. ಸುರೇಶ್ ಗೌಡ.
ಭೋವಿಪಾಳ್ಯ ಜೈಲುಖಾನೆ ಬಳಿ ಶಾಸಕರಾದ ಬಿ. ಸುರೇಶಗೌಡರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕ ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ರೈತರು ಸೇರಿ ಬಂದನಕ್ಕೆ ಒಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚೇತನ್, ರೈತ ಆನಂದ್, ಗುಬ್ಬಿಯ ಚೇತನ್ ಹಾಗೂ ಲೋಕೇಶ್ ಅವರನ್ನು ಬಿಡುಗಡೆಗೊಳಿಸಿ ಜೈಲಿನಿಂದ ಕರೆ ತಂದರು.
ಈ ಸಂದರ್ಭದಲ್ಲಿ ತುಮಕೂರು ಬಂದಿಖಾನೆ ಗೇಟ್ ಬಳಿ ಮಾತನಾಡಿದ ಶಾಸಕ ಬಿ ಸುರೇಶ್ ಗೌಡ, ಬಂಧನಕ್ಕೆ ಒಳಗಾಗಿದ್ದ ನಾಲ್ಕು ಜನರು ಯಾವುದೇ ಆರೋಪಕ್ಕೆ ಒಳಗಾಗಿ ಬಂಧನಕ್ಕೆ ಒಳಗಾಗಿದ್ದು ಅಲ್ಲ. ಜಿಲ್ಲೆಯ ಅಸ್ತಿತ್ವಕ್ಕಾಗಿ ಹಾಗೂ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಜಿಲ್ಲೆಯ ರೈತರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಬಂಧನಕ್ಕೆ ಒಳಗಾಗಿದ್ದ ತಾವೆಲ್ಲರೂ ಅಭಿನಂದನಾರ್ಹರು. ತಾವ್ಯಾರು ಮಾನಸಿಕವಾಗಿ ಕುಗ್ಗುವಂತ ಪ್ರಶ್ನೆಯಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ತುಮ ಕೂರು ಜಿಲ್ಲಾಡಳಿತ ಅಮಾಯಕ ರೈತರನ್ನು ನಾಗರಿಕರನ್ನು ಹಾಗೂ ಹೋರಾಟಗಾರರನ್ನು ಬಂಧಿಸಿ ನಮ್ಮನ್ನು ಹತ್ತಿಕ್ಕುವ ಪ್ರಯತ್ನ ಮಾಡಿ ದರೆ ಸುಮ್ಮನೆ ಕೂರುವುದಿಲ್ಲ ಮುಂದಿನ ಹೋರಾಟ ಉಗ್ರ ಸ್ವರೂಪದಲ್ಲಿ ಕೂಡಿರುತ್ತದೆ ಲಾಠಿಚಾರ್ಜ್. ಗೋಲಿಬಾರ್ ಗೆಲ್ಲ ಹೆದರುವುದು ಇಲ್ಲ ಜಗ್ಗುವುದಿಲ್ಲ ಬಗ್ಗುವುದಿಲ್ಲ ಎಂದು ಬಿಜೆಪಿ ಶಾಸಕ ಬಿ ಸುರೇಶಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಜೈಲ್ ಬರೋ ಮಾಡಲು ಸಿದ್ದ ಬಿಟ್ಟರೆ ಪ್ರಾಣ ಕೊಟ್ಟೆವಾದರೂ ಸರಿ ಎಕ್ಸ್ಪ್ರೆಸ್ ಪೈಪ್ ಲೈನ್ ಮೂಲಕ ನೀರು ಕೊಡಲು ಸಾಧ್ಯವೇ ಇಲ್ಲ ಎಂದು ಸುರೇಶ್ ಗೌಡ ಕಡ್ಡಿ ತುಂಡಾದAತೆ ಮಾತನಾಡಿದರು.
ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್. ಹೇಮಾವತಿ ನೀರಾವರಿ ಹೋರಾ ಟ ಸಮಿತಿಯ ಸಂಚಾಲಕ ಪ್ರಭಾಕರ್.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಗೌಡ. ಶಂಭು ಹನುಮಂತರಾಜು. ಧನುಷ್ ಪಾಳೇಗಾರ ಮತ್ತಿತರ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
(Visited 1 times, 1 visits today)