ತುಮಕೂರು: ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾನವೀಯತೆ ಮೆರೆದಿದ್ದಾರೆ.
ತಾನೇ ಕೈಯಾರೇ ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿದ ಶಾಸಕ ರಂಗನಾಥ್ ಮಾನವೀಯತೆ ಮೆರೆದರು. ಬುದ್ದಿಮಾಂದ್ಯ ವ್ಯಕ್ತಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಚಿಕಿತ್ಸೆ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುರುವೇಕೆರೆ ತಾಲೂಕಿನ ಬಾಣಸಂದ್ರ ಗ್ರಾಮದ ಪ್ರಭಾಕರ್ ಎಂಬ ವ್ಯಕ್ತಿ ಬುದ್ಧಿಮಾಂದ್ಯನಾಗಿದ್ದು, ಹಲವು ದಿನಗಳಿಂದ ಕುಣಿಗಲ್ ತಾಲ್ಲೂಕು ಆಸ್ಪತ್ರೆ ಬಳಿ ಅನಾರೋಗ್ಯಕ್ಕೆ ಒಳಗಾಗಿ ಮಲಗುತ್ತಿದ್ದ. ಆಸ್ಪತ್ರೆಗೆ ಭೇಟಿ ಕೊಟ್ಟ ವೇಳೆ ಈತನನ್ನ ಕಂಡ ಕುಣಿಗಲ್ ಶಾಸಕ ರಂಗನಾಥ್. ಕೂಡಲೇ ಆತನ ಬಳಿ ಹೋಗಿ ಆತನಿಗೆ ಸ್ನಾನ ಮಾಡಿಸಿ, ಹೊಸ ಪ್ಯಾಂಟ್ ಶರ್ಟ್ ತೊಡಿಸಿ, ಚಿಕಿತ್ಸೆ ಕೊಡಿಸಿದರು.
ಬಳಿಕ ಆತನನ್ನ ಅನಾಥಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದರು. ಶಾಸಕ ಡಾ.ರಂಗನಾಥ್ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
(Visited 1 times, 1 visits today)